ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಅರಿಸಿನ ಮಂಡಳಿ: ಪ್ರಾದೇಶಿಕ ಕೇಂದ್ರ ತೆರೆಯಲು ಕೆ. ಶಿವಕುಮಾರ್ ಒತ್ತಾಯ

Published : 9 ಜನವರಿ 2026, 2:15 IST
Last Updated : 9 ಜನವರಿ 2026, 2:15 IST
ಫಾಲೋ ಮಾಡಿ
Comments
ಚಾಮರಾಜನಗರದಲ್ಲಿ ಅರಿಸಿನ ಮಂಡಳಿ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಜಾಗ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಇಲ್ಲಿ ಕೇಂದ್ರದ ಜೊತೆಗೆ ₹50 ಕೋಟಿ ಪ್ಯಾಕೇಜ್‌ ಘೋಷಿಸಬೇಕು
ಕೆ. ಶಿವಕುಮಾರ್ ವಿಧಾನಪರಿಷತ್‌ ಸದಸ್ಯ
ಉತ್ಪಾದನೆ ಬಳಕೆಯಲ್ಲೂ ಭಾರತ ನಂ 1
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ್‌ ‘ಭಾರತವು ಸಾಂಬಾರು ಬೆಳೆಗಳ ವಿಸ್ತೀರ್ಣ ಉತ್ಪಾದನೆ ರಫ್ತು ಹಾಗೂ ಬಳಕೆಯಲ್ಲೂ ಅಗ್ರಸ್ಥಾನದಲ್ಲಿದೆ. ಜಾಗತಿಕವಾಗಿ ಒಟ್ಟು ಉತ್ಪಾದನೆಯ ಶೇ 75-80 ಸಾಂಬಾರು ಪದಾರ್ಥ ಇಲ್ಲಿಂದಲೇ ತಯಾರಾಗುತ್ತದೆ. ಇಲ್ಲಿನ 47 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದು 1.7 ಕೋಟಿ ಟನ್ ಉತ್ಪಾದನೆ ಇದೆ. ವಾರ್ಷಿಕ ₹40 ಸಾವಿರ ಕೋಟಿಯಷ್ಟು ಮೌಲ್ಯದ ಉತ್ಪನ್ನ ರಫ್ತಾಗುತ್ತಿದೆ’ ಎಂದು ವಿವರ ನೀಡಿದರು. ‘ಕರ್ನಾಟಕದಲ್ಲಿ 3.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 8.63 ಲಕ್ಷ ಟನ್‌ನಷ್ಟು ಉತ್ಪಾದನೆ ಆಗುತ್ತಿದೆ. ಇದರಲ್ಲಿ ಸುಮಾರು 1.3 ಲಕ್ಷ ಟನ್‌ನಷ್ಟು ರಫ್ತಾಗುತ್ತಿದೆ. ನಮ್ಮಲ್ಲಿ ರೋಗಬಾಧೆ ಜೊತೆಗೆ ಉತ್ಪಾದಕತೆಯ ಪ್ರಮಾಣ ಕಡಿಮೆ ಇದ್ದು ಸುಧಾರಣ ಕ್ರಮಗಳ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT