<p><strong>ಮೈಸೂರು:</strong> ನಾಡಹಬ್ಬ ದಸರೆಯ ವಿದ್ಯುತ್ ದೀಪಾಲಂಕಾರವು 136 ಕಿ.ಮೀ ರಸ್ತೆ ಹಾಗೂ 118 ವೃತ್ತಗಳಲ್ಲಿ ಜಗಮಗಿಸಲಿದ್ದು, ವಿದ್ಯುತ್ ದೀಪಗಳು ನಗರಕ್ಕೆ ಮೆರುಗು ಹೆಚ್ಚಿಸಲಿವೆ.</p>.<p>ಅರಮನೆ ಮಂಡಳಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿದ್ಯುತ್ ದೀಪಾಲಂಕಾರ, ಡ್ರೋಣ್ ಪ್ರದರ್ಶನದ ಪೋಸ್ಟರ್ ಹಾಗೂ ವಿಡಿಯೊ ಟೀಸರ್ ಬಿಡುಗಡೆ ಮಾಡಿದರು. </p>.<p>80 ಪ್ರತಿಕೃತಿಗಳು, 51 ಬೆಳಕಿನ ಕಮಾನುಗಳು ಇರಲಿದ್ದು, ಆಲ್ಬರ್ಟ್ ವಿಕ್ಟರ್, ಸಯ್ಯಾಜಿರಾವ್, ಡಿ.ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ, ಕೃಷ್ಣರಾಜ, ಜಯಚಾಮರಾಜೇಂದ್ರ, ಚಾಮರಾಜೇಂದ್ರ, ಆಯುರ್ವೇದಿಕ್ ಕಾಲೇಜು, ಜೆಎಸ್ಎಸ್ ವಿದ್ಯಾಪೀಠ, ಎಲ್ಐಸಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ವೈಭವ ಅನಾವರಣಗೊಳ್ಳಲಿದೆ. </p>.<p>ದೀಪಾಲಂಕಾರಕ್ಕೆ 300 ಕೆ.ವಿಯ, 2,57,520 ಯುನಿಟ್ ವಿದ್ಯುತ್ ಬಳಕೆ ಆಗಲಿದೆ. </p>.<p><strong>3 ಸಾವಿರ ಡ್ರೋಣ್ಗಳು:</strong> </p>.<p>ಕಳೆದ ಬಾರಿ 1,500 ಡ್ರೋಣ್ ಬಳಸಿ ಪ್ರದರ್ಶನ ನೀಡಲಾಗಿತ್ತು. ಈ ಬಾರಿ 3 ಸಾವಿರ ಡ್ರೋಣ್ಗಳು ಸೆ.28, 29 ಮತ್ತು ಅ.1, 2ರಂದು ಚಿತ್ತಾರ ಸೃಷ್ಟಿಸಲಿವೆ. </p>.<p>ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ದೀಪಾಲಂಕಾರದ ಕಂಬ ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ಕಂಬಗಳ ಬಳಿ ಫೋಟೊ, ವಿಡಿಯೊ ಶೂಟ್ ಮಾಡುವುದನ್ನು ನಿಷೇಧಿಸಲಾಗಿದೆ. ತೊಂದರೆ ಆದಲ್ಲಿ ಸಹಾಯವಾಣಿ 1912 ಸಂಪರ್ಕಿಸುವಂತೆ ಕೋರಲಾಗಿದೆ.</p>.<p>ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು, ಎಸ್ಇ ಸುನೀಲ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಾಡಹಬ್ಬ ದಸರೆಯ ವಿದ್ಯುತ್ ದೀಪಾಲಂಕಾರವು 136 ಕಿ.ಮೀ ರಸ್ತೆ ಹಾಗೂ 118 ವೃತ್ತಗಳಲ್ಲಿ ಜಗಮಗಿಸಲಿದ್ದು, ವಿದ್ಯುತ್ ದೀಪಗಳು ನಗರಕ್ಕೆ ಮೆರುಗು ಹೆಚ್ಚಿಸಲಿವೆ.</p>.<p>ಅರಮನೆ ಮಂಡಳಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿದ್ಯುತ್ ದೀಪಾಲಂಕಾರ, ಡ್ರೋಣ್ ಪ್ರದರ್ಶನದ ಪೋಸ್ಟರ್ ಹಾಗೂ ವಿಡಿಯೊ ಟೀಸರ್ ಬಿಡುಗಡೆ ಮಾಡಿದರು. </p>.<p>80 ಪ್ರತಿಕೃತಿಗಳು, 51 ಬೆಳಕಿನ ಕಮಾನುಗಳು ಇರಲಿದ್ದು, ಆಲ್ಬರ್ಟ್ ವಿಕ್ಟರ್, ಸಯ್ಯಾಜಿರಾವ್, ಡಿ.ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ, ಕೃಷ್ಣರಾಜ, ಜಯಚಾಮರಾಜೇಂದ್ರ, ಚಾಮರಾಜೇಂದ್ರ, ಆಯುರ್ವೇದಿಕ್ ಕಾಲೇಜು, ಜೆಎಸ್ಎಸ್ ವಿದ್ಯಾಪೀಠ, ಎಲ್ಐಸಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ವೈಭವ ಅನಾವರಣಗೊಳ್ಳಲಿದೆ. </p>.<p>ದೀಪಾಲಂಕಾರಕ್ಕೆ 300 ಕೆ.ವಿಯ, 2,57,520 ಯುನಿಟ್ ವಿದ್ಯುತ್ ಬಳಕೆ ಆಗಲಿದೆ. </p>.<p><strong>3 ಸಾವಿರ ಡ್ರೋಣ್ಗಳು:</strong> </p>.<p>ಕಳೆದ ಬಾರಿ 1,500 ಡ್ರೋಣ್ ಬಳಸಿ ಪ್ರದರ್ಶನ ನೀಡಲಾಗಿತ್ತು. ಈ ಬಾರಿ 3 ಸಾವಿರ ಡ್ರೋಣ್ಗಳು ಸೆ.28, 29 ಮತ್ತು ಅ.1, 2ರಂದು ಚಿತ್ತಾರ ಸೃಷ್ಟಿಸಲಿವೆ. </p>.<p>ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ದೀಪಾಲಂಕಾರದ ಕಂಬ ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ಕಂಬಗಳ ಬಳಿ ಫೋಟೊ, ವಿಡಿಯೊ ಶೂಟ್ ಮಾಡುವುದನ್ನು ನಿಷೇಧಿಸಲಾಗಿದೆ. ತೊಂದರೆ ಆದಲ್ಲಿ ಸಹಾಯವಾಣಿ 1912 ಸಂಪರ್ಕಿಸುವಂತೆ ಕೋರಲಾಗಿದೆ.</p>.<p>ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು, ಎಸ್ಇ ಸುನೀಲ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>