<p><strong>ಮೈಸೂರು</strong>: ‘ಕರ್ನಾಟಕ ರಂಗಭೂಮಿ ಇತಿಹಾಸದಲ್ಲಿ ಮೈಸೂರು ರಂಗಭೂಮಿ ಸೃಷ್ಟಿಸಿರುವ ಚರಿತ್ರೆ ದೊಡ್ಡದು’ ಎಂದು ರಂಗಸಮಾಜ ಸದಸ್ಯ ಎಚ್.ಎಸ್.ಸುರೇಶ್ ಬಾಬು ಹೇಳಿದರು.</p>.<p>ಸಂಚಲನ ಮೈಸೂರು, ರಂಗರಥ ಬೆಂಗಳೂರು ಸಹಯೋಗದಲ್ಲಿ ನಗರದ ಕಲಾಮಂದಿರದ ತಾಲೀಮ ಕೊಠಡಿಯಲ್ಲಿ ಮಂಗಳವಾರ ನಡೆದ ನಟನಾಭ್ಯಾಸ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.</p>.<p>‘ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ತನ್ನದೇ ಛಾಪು ಮೂಡಿಸುವಲ್ಲಿ ಮೈಸೂರು ರಂಗಭೂಮಿ ಯಶಸ್ವಿಯಾಗಿದೆ. ಇದನ್ನು ಪ್ರೋತ್ಸಾಹಿಸಲು ಸರ್ಕಾರ, ಅಕಾಡೆಮಿಗಳು ಅಥವಾ ಇತರೆ ಸಂಸ್ಥೆಗಳು ಪ್ರಶಸ್ತಿ ನೀಡದಿರುವುದು ವಿಷಾದನೀಯ’ ಎಂದರು.</p>.<p>ಶಿಬಿರ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಮಾತನಾಡಿ, ‘ಪಾಶ್ಚಿಮಾತ್ಯ ಪ್ರಭಾವದಿಂದ ಯುವ ಸಮೂಹವನ್ನು ದೂರ ಇರಿಸುವಲ್ಲಿ ರಂಗಭೂಮಿ ಚಟುವಟಿಕೆಗಳು ಸಹಕಾರಿ’ ಎಂದು ಹೇಳಿದರು.</p>.<p>‘ಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ಇಲಾಖೆಯೂ ಕೈ ಜೋಡಿಸುತ್ತದೆ. ಯುವ ಸಮೂಹ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. <br /><br />‘ಆಗಸ್ಟ್ 15ರವರೆಗೆ 10 ಜನರಿಗೆ ನಟನಾಭ್ಯಾಸ ಶಿಬಿರ ನಡೆಯಲಿದೆ’ ಎಂದು ಸಂಚಲನ ಮೈಸೂರು ಅಧ್ಯಕ್ಷ ದೀಪಕ್ ಮೈಸೂರು ಮಾಹಿತಿ ನೀಡಿದರು.</p>.<p>ನಿರ್ದೇಶಕ ಆಸಿಫ್ ಕ್ಷತ್ರಿಯ, ನಟಿ ಶ್ವೇತಾ ಶ್ರೀನಿವಾಸ್, ಗುರುರಾಜ್ ತಲಕಾಡು, ವಿನೋದ್, ಗಾಯಕಿ ಸಿಂಚನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕರ್ನಾಟಕ ರಂಗಭೂಮಿ ಇತಿಹಾಸದಲ್ಲಿ ಮೈಸೂರು ರಂಗಭೂಮಿ ಸೃಷ್ಟಿಸಿರುವ ಚರಿತ್ರೆ ದೊಡ್ಡದು’ ಎಂದು ರಂಗಸಮಾಜ ಸದಸ್ಯ ಎಚ್.ಎಸ್.ಸುರೇಶ್ ಬಾಬು ಹೇಳಿದರು.</p>.<p>ಸಂಚಲನ ಮೈಸೂರು, ರಂಗರಥ ಬೆಂಗಳೂರು ಸಹಯೋಗದಲ್ಲಿ ನಗರದ ಕಲಾಮಂದಿರದ ತಾಲೀಮ ಕೊಠಡಿಯಲ್ಲಿ ಮಂಗಳವಾರ ನಡೆದ ನಟನಾಭ್ಯಾಸ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.</p>.<p>‘ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ತನ್ನದೇ ಛಾಪು ಮೂಡಿಸುವಲ್ಲಿ ಮೈಸೂರು ರಂಗಭೂಮಿ ಯಶಸ್ವಿಯಾಗಿದೆ. ಇದನ್ನು ಪ್ರೋತ್ಸಾಹಿಸಲು ಸರ್ಕಾರ, ಅಕಾಡೆಮಿಗಳು ಅಥವಾ ಇತರೆ ಸಂಸ್ಥೆಗಳು ಪ್ರಶಸ್ತಿ ನೀಡದಿರುವುದು ವಿಷಾದನೀಯ’ ಎಂದರು.</p>.<p>ಶಿಬಿರ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಮಾತನಾಡಿ, ‘ಪಾಶ್ಚಿಮಾತ್ಯ ಪ್ರಭಾವದಿಂದ ಯುವ ಸಮೂಹವನ್ನು ದೂರ ಇರಿಸುವಲ್ಲಿ ರಂಗಭೂಮಿ ಚಟುವಟಿಕೆಗಳು ಸಹಕಾರಿ’ ಎಂದು ಹೇಳಿದರು.</p>.<p>‘ಜನರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯಾಗಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇದಕ್ಕೆ ಇಲಾಖೆಯೂ ಕೈ ಜೋಡಿಸುತ್ತದೆ. ಯುವ ಸಮೂಹ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. <br /><br />‘ಆಗಸ್ಟ್ 15ರವರೆಗೆ 10 ಜನರಿಗೆ ನಟನಾಭ್ಯಾಸ ಶಿಬಿರ ನಡೆಯಲಿದೆ’ ಎಂದು ಸಂಚಲನ ಮೈಸೂರು ಅಧ್ಯಕ್ಷ ದೀಪಕ್ ಮೈಸೂರು ಮಾಹಿತಿ ನೀಡಿದರು.</p>.<p>ನಿರ್ದೇಶಕ ಆಸಿಫ್ ಕ್ಷತ್ರಿಯ, ನಟಿ ಶ್ವೇತಾ ಶ್ರೀನಿವಾಸ್, ಗುರುರಾಜ್ ತಲಕಾಡು, ವಿನೋದ್, ಗಾಯಕಿ ಸಿಂಚನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>