ರಥದ ಚಲನೆಯನ್ನು ನಿಯಂತ್ರಿಸಲು ಗೊದಮ ಕೊಡುವ ತಂಡದ ಸದಸ್ಯರು ಹೊಸ ಸಮವಸ್ತ್ರ ಧರಿಸಿದ್ದರು. ಜೊತೆಯಲ್ಲಿಯೇ ರಥವನ್ನು ನಿಯಂತ್ರಿಸಲು ಜೆಸಿಬಿ, ಕ್ರೇನ್, ಆಂಬುಲೆನ್ಸ್ ವಾಹನಗಳೂ ಇದ್ದವು.
ಮಾರ್ಚ್ 21ರ ರಾತ್ರಿಯಿಂದ 22ರವರೆಗೆ ದೇವಾಲಯದ ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಮಠಗಳು, ಸಂಘ- ಸಂಸ್ಥೆಗಳೂ ಪ್ರಸಾದ ನೀಡಿದವು.
ಹಾರಾಡಿದ ಆರ್ಸಿಬಿ ಬಾವುಟ: ಪುನೀತ್ ರಾಜ್ ಕುಮಾರ್ ಬಾವುಟದ ಜೊತೆಗೆ ಈ ಬಾರಿ ಆರ್ಸಿಬಿ ತಂಡದ ಬಾವುಟ ಹಾರಾಡಿತು. 'ನಂಜುಂಡಪ್ಪ ನಂಜುಂಡಪ್ಪ ಒಂದು ಕಪ್ ಸಿಕ್ತಪ್ಪ.. ಇನ್ನೊಂದು ಕಪ್ ಕೊಡ್ಸಪ್ಪ' ಎಂದು ಬಾವುಟ ಬೀಸುತ್ತಿದ್ದ ಯುವಕರು ಕೂಗಿದರು. ಹಣ್ಣು ಜವನದಲ್ಲಿ 'ಆರ್ಸಿಬಿಗೆ ಜಯವಾಗಲಿ' ಎಂದು ಬರೆದು ರಥಕ್ಕೆ ಎಸೆದರು.