<p><strong>ಮೈಸೂರು: ‘</strong> ಸ್ಥಳೀಯ ಸಂಸ್ಥೆಗಳಲ್ಲಿ ಇ–ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು’ ಎಂದು ಲೋಕಾಯುಕ್ತ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಹೇಳಿದರು.</p>.<p>ನಜರ್ಬಾದ್ನಲ್ಲಿರುವ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಇಂದು 15ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿದ್ದು, ಬಹುತೇಕ ಅರ್ಜಿಗಳು ಇ– ಖಾತೆಗೆ ಸಂಬಂಧಿಸಿದ್ದಾಗಿವೆ. ಜನರಿಗೆ ಅನಿವಾರ್ಯವಾಗಿರುವ ಇ–ಖಾತೆ ಮಾಡಿಕೊಡಲು ಅಲೆದಾಡಿಸಬೇಡಿ’ ಎಂದರು.</p>.<p>‘ಕಾನೂನಾತ್ಮಕವಾಗಿ ಇ– ಖಾತೆ ನೀಡಲು ಪೂರಕ ದಾಖಲೆ ಕೇಳಿ ಪಡೆಯಿರಿ, ದಾಖಲೆ ಇಲ್ಲದಿದ್ದರೆ ಅರ್ಜಿ ಸ್ವೀಕರಿಸಿದ ರಶೀದಿ ನೀಡಿ ಅರ್ಜಿದಾರರಿಗೆ ಪೂರಕ ದಾಖಲೆ ನೀಡಲು ಸಲಹೆ ನೀಡಿ. 45 ದಿನದೊಳಗೆ ಈ ಪ್ರಕ್ರಿಯೆ ಮುಗಿಸಿ’ ಎಂದರು.</p>.<p>ಜಮೀನಿನ ವ್ಯಾಜ್ಯ, ನೀರಿನ ಕಂದಾಯ ಸಮಸ್ಯೆ, ಅಕ್ರಮ ವಿದ್ಯುತ್ ಸಂಪರ್ಕ ದೂರುಗಳು ಕೇಳಿಬಂದವು. ಕಾಮಗಾರಿ ಬಿಲ್ ಸಂಬಂಧ ಎಚ್.ಡಿ.ಕೋಟೆ-ಅಂತರಸಂತೆಯ ಪಿಡಿಒ ಸತಾಯಿಸುತ್ತಿರುವ ಬಗ್ಗೆ ಗುತ್ತಿಗೆದಾರರೊಬ್ಬರು ದೂರು ನೀಡಿದರು.</p>.<p>ತಹಶೀಲ್ದಾರ್ ಮಹೇಶ್ ಕುಮಾರ್ ‘ಸರ್ಕಾರು ಅಧಿಕಾರಿಗಳಾಗಿ ನಾವೆಲ್ಲರೂ ಜನರ ಸಮಸ್ಯೆಗೆ ಸ್ಪಂದಿಸಿದಾಗ ಇಲ್ಲಿಯವರೆಗೆ ದೂರು ಕೊಡುವ ಪ್ರಮೇಯವೇ ಬರುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಶೀಘ್ರವಾಗಿ ಸ್ಪಂದಿಸಬೇಕು’ ಎಂದು ಸೂಚಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong> ಸ್ಥಳೀಯ ಸಂಸ್ಥೆಗಳಲ್ಲಿ ಇ–ಖಾತೆ ಮಾಡಿಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು’ ಎಂದು ಲೋಕಾಯುಕ್ತ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಹೇಳಿದರು.</p>.<p>ನಜರ್ಬಾದ್ನಲ್ಲಿರುವ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಇಂದು 15ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿದ್ದು, ಬಹುತೇಕ ಅರ್ಜಿಗಳು ಇ– ಖಾತೆಗೆ ಸಂಬಂಧಿಸಿದ್ದಾಗಿವೆ. ಜನರಿಗೆ ಅನಿವಾರ್ಯವಾಗಿರುವ ಇ–ಖಾತೆ ಮಾಡಿಕೊಡಲು ಅಲೆದಾಡಿಸಬೇಡಿ’ ಎಂದರು.</p>.<p>‘ಕಾನೂನಾತ್ಮಕವಾಗಿ ಇ– ಖಾತೆ ನೀಡಲು ಪೂರಕ ದಾಖಲೆ ಕೇಳಿ ಪಡೆಯಿರಿ, ದಾಖಲೆ ಇಲ್ಲದಿದ್ದರೆ ಅರ್ಜಿ ಸ್ವೀಕರಿಸಿದ ರಶೀದಿ ನೀಡಿ ಅರ್ಜಿದಾರರಿಗೆ ಪೂರಕ ದಾಖಲೆ ನೀಡಲು ಸಲಹೆ ನೀಡಿ. 45 ದಿನದೊಳಗೆ ಈ ಪ್ರಕ್ರಿಯೆ ಮುಗಿಸಿ’ ಎಂದರು.</p>.<p>ಜಮೀನಿನ ವ್ಯಾಜ್ಯ, ನೀರಿನ ಕಂದಾಯ ಸಮಸ್ಯೆ, ಅಕ್ರಮ ವಿದ್ಯುತ್ ಸಂಪರ್ಕ ದೂರುಗಳು ಕೇಳಿಬಂದವು. ಕಾಮಗಾರಿ ಬಿಲ್ ಸಂಬಂಧ ಎಚ್.ಡಿ.ಕೋಟೆ-ಅಂತರಸಂತೆಯ ಪಿಡಿಒ ಸತಾಯಿಸುತ್ತಿರುವ ಬಗ್ಗೆ ಗುತ್ತಿಗೆದಾರರೊಬ್ಬರು ದೂರು ನೀಡಿದರು.</p>.<p>ತಹಶೀಲ್ದಾರ್ ಮಹೇಶ್ ಕುಮಾರ್ ‘ಸರ್ಕಾರು ಅಧಿಕಾರಿಗಳಾಗಿ ನಾವೆಲ್ಲರೂ ಜನರ ಸಮಸ್ಯೆಗೆ ಸ್ಪಂದಿಸಿದಾಗ ಇಲ್ಲಿಯವರೆಗೆ ದೂರು ಕೊಡುವ ಪ್ರಮೇಯವೇ ಬರುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಶೀಘ್ರವಾಗಿ ಸ್ಪಂದಿಸಬೇಕು’ ಎಂದು ಸೂಚಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>