ಕಳೆದ ವರ್ಷ 1,06,222 ಹೆಕ್ಟೇರ್ ಬೆಳೆ ಬೆಂಬಲ ಬೆಲೆಗಿಂತಲೂ ಮುಕ್ತ ಮಾರುಕಟ್ಟೆಯಲ್ಲೇ ಬೆಲೆ ಜಾಸ್ತಿ ಇನ್ನೂ ಉತ್ತಮ ಬೆಲೆಗೆ ಕಾಯುತ್ತಿರುವ ಕೆಲವರು
ಈ ವರ್ಷ ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಹಿತ– ಮಿತವಾದ ಪ್ರಮಾಣದಲ್ಲಿ ನೀರು ಕೊಟ್ಟಿರುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಲಾಗುತ್ತಿದೆ
ಬಿ.ಎಸ್. ಚಂದ್ರಶೇಖರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಮೇವಿಗೆ ತೊಂದರೆ: ತಲೆನೋವು!
‘ತೀವ್ರ ಬರಗಾಲ’ಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ನಡೆಯುತ್ತಿರುವ ಭತ್ತದ ಕೊಯ್ಲುಗೆ ಯಂತ್ರಗಳನ್ನು ಬಳಸುತ್ತಿರುವುದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ! ಕೈಯಲ್ಲಿ ಕೊಯ್ಲು ಮಾಡಿದರೆ ಉತ್ತಮ ಮೇವು ಸಿಗುತ್ತದೆ. ಯಂತ್ರದಲ್ಲಿ ಕಟಾವು ಮಾಡಿದರೆ ಅದು ಹಾಳಾಗುತ್ತದೆ ಎಂಬುದು ಅವರ ಆತಂಕ. ‘ಭತ್ತವನ್ನು ಯಂತ್ರಗಳಲ್ಲಿ ಕಟಾವು ಮಾಡಿದರೆ ಮೇವು ಹಾಳಾಗುತ್ತದೆ. ಇದರಿಂದ ಮೇವಿನ ಕೊರತೆ ಎದುರಾಗುವುದನ್ನು ತಪ್ಪಿಸಬೇಕು ಎಂದು ಕೋರಲಾಗಿದೆ’ ಎಂದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನಾಗರಾಜ್ ತಿಳಿಸಿದರು.