ಶುಕ್ರವಾರ ಬೆಳಿಗ್ಗೆ ಮೋಹನ್ ಅವರು ಸಿದ್ದರಾಮಯ್ಯ ಮಗ ಯತೀಂದ್ರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ಬಳಿಕ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಸಿ.ಎಂ ನಿವಾಸಕ್ಕೆ ಎಚ್.ಡಿ.ಕೋಟೆ ಶಾಸಕ ಶಾಸಕ ಅನಿಲ್ ಚಿಕ್ಕಮಾದು, ಬಿಜೆಪಿ ಮುಖಂಡ, ಟಿಕೆಟ್ ಆಕಾಂಕ್ಷಿಯಾಗಿದ್ದ ಕೋಟೆ ಎಂ.ಶಿವಣ್ಣ ಅವರೊಂದಿಗೆ ಭೇಟಿ ನೀಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದರು.