<p><strong>ಮೈಸೂರು:</strong> ‘ಯಾವೊಬ್ಬ ವ್ಯಕ್ತಿಯೂ ಹೊಟ್ಟೆಪಾಡಿಗಾಗಿ ಸರ್ಕಾರಿ ನೌಕರಿಯನ್ನೇ ಅವಲಂಬಿಸಬೇಕಿಲ್ಲ’ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.</p>.<p>ಸಾಹಿತ್ಯ ಅಕಾಡೆಮಿ ಬುಧವಾರ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣದಲ್ಲಿ ‘ಅಡಿಗರ ಕಾವ್ಯ: ಹೊಸ ನೋಟ’ ಕುರಿತ ವಿಷಯದಲ್ಲಿ ಮಾತನಾಡಿದ ಅವರು, ‘ಹೊಟ್ಟೆಪಾಡಿಗೆ ಶರೀರವಿದೆ. ಗಟ್ಟಿ ಮುಟ್ಟಾದ ಕೈ ಕಾಲುಗಳಿವೆ. ಆದ್ದರಿಂದ ಸರ್ಕಾರಿ ನೌಕರಿಯೇ ಬೇಕಿಲ್ಲ. ಯಾವ ಪ್ರಾಣಿಯೂ ಸರ್ಕಾರಿ ಕೆಲಸವನ್ನು ನಂಬಿಕೊಂಡಿಲ್ಲ’ ಎಂದರು.</p>.<p>‘ಶಬರಿಮಲೆಗೆ ಹೋಗಲು ಸುಪ್ರೀಂಕೋರ್ಟ್ಗೆ ಹೋಗಬೇಕೆ ? ದೇವರು ಎಲ್ಲೆಡೆ ಇದ್ದಾನೆ. ನಾವು ದೇವಸ್ಥಾನಕ್ಕೆ ಬರಲ್ಲ ಎಂದು ಪ್ರತಿಜ್ಞೆ ಮಾಡಿದರೆ ಅರ್ಧ ಸಮಸ್ಯೆಯೇ ಮುಗಿದಂತೆ’ ಎಂದು ಬೋರಲಿಂಗಯ್ಯ ವ್ಯಾಖ್ಯಾನಿಸಿದರು.</p>.<p>‘ಕಾಲಕಾಲಕ್ಕೆ ಮಹಾಪುರುಷರು ಜನಿಸುತ್ತಾರೆ. ಮಹಾತ್ಮ ಗಾಂಧಿಯೂ ಮಹಾಪುರುಷ. ಕಷ್ಟ ಶಾಶ್ವತವಲ್ಲ. ಸುಖ ಶಾಶ್ವತವಾದುದು. ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಕಷ್ಟಕ್ಕೂ, ಪರಿಹಾರವಿರಲಿದೆ’ ಎಂದು ಹೇಳಿದರು.</p>.<p>‘ಶೃಂಗಾರದ ಪರಿಭಾಷೆಯಲ್ಲಿ ಅಧ್ಯಾತ್ಮ ಹೇಳಿದವರು, ಕನ್ನಡ ಭಾಷೆಗೆ ಸಂಸ್ಕೃತ ಲಯ ಒದಗಿಸಿದವರು ಅಡಿಗರು’ ಎಂದು ಬಣ್ಣಿಸಿದ ಬೋರಲಿಂಗಯ್ಯ, ‘ಅಡಿಗರ ಕಾವ್ಯಗಳ ಕುರಿತು ಮಾಸ್ತಿ, ಕೆ.ಎಸ್.ನ ನಡೆಸಿದ ವಿಮರ್ಶೆಯೂ ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟರು.</p>.<p>‘ಅಡಿಗರ ಕಾವ್ಯದಲ್ಲಿ ವಿಡಂಬನೆ’ ಕುರಿತು ಕವಯತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, ‘ಅಡಿಗರ ಕಾವ್ಯ ಸಾರದ ಸ್ಥಾಯಿ ಭಾವವೇ ವಿಡಂಬನೆ. ವಾಸ್ತವವಾಗಿ ಅಡಿಗರಿಗೆ ಹಾಸ್ಯಪ್ರಜ್ಞೆಯಿಲ್ಲ. ಆದರೆ ವಿಡಂಬನೆಯನ್ನು ಅತ್ಯಂತ ಪ್ರಬಲವಾಗಿ ಬಳಸಿದ್ದಾರೆ. ಆಯುಧವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಯಾವೊಬ್ಬ ವ್ಯಕ್ತಿಯೂ ಹೊಟ್ಟೆಪಾಡಿಗಾಗಿ ಸರ್ಕಾರಿ ನೌಕರಿಯನ್ನೇ ಅವಲಂಬಿಸಬೇಕಿಲ್ಲ’ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.</p>.<p>ಸಾಹಿತ್ಯ ಅಕಾಡೆಮಿ ಬುಧವಾರ ಏರ್ಪಡಿಸಿದ್ದ ‘ಅಡಿಗರ ಕಾವ್ಯ: ಅನುಸಂಧಾನ’ ಕುರಿತ ವಿಚಾರ ಸಂಕಿರಣದಲ್ಲಿ ‘ಅಡಿಗರ ಕಾವ್ಯ: ಹೊಸ ನೋಟ’ ಕುರಿತ ವಿಷಯದಲ್ಲಿ ಮಾತನಾಡಿದ ಅವರು, ‘ಹೊಟ್ಟೆಪಾಡಿಗೆ ಶರೀರವಿದೆ. ಗಟ್ಟಿ ಮುಟ್ಟಾದ ಕೈ ಕಾಲುಗಳಿವೆ. ಆದ್ದರಿಂದ ಸರ್ಕಾರಿ ನೌಕರಿಯೇ ಬೇಕಿಲ್ಲ. ಯಾವ ಪ್ರಾಣಿಯೂ ಸರ್ಕಾರಿ ಕೆಲಸವನ್ನು ನಂಬಿಕೊಂಡಿಲ್ಲ’ ಎಂದರು.</p>.<p>‘ಶಬರಿಮಲೆಗೆ ಹೋಗಲು ಸುಪ್ರೀಂಕೋರ್ಟ್ಗೆ ಹೋಗಬೇಕೆ ? ದೇವರು ಎಲ್ಲೆಡೆ ಇದ್ದಾನೆ. ನಾವು ದೇವಸ್ಥಾನಕ್ಕೆ ಬರಲ್ಲ ಎಂದು ಪ್ರತಿಜ್ಞೆ ಮಾಡಿದರೆ ಅರ್ಧ ಸಮಸ್ಯೆಯೇ ಮುಗಿದಂತೆ’ ಎಂದು ಬೋರಲಿಂಗಯ್ಯ ವ್ಯಾಖ್ಯಾನಿಸಿದರು.</p>.<p>‘ಕಾಲಕಾಲಕ್ಕೆ ಮಹಾಪುರುಷರು ಜನಿಸುತ್ತಾರೆ. ಮಹಾತ್ಮ ಗಾಂಧಿಯೂ ಮಹಾಪುರುಷ. ಕಷ್ಟ ಶಾಶ್ವತವಲ್ಲ. ಸುಖ ಶಾಶ್ವತವಾದುದು. ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಕಷ್ಟಕ್ಕೂ, ಪರಿಹಾರವಿರಲಿದೆ’ ಎಂದು ಹೇಳಿದರು.</p>.<p>‘ಶೃಂಗಾರದ ಪರಿಭಾಷೆಯಲ್ಲಿ ಅಧ್ಯಾತ್ಮ ಹೇಳಿದವರು, ಕನ್ನಡ ಭಾಷೆಗೆ ಸಂಸ್ಕೃತ ಲಯ ಒದಗಿಸಿದವರು ಅಡಿಗರು’ ಎಂದು ಬಣ್ಣಿಸಿದ ಬೋರಲಿಂಗಯ್ಯ, ‘ಅಡಿಗರ ಕಾವ್ಯಗಳ ಕುರಿತು ಮಾಸ್ತಿ, ಕೆ.ಎಸ್.ನ ನಡೆಸಿದ ವಿಮರ್ಶೆಯೂ ಸರಿಯಿಲ್ಲ’ ಎಂದು ಅಭಿಪ್ರಾಯಪಟ್ಟರು.</p>.<p>‘ಅಡಿಗರ ಕಾವ್ಯದಲ್ಲಿ ವಿಡಂಬನೆ’ ಕುರಿತು ಕವಯತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, ‘ಅಡಿಗರ ಕಾವ್ಯ ಸಾರದ ಸ್ಥಾಯಿ ಭಾವವೇ ವಿಡಂಬನೆ. ವಾಸ್ತವವಾಗಿ ಅಡಿಗರಿಗೆ ಹಾಸ್ಯಪ್ರಜ್ಞೆಯಿಲ್ಲ. ಆದರೆ ವಿಡಂಬನೆಯನ್ನು ಅತ್ಯಂತ ಪ್ರಬಲವಾಗಿ ಬಳಸಿದ್ದಾರೆ. ಆಯುಧವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>