<p><strong>ಮೈಸೂರು</strong>: ತಾಲ್ಲೂಕಿನ ವರುಣ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಗಂಗರು– ಹೊಯ್ಸಳರ ಕಾಲದ ಮೂರು ಜೈನ ವಿಗ್ರಹಗಳು ಪತ್ತೆಯಾಗಿದ್ದು, ಅವನ್ನು ವೆಲ್ಲಿಂಗ್ಟನ್ ಬಂಗಲೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.</p>.<p>ಗ್ರಾಮದ ಅಂಬೇಡ್ಕರ್ ಬೀದಿಯಲ್ಲಿ ಡಿ.26ರ ಮಂಗಳವಾರ ಜೆಸಿಬಿಯಲ್ಲಿ ಚರಂಡಿ ನಿರ್ಮಿಸಲು ಕಾಮಗಾರಿ ನಡೆಸಿದ್ದಾಗ ಕೂಷ್ಮಾಂಡಿನಿ, ಜೈನ ತೀರ್ಥಂಕರರ ಎರಡು ಮೂರ್ತಿಗಳು ಪತ್ತೆಯಾದವು. ಈ ವೇಳೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಸ್ಥಳೀಯರು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯವರಿಗೆ ವಿಷಯ ಮುಟ್ಟಿಸಿದ್ದರು.</p>.<p>ಇಲಾಖೆಯ ಉಪನಿರ್ದೇಶಕಿ ಸಿ.ಎನ್.ಮಂಜುಳಾ, ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಸಂಶೋಧಕ ಟಿ.ಎ.ಶಶಿಧರ್, ಜೈನ ಸಮುದಾಯದ ಮುಖಂಡರಾದ ಪ್ರಸನ್ನಕುಮಾರ್, ವಿನೋದ್ ಜೈನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.</p>.<p>‘ಭಗ್ನ ಜೈನ ಮೂರ್ತಿಗಳಾಗಿದ್ದು, ಕೂಶ್ಮಾಂಡಿನಿ ದೇವಿಯ ಕೈ ಮುರಿದಿದೆ. ಮತ್ತೊಬ್ಬ ಜಿನನ ತಲೆ ಭಾಗ ಮಾತ್ರ ಸಿಕ್ಕಿದೆ. ದೇಹದ ಭಾಗವನ್ನು ಹುಡುಕಲಾಯಿತಾದರೂ ಸಿಗಲಿಲ್ಲ. ಮತ್ತೊಂದು ಜಿನ ಮೂರ್ತಿಯನ್ನು ಚರಂಡಿ ತೆಗೆಯುವಾಗ ಜೆಸಿಬಿಯಿಂದ ಹಾನಿಯಾಗಿದೆ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಗಂಗ– ಹೊಯ್ಸಳರ ಕಾಲದಲ್ಲಿ ಗ್ರಾಮದಲ್ಲಿ ಜೈನ ದೇವಾಲಯಗಳಿದ್ದವು. ವರುಣ ಕೆರೆಯ ಕೆಳ ಭಾಗದಲ್ಲಿ ಉತ್ಖನನ ಮಾಡಿದರೆ ದೇಗುಲಗಳು ಸಿಗಬಹುದು. ಸಿಕ್ಕ ಹಲವು ಮೂರ್ತಿಗಳನ್ನು ಗ್ರಾಮಸ್ಥರು ದೇವಾಲಯಗಳಲ್ಲಿ ಸ್ಥಾಪಿಸಿದ್ದಾರೆ’ ಎಂದರು.</p>.<p>‘ಗಂಗರ ಕಾಲದಲ್ಲಿ ತಲಕಾಡು, ಹೆಮ್ಮಿಗೆ, ಮೂಗೂರು, ತಿ.ನರಸೀಪುರ, ವರಕೋಡು, ವರುಣ, ವಾಜಮಂಗಲ, ಮೈಸೂರು, ಹೆಮ್ಮನಹಳ್ಳಿ, ಕುಮಾರಬೀಡು ಮುಖ್ಯ ಜೈನ ಗ್ರಾಮಗಳಾಗಿದ್ದವು. ಶ್ರವಣಬೆಳಗೊಳಕ್ಕೆ ತೆರಳಲು ಇದೇ ಮಾರ್ಗ ಬಳಸುತ್ತಿದ್ದರು ಎನ್ನಲಾಗಿದೆ’ ಎಂದು ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ತಾಲ್ಲೂಕಿನ ವರುಣ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಗಂಗರು– ಹೊಯ್ಸಳರ ಕಾಲದ ಮೂರು ಜೈನ ವಿಗ್ರಹಗಳು ಪತ್ತೆಯಾಗಿದ್ದು, ಅವನ್ನು ವೆಲ್ಲಿಂಗ್ಟನ್ ಬಂಗಲೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.</p>.<p>ಗ್ರಾಮದ ಅಂಬೇಡ್ಕರ್ ಬೀದಿಯಲ್ಲಿ ಡಿ.26ರ ಮಂಗಳವಾರ ಜೆಸಿಬಿಯಲ್ಲಿ ಚರಂಡಿ ನಿರ್ಮಿಸಲು ಕಾಮಗಾರಿ ನಡೆಸಿದ್ದಾಗ ಕೂಷ್ಮಾಂಡಿನಿ, ಜೈನ ತೀರ್ಥಂಕರರ ಎರಡು ಮೂರ್ತಿಗಳು ಪತ್ತೆಯಾದವು. ಈ ವೇಳೆ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಸ್ಥಳೀಯರು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯವರಿಗೆ ವಿಷಯ ಮುಟ್ಟಿಸಿದ್ದರು.</p>.<p>ಇಲಾಖೆಯ ಉಪನಿರ್ದೇಶಕಿ ಸಿ.ಎನ್.ಮಂಜುಳಾ, ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಸಂಶೋಧಕ ಟಿ.ಎ.ಶಶಿಧರ್, ಜೈನ ಸಮುದಾಯದ ಮುಖಂಡರಾದ ಪ್ರಸನ್ನಕುಮಾರ್, ವಿನೋದ್ ಜೈನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.</p>.<p>‘ಭಗ್ನ ಜೈನ ಮೂರ್ತಿಗಳಾಗಿದ್ದು, ಕೂಶ್ಮಾಂಡಿನಿ ದೇವಿಯ ಕೈ ಮುರಿದಿದೆ. ಮತ್ತೊಬ್ಬ ಜಿನನ ತಲೆ ಭಾಗ ಮಾತ್ರ ಸಿಕ್ಕಿದೆ. ದೇಹದ ಭಾಗವನ್ನು ಹುಡುಕಲಾಯಿತಾದರೂ ಸಿಗಲಿಲ್ಲ. ಮತ್ತೊಂದು ಜಿನ ಮೂರ್ತಿಯನ್ನು ಚರಂಡಿ ತೆಗೆಯುವಾಗ ಜೆಸಿಬಿಯಿಂದ ಹಾನಿಯಾಗಿದೆ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಗಂಗ– ಹೊಯ್ಸಳರ ಕಾಲದಲ್ಲಿ ಗ್ರಾಮದಲ್ಲಿ ಜೈನ ದೇವಾಲಯಗಳಿದ್ದವು. ವರುಣ ಕೆರೆಯ ಕೆಳ ಭಾಗದಲ್ಲಿ ಉತ್ಖನನ ಮಾಡಿದರೆ ದೇಗುಲಗಳು ಸಿಗಬಹುದು. ಸಿಕ್ಕ ಹಲವು ಮೂರ್ತಿಗಳನ್ನು ಗ್ರಾಮಸ್ಥರು ದೇವಾಲಯಗಳಲ್ಲಿ ಸ್ಥಾಪಿಸಿದ್ದಾರೆ’ ಎಂದರು.</p>.<p>‘ಗಂಗರ ಕಾಲದಲ್ಲಿ ತಲಕಾಡು, ಹೆಮ್ಮಿಗೆ, ಮೂಗೂರು, ತಿ.ನರಸೀಪುರ, ವರಕೋಡು, ವರುಣ, ವಾಜಮಂಗಲ, ಮೈಸೂರು, ಹೆಮ್ಮನಹಳ್ಳಿ, ಕುಮಾರಬೀಡು ಮುಖ್ಯ ಜೈನ ಗ್ರಾಮಗಳಾಗಿದ್ದವು. ಶ್ರವಣಬೆಳಗೊಳಕ್ಕೆ ತೆರಳಲು ಇದೇ ಮಾರ್ಗ ಬಳಸುತ್ತಿದ್ದರು ಎನ್ನಲಾಗಿದೆ’ ಎಂದು ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>