<p><strong>ಮೈಸೂರು</strong>: ‘ಮುಡಾ ಆವರಣ ಸೇರಿದಂತೆ ಪ್ರಾಧಿಕಾರದ ವಿವಿಧ ಶಾಖೆಗಳಲ್ಲಿ ಜನರು ಕಚೇರಿ ಕೆಲಸಕ್ಕಾಗಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಆಡಳಿತದಲ್ಲಿ ಸುಧಾರಣೆ ತರುವೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಮಂಗಳವಾರ ಇಲ್ಲಿ ತಿಳಿಸಿದರು.</p>.<p>‘ಶೀಘ್ರದಲ್ಲೇ ಆನ್ಲೈನ್ನಲ್ಲಿ ಶುಲ್ಕ–ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೊಳಿಸುವ ಜೊತೆಗೆ, ಖಾತೆ ಮಾಡಿಕೊಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು. ಏಕಗವಾಕ್ಷಿ ಪದ್ಧತಿಯನ್ನೂ ಪರಿಚಯಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಕ್ಷೆ ಅನುಮೋದನೆಗಾಗಿ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಎರಡು ಗಂಟೆಗಳೊಳಗಾಗಿ ನಕ್ಷೆ ಫಲಾನುಭವಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ’ ಎಂದು ಅವರು ತಿಳಿಸಿದರು.</p>.<p>‘1990ರ ದಶಕದಿಂದಲೂ ನಿವೇಶನಕ್ಕಾಗಿ ಚಾತಕ ಹಕ್ಕಿಗಳಂತೆ ಕಾದಿರುವವರು ಇದ್ದಾರೆ. ರೈತರ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ, ಇವರಿಗೆ ನಿವೇಶನ ನೀಡಲು ಮೊದಲ ಆದ್ಯತೆ ಕೊಡುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>‘ಮುಡಾ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ರೈತರಿಗೆ ಇನ್ನೂ ₹ 247 ಕೋಟಿ ಬಾಕಿ ಪಾವತಿಸಬೇಕಿದೆ’ ಎಂದ ರಾಜೀವ್, ‘ನಿವೇಶನ ಖರೀದಿಗೂ ಮುನ್ನ ಒಮ್ಮೆ ಮುಡಾದಲ್ಲಿ ದಾಖಲೆ ಪರಿಶೀಲಿಸಿಕೊಳ್ಳಿ. ವಂಚನೆಗೊಳಗಾಗುವುದನ್ನು ತಪ್ಪಿಸಿಕೊಳ್ಳಿ’ ಎಂದು ನಿವೇಶನ ಖರೀದಿದಾರರಿಗೆ ಮನವಿ ಮಾಡಿದರು.</p>.<p>‘ಮುಡಾ ಹೆಸರಿನಲ್ಲಿ ವಂಚಿಸುವ ವಂಚಕರನ್ನು ಶಿಕ್ಷೆಗೊಳಪಡಿಸಲು ಕ್ರಮ ತೆಗೆದುಕೊಳ್ಳುವೆ. ಅತಿಕ್ರಮಣದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡುತ್ತೇವೆ. ಪ್ರಾಧಿಕಾರದ ಆಸ್ತಿ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p><strong>ಪ್ರಮುಖ ನಿರ್ಧಾರಗಳು</strong></p>.<p>*ಕೋವಿಡ್ ವಾರಿಯರ್ಸ್ ಚಿಕಿತ್ಸೆಗೆ ₹ 90 ಲಕ್ಷ ಅನುದಾನ</p>.<p>*ಮೈಸೂರು ದಸರಾಗೆ ₹ 5 ಕೋಟಿ ಅನುದಾನ</p>.<p>*5 ಸಾವಿರ ಗುಂಪು ಮನೆ ನಿರ್ಮಾಣ ಯೋಜನೆ</p>.<p>*ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ</p>.<p>*ಬಲ್ಲಹಳ್ಳಿ ಯೋಜನೆಗೆ ತ್ವರಿತಗತಿ</p>.<p>*ಒಂದೇ ಕಂತಿನಲ್ಲಿ ಬಡ್ಡಿಸಹಿತ ಶಾಸನಬದ್ಧ ಪರಿಹಾರ ನೀಡಿಕೆ</p>.<p>*ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ 33 ಗ್ರಾಮಗಳು</p>.<p>*ಗ್ರೀನ್ ಫೆನ್ಸಿಂಗ್ ಅಳವಡಿಕೆ ಕಡ್ಡಾಯ</p>.<p>*ಏಕರೂಪ ನಿಯಮ ಅಳವಡಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಮುಡಾ ಆವರಣ ಸೇರಿದಂತೆ ಪ್ರಾಧಿಕಾರದ ವಿವಿಧ ಶಾಖೆಗಳಲ್ಲಿ ಜನರು ಕಚೇರಿ ಕೆಲಸಕ್ಕಾಗಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಆಡಳಿತದಲ್ಲಿ ಸುಧಾರಣೆ ತರುವೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಮಂಗಳವಾರ ಇಲ್ಲಿ ತಿಳಿಸಿದರು.</p>.<p>‘ಶೀಘ್ರದಲ್ಲೇ ಆನ್ಲೈನ್ನಲ್ಲಿ ಶುಲ್ಕ–ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೊಳಿಸುವ ಜೊತೆಗೆ, ಖಾತೆ ಮಾಡಿಕೊಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು. ಏಕಗವಾಕ್ಷಿ ಪದ್ಧತಿಯನ್ನೂ ಪರಿಚಯಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಕ್ಷೆ ಅನುಮೋದನೆಗಾಗಿ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಎರಡು ಗಂಟೆಗಳೊಳಗಾಗಿ ನಕ್ಷೆ ಫಲಾನುಭವಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ’ ಎಂದು ಅವರು ತಿಳಿಸಿದರು.</p>.<p>‘1990ರ ದಶಕದಿಂದಲೂ ನಿವೇಶನಕ್ಕಾಗಿ ಚಾತಕ ಹಕ್ಕಿಗಳಂತೆ ಕಾದಿರುವವರು ಇದ್ದಾರೆ. ರೈತರ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ, ಇವರಿಗೆ ನಿವೇಶನ ನೀಡಲು ಮೊದಲ ಆದ್ಯತೆ ಕೊಡುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<p>‘ಮುಡಾ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ರೈತರಿಗೆ ಇನ್ನೂ ₹ 247 ಕೋಟಿ ಬಾಕಿ ಪಾವತಿಸಬೇಕಿದೆ’ ಎಂದ ರಾಜೀವ್, ‘ನಿವೇಶನ ಖರೀದಿಗೂ ಮುನ್ನ ಒಮ್ಮೆ ಮುಡಾದಲ್ಲಿ ದಾಖಲೆ ಪರಿಶೀಲಿಸಿಕೊಳ್ಳಿ. ವಂಚನೆಗೊಳಗಾಗುವುದನ್ನು ತಪ್ಪಿಸಿಕೊಳ್ಳಿ’ ಎಂದು ನಿವೇಶನ ಖರೀದಿದಾರರಿಗೆ ಮನವಿ ಮಾಡಿದರು.</p>.<p>‘ಮುಡಾ ಹೆಸರಿನಲ್ಲಿ ವಂಚಿಸುವ ವಂಚಕರನ್ನು ಶಿಕ್ಷೆಗೊಳಪಡಿಸಲು ಕ್ರಮ ತೆಗೆದುಕೊಳ್ಳುವೆ. ಅತಿಕ್ರಮಣದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡುತ್ತೇವೆ. ಪ್ರಾಧಿಕಾರದ ಆಸ್ತಿ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p><strong>ಪ್ರಮುಖ ನಿರ್ಧಾರಗಳು</strong></p>.<p>*ಕೋವಿಡ್ ವಾರಿಯರ್ಸ್ ಚಿಕಿತ್ಸೆಗೆ ₹ 90 ಲಕ್ಷ ಅನುದಾನ</p>.<p>*ಮೈಸೂರು ದಸರಾಗೆ ₹ 5 ಕೋಟಿ ಅನುದಾನ</p>.<p>*5 ಸಾವಿರ ಗುಂಪು ಮನೆ ನಿರ್ಮಾಣ ಯೋಜನೆ</p>.<p>*ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ</p>.<p>*ಬಲ್ಲಹಳ್ಳಿ ಯೋಜನೆಗೆ ತ್ವರಿತಗತಿ</p>.<p>*ಒಂದೇ ಕಂತಿನಲ್ಲಿ ಬಡ್ಡಿಸಹಿತ ಶಾಸನಬದ್ಧ ಪರಿಹಾರ ನೀಡಿಕೆ</p>.<p>*ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ 33 ಗ್ರಾಮಗಳು</p>.<p>*ಗ್ರೀನ್ ಫೆನ್ಸಿಂಗ್ ಅಳವಡಿಕೆ ಕಡ್ಡಾಯ</p>.<p>*ಏಕರೂಪ ನಿಯಮ ಅಳವಡಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>