<p><strong>ಮೈಸೂರು:</strong> ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಪರಿಶೀಲನೆ ನಡೆಸಿದರು. </p><p>ಮರಣಶಯ್ಯೆಯತ್ತ 'ಲಿಂಗಾಂಬುಧಿ' ಶೀರ್ಷಿಕೆಯಲ್ಲಿ 'ಪ್ರಜಾವಾಣಿ' ವರದಿ ಪ್ರಕಟಿಸಿತ್ತು. ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ ಕೂಡಲೇ ಒಡೆದಿರುವ ಒಳಚರಂಡಿ ಪೈಪ್ ದುರಸ್ತಿಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯ ಕೆರೆ ಸೇರದಂತೆ ಜಾಲರಿ ಅಳವಡಿಕೆಗೆ ಸೂಚಿಸಿದರು. </p><p>ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, 'ಕೆರೆಗೆ ಚರಂಡಿ ನೀರು ಸೇರದಂತೆ ಮಾಡಲಾಗುವುದು. ಕೆರೆಯ ಬಫರ್ ವಲಯಕ್ಕೆ ಹೊಂದಿಕೊಂಡಂತೆ ಇರುವ ಎಲ್ಲ ಬಡಾವಣೆಗಳಲ್ಲೂ ಸ್ವಚ್ಛತೆ ಕೈಗೊಳ್ಳಲಾಗುವುದು. ಎಲ್ಲ ಉದ್ಯಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು' ಎಂದು ಉತ್ತರಿಸಿದರು. </p><p><strong>ಮೂಗು ಮುಚ್ಚಿಕೊಂಡರು:</strong> ದಟ್ಟಗಳ್ಳಿ, ಕನಕದಾಸ ನಗರ ಬಡಾವಣೆಗಳ ಒಳಚರಂಡಿ ನೀರು ರಾಜಕಾಲುವೆಯಲ್ಲಿ ನಿಂತಿದ್ದರಿಂದ ಬರುತ್ತಿದ್ದ ದುರ್ವಾಸನೆಗೆ ಶಾಸಕ ಜಿ.ಟಿ.ದೇವೇಗೌಡ ಮೂಗು ಮುಚ್ಚಿಕೊಂಡರು. ನಿಂತಿದ್ದ ಪ್ಲಾಸ್ಟಿಕ್ ಬಾಟಲಿಗಳ ರಾಶಿ ನೋಡಿ 'ಏನ್ರೀ ಇದೆಲ್ಲ. ಇಲ್ಲೇ ಎರಡು ಶಾಲೆಗಳು ಇವೆಯಲ್ಲ. ಮಕ್ಕಳ ಸ್ಥಿತಿ ಏನಾಗಬೇಕು. ನಿವಾಸಿಗಳು ಈ ದುರ್ವಾಸನೆ ಸಹಿಸಬೇಕೆ' ಎಂದು ಅಧಿಕಾರಿಗಳನ್ನು ಕೇಳಿದರು.</p>.ಮೈಸೂರು: ಮರಣಶಯ್ಯೆಯತ್ತ ‘ಲಿಂಗಾಂಬುಧಿ’ ಕೆರೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಪರಿಶೀಲನೆ ನಡೆಸಿದರು. </p><p>ಮರಣಶಯ್ಯೆಯತ್ತ 'ಲಿಂಗಾಂಬುಧಿ' ಶೀರ್ಷಿಕೆಯಲ್ಲಿ 'ಪ್ರಜಾವಾಣಿ' ವರದಿ ಪ್ರಕಟಿಸಿತ್ತು. ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ ಕೂಡಲೇ ಒಡೆದಿರುವ ಒಳಚರಂಡಿ ಪೈಪ್ ದುರಸ್ತಿಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯ ಕೆರೆ ಸೇರದಂತೆ ಜಾಲರಿ ಅಳವಡಿಕೆಗೆ ಸೂಚಿಸಿದರು. </p><p>ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, 'ಕೆರೆಗೆ ಚರಂಡಿ ನೀರು ಸೇರದಂತೆ ಮಾಡಲಾಗುವುದು. ಕೆರೆಯ ಬಫರ್ ವಲಯಕ್ಕೆ ಹೊಂದಿಕೊಂಡಂತೆ ಇರುವ ಎಲ್ಲ ಬಡಾವಣೆಗಳಲ್ಲೂ ಸ್ವಚ್ಛತೆ ಕೈಗೊಳ್ಳಲಾಗುವುದು. ಎಲ್ಲ ಉದ್ಯಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು' ಎಂದು ಉತ್ತರಿಸಿದರು. </p><p><strong>ಮೂಗು ಮುಚ್ಚಿಕೊಂಡರು:</strong> ದಟ್ಟಗಳ್ಳಿ, ಕನಕದಾಸ ನಗರ ಬಡಾವಣೆಗಳ ಒಳಚರಂಡಿ ನೀರು ರಾಜಕಾಲುವೆಯಲ್ಲಿ ನಿಂತಿದ್ದರಿಂದ ಬರುತ್ತಿದ್ದ ದುರ್ವಾಸನೆಗೆ ಶಾಸಕ ಜಿ.ಟಿ.ದೇವೇಗೌಡ ಮೂಗು ಮುಚ್ಚಿಕೊಂಡರು. ನಿಂತಿದ್ದ ಪ್ಲಾಸ್ಟಿಕ್ ಬಾಟಲಿಗಳ ರಾಶಿ ನೋಡಿ 'ಏನ್ರೀ ಇದೆಲ್ಲ. ಇಲ್ಲೇ ಎರಡು ಶಾಲೆಗಳು ಇವೆಯಲ್ಲ. ಮಕ್ಕಳ ಸ್ಥಿತಿ ಏನಾಗಬೇಕು. ನಿವಾಸಿಗಳು ಈ ದುರ್ವಾಸನೆ ಸಹಿಸಬೇಕೆ' ಎಂದು ಅಧಿಕಾರಿಗಳನ್ನು ಕೇಳಿದರು.</p>.ಮೈಸೂರು: ಮರಣಶಯ್ಯೆಯತ್ತ ‘ಲಿಂಗಾಂಬುಧಿ’ ಕೆರೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>