<p><strong>ಮೈಸೂರು</strong>: ಸಾಲ ಪಾವತಿ ಮಾಡಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತನ ಮನೆಯನ್ನು ಹರಾಜು ಹಾಕಿದ್ದಾರೆಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.</p>.<p>ವಿಜಯನಗರ 2ನೇ ಹಂತದಲ್ಲಿರುವ ಬ್ಯಾಂಕ್ ಪ್ರಧಾನ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ‘ಜಿಲ್ಲೆಯ ಕೆ.ಆರ್.ನಗರದಲ್ಲಿನ ಬ್ಯಾಂಕ್ ಶಾಖೆಯಲ್ಲಿ 2013ರಲ್ಲಿ ದೊರೆಸ್ವಾಮಿ ಎಂಬುವರು ₹ 15 ಲಕ್ಷ ಸಾಲ ಪಡೆದಿದ್ದು, ₹ 18.98 ಲಕ್ಷ ಪಾವತಿ ಮಾಡಿದ್ದರೂ, ರೈತನ ಆಸ್ತಿಯನ್ನು ಕಬಳಿಸಲು ಕಾನೂನು ಬಾಹಿರವಾಗಿ ಏಕವ್ಯಕ್ತಿಗೆ ಹರಾಜು ಹಾಕಿದ್ದಾರೆ’ ಎಂದು ಆರೋಪಿಸಿದರು.</p>.<p>‘ಬ್ಯಾಂಕ್ ವಸೂಲಾತಿ ಕ್ರಮವು ಅನ್ಯಾಯವಾಗಿದ್ದು, ಹರಾಜನ್ನು ರದ್ದುಪಡಿಸಿ ಸಾಲವನ್ನು ಮರುಪಾವತಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>‘ಹುಣಸೂರು ತಾಲ್ಲೂಕಿನ ಹೆಜ್ಜೊಡ್ಲು ಗ್ರಾಮದ ಹೇಮಚಂದ್ರ ಹಾಗೂ ಶರತ್ಚಂದ್ರ ಅವರು ಮನೆ ನಿರ್ಮಾಣಕ್ಕಾಗಿ ಚಿಕ್ಕಬಸ್ತಿ ಶಾಖೆಯಲ್ಲಿ ಪಡೆದ ಸಾಲದ ಮೇಲೆ ಅಧಿಕ ಬಡ್ಡಿ ಹಾಗೂ ವೆಚ್ಚ ಸೇರಿಸಿ ವಸೂಲಿ ಮಾಡಲಾಗಿದ್ದು, ಅದನ್ನೂ ಕೈಬಿಡಬೇಕು’ ಎಂದು ಒತ್ತಾಯಿಸಿದರು.</p>.<p>ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ನೇತ್ರಾವತಿ, ರೈತ ಸಂಘದ ಮುಖಂಡರಾದ ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ನಾಗನಹಳ್ಳಿ ಚಂದ್ರಶೇಖರ್, ಕುಮಾರಸ್ವಾಮಿ, ಪಾಪೇಗೌಡ ಪಾಲ್ಗೊಂಡಿದ್ದರು.</p>.<p>ಹರಾಜು ರದ್ದಿಗೆ ಆಗ್ರಹ ಪಾವತಿ ಅವಕಾಶಕ್ಕೆ ಒತ್ತಾಯ ಅಧಿಕ ಬಡ್ಡಿ ಕೈಬಿಡಿ: ಆಗ್ರಹ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಸಾಲ ಪಾವತಿ ಮಾಡಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತನ ಮನೆಯನ್ನು ಹರಾಜು ಹಾಕಿದ್ದಾರೆಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.</p>.<p>ವಿಜಯನಗರ 2ನೇ ಹಂತದಲ್ಲಿರುವ ಬ್ಯಾಂಕ್ ಪ್ರಧಾನ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>.<p>ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ‘ಜಿಲ್ಲೆಯ ಕೆ.ಆರ್.ನಗರದಲ್ಲಿನ ಬ್ಯಾಂಕ್ ಶಾಖೆಯಲ್ಲಿ 2013ರಲ್ಲಿ ದೊರೆಸ್ವಾಮಿ ಎಂಬುವರು ₹ 15 ಲಕ್ಷ ಸಾಲ ಪಡೆದಿದ್ದು, ₹ 18.98 ಲಕ್ಷ ಪಾವತಿ ಮಾಡಿದ್ದರೂ, ರೈತನ ಆಸ್ತಿಯನ್ನು ಕಬಳಿಸಲು ಕಾನೂನು ಬಾಹಿರವಾಗಿ ಏಕವ್ಯಕ್ತಿಗೆ ಹರಾಜು ಹಾಕಿದ್ದಾರೆ’ ಎಂದು ಆರೋಪಿಸಿದರು.</p>.<p>‘ಬ್ಯಾಂಕ್ ವಸೂಲಾತಿ ಕ್ರಮವು ಅನ್ಯಾಯವಾಗಿದ್ದು, ಹರಾಜನ್ನು ರದ್ದುಪಡಿಸಿ ಸಾಲವನ್ನು ಮರುಪಾವತಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>‘ಹುಣಸೂರು ತಾಲ್ಲೂಕಿನ ಹೆಜ್ಜೊಡ್ಲು ಗ್ರಾಮದ ಹೇಮಚಂದ್ರ ಹಾಗೂ ಶರತ್ಚಂದ್ರ ಅವರು ಮನೆ ನಿರ್ಮಾಣಕ್ಕಾಗಿ ಚಿಕ್ಕಬಸ್ತಿ ಶಾಖೆಯಲ್ಲಿ ಪಡೆದ ಸಾಲದ ಮೇಲೆ ಅಧಿಕ ಬಡ್ಡಿ ಹಾಗೂ ವೆಚ್ಚ ಸೇರಿಸಿ ವಸೂಲಿ ಮಾಡಲಾಗಿದ್ದು, ಅದನ್ನೂ ಕೈಬಿಡಬೇಕು’ ಎಂದು ಒತ್ತಾಯಿಸಿದರು.</p>.<p>ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ನೇತ್ರಾವತಿ, ರೈತ ಸಂಘದ ಮುಖಂಡರಾದ ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ನಾಗನಹಳ್ಳಿ ಚಂದ್ರಶೇಖರ್, ಕುಮಾರಸ್ವಾಮಿ, ಪಾಪೇಗೌಡ ಪಾಲ್ಗೊಂಡಿದ್ದರು.</p>.<p>ಹರಾಜು ರದ್ದಿಗೆ ಆಗ್ರಹ ಪಾವತಿ ಅವಕಾಶಕ್ಕೆ ಒತ್ತಾಯ ಅಧಿಕ ಬಡ್ಡಿ ಕೈಬಿಡಿ: ಆಗ್ರಹ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>