<p><strong>ಮೈಸೂರು: </strong>ಬಾಲಪ್ರತಿಭೆ ರಾಹುಲ್ ವೆಲ್ಲಾಲ್ ಅವರ ಸುಮಧುರ ಗಾಯನವು ಸಂಗೀತಪ್ರಿಯರ ಮನಗೆದ್ದಿತು.</p>.<p>ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿ ರುವ ಸಾಂಸ್ಕೃತಿಕ ಕಾರ್ಯಕ್ರಮದ3ನೇ ದಿನವಾದ ಸೋಮವಾರ ರಾಹುಲ್ ತಮ್ಮ ಮಧುರ ಕಂಠದ ಗಾಯನದಿಂದ ಎಲ್ಲರನ್ನು ಮೋಡಿ ಮಾಡಿದರು.</p>.<p>ನವರಾತ್ರಿಯ ವಿದ್ಯಾದೇವತೆ ಸರಸ್ವತಿಗೆ ನಮಿಸುತ್ತಾ ಸರಸ್ವತಿ ನಮೋ ಸ್ತುತೆ ಎಂಬ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಪ್ರಸಿದ್ಧ ಕೃತಿಯಿಂದ ತಮ್ಮ ಗಾಯನ ಪ್ರಾರಂಭಿಸಿದರು.</p>.<p>ಅನ್ನಪೂರ್ಣೆ ವಿಶಾಲಾಕ್ಷಿ ಎಂಬ ಸಾಮಾರಾಗದ ಕೃತಿಯನ್ನು ಮನೋ ಜ್ಞವಾಗಿ ಹಾಡಿದರು. ಆ ಬಳಿಕ ಜಯ ಚಾಮರಾಜೇಂದ್ರ ಒಡೆಯರ್ ಅವರ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಎಂಬ ಜನಪ್ರಿಯ ಕೃತಿಯನ್ನು ಪ್ರಸ್ತುತ ಪಡಿಸಿದರು. ನಂತರ ಕೆಲವು ದಾಸರ ಕೀರ್ತನೆಗಳನ್ನು ಇಂಪಾಗಿ ಹಾಡಿದರು.</p>.<p>ಸಹಕಲಾವಿದರಾಗಿ ಪಿಟೀಲು ವಿದ್ವಾಂಸರಾದ ವಿದ್ವಾನ್ ತುಮಕೂರು ಯಶಸ್ವಿ, ಮೃದಂಗದಲ್ಲಿ ವಿದ್ವಾನ್ ಡಾ.ಡಿ.ವಿ.ಪ್ರಹ್ಲಾದರಾವ್ ಹಾಗೂ ಮೊರ್ಸಿಂಗ್ನಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಸಾಥ್ ನೀಡಿದರು.</p>.<p>ದಿನದ 2ನೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಗೀತಾ ರಮಾನಂದ್ ಮತ್ತು ತಂಡದವರು ಪಂಚವೀಣೆ ನುಡಿಸಿದರು. ಸತತ ಒಂದು ಗಂಟೆ ನಡೆದ ಪಂಚವೀಣಾ ವಾದನವು ಕೇಳುಗರು ತಲೆದೂಗುವಂತೆ ಮಾಡಿತು.</p>.<p>ಕಾಯೋ ಶ್ರೀಗೌರಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು ನಂತರ ವಿವಿಧ ರಾಗಗಳನ್ನು ನುಡಿಸಿದರು. ಸಹವಾದಕರು ಹಾಗೂ ಇತರ ಕಲಾವಿದರು ವಿಶಿಷ್ಟವಾಗಿ ಪಂಚವೀಣೆ ನುಡಿಸುವ ಮೂಲಕ ವೀಣೆಪ್ರಿಯರ ಮನಗೆದ್ದರು.</p>.<p>ಸೋಮವಾರ ಸಂಜೆ 7 ರಿಂದ 8ರ ವರೆಗೆ ಅಂಬಯ್ಯ ನುಲಿ ತಂಡದವರಿಂದ ವಚನಗಾಯನ ನಡೆಯಲಿದೆ. ರಾತ್ರಿ 8 ರಿಂದ 9ರ ವರೆಗೆ ಪುತ್ತೂರು ನರಸಿಂಹನಾಯಕ ಮತ್ತು ತಂಡದಿಂದ ದಾಸವಾಣಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಬಾಲಪ್ರತಿಭೆ ರಾಹುಲ್ ವೆಲ್ಲಾಲ್ ಅವರ ಸುಮಧುರ ಗಾಯನವು ಸಂಗೀತಪ್ರಿಯರ ಮನಗೆದ್ದಿತು.</p>.<p>ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿ ರುವ ಸಾಂಸ್ಕೃತಿಕ ಕಾರ್ಯಕ್ರಮದ3ನೇ ದಿನವಾದ ಸೋಮವಾರ ರಾಹುಲ್ ತಮ್ಮ ಮಧುರ ಕಂಠದ ಗಾಯನದಿಂದ ಎಲ್ಲರನ್ನು ಮೋಡಿ ಮಾಡಿದರು.</p>.<p>ನವರಾತ್ರಿಯ ವಿದ್ಯಾದೇವತೆ ಸರಸ್ವತಿಗೆ ನಮಿಸುತ್ತಾ ಸರಸ್ವತಿ ನಮೋ ಸ್ತುತೆ ಎಂಬ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಪ್ರಸಿದ್ಧ ಕೃತಿಯಿಂದ ತಮ್ಮ ಗಾಯನ ಪ್ರಾರಂಭಿಸಿದರು.</p>.<p>ಅನ್ನಪೂರ್ಣೆ ವಿಶಾಲಾಕ್ಷಿ ಎಂಬ ಸಾಮಾರಾಗದ ಕೃತಿಯನ್ನು ಮನೋ ಜ್ಞವಾಗಿ ಹಾಡಿದರು. ಆ ಬಳಿಕ ಜಯ ಚಾಮರಾಜೇಂದ್ರ ಒಡೆಯರ್ ಅವರ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಎಂಬ ಜನಪ್ರಿಯ ಕೃತಿಯನ್ನು ಪ್ರಸ್ತುತ ಪಡಿಸಿದರು. ನಂತರ ಕೆಲವು ದಾಸರ ಕೀರ್ತನೆಗಳನ್ನು ಇಂಪಾಗಿ ಹಾಡಿದರು.</p>.<p>ಸಹಕಲಾವಿದರಾಗಿ ಪಿಟೀಲು ವಿದ್ವಾಂಸರಾದ ವಿದ್ವಾನ್ ತುಮಕೂರು ಯಶಸ್ವಿ, ಮೃದಂಗದಲ್ಲಿ ವಿದ್ವಾನ್ ಡಾ.ಡಿ.ವಿ.ಪ್ರಹ್ಲಾದರಾವ್ ಹಾಗೂ ಮೊರ್ಸಿಂಗ್ನಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಸಾಥ್ ನೀಡಿದರು.</p>.<p>ದಿನದ 2ನೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಗೀತಾ ರಮಾನಂದ್ ಮತ್ತು ತಂಡದವರು ಪಂಚವೀಣೆ ನುಡಿಸಿದರು. ಸತತ ಒಂದು ಗಂಟೆ ನಡೆದ ಪಂಚವೀಣಾ ವಾದನವು ಕೇಳುಗರು ತಲೆದೂಗುವಂತೆ ಮಾಡಿತು.</p>.<p>ಕಾಯೋ ಶ್ರೀಗೌರಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವರು ನಂತರ ವಿವಿಧ ರಾಗಗಳನ್ನು ನುಡಿಸಿದರು. ಸಹವಾದಕರು ಹಾಗೂ ಇತರ ಕಲಾವಿದರು ವಿಶಿಷ್ಟವಾಗಿ ಪಂಚವೀಣೆ ನುಡಿಸುವ ಮೂಲಕ ವೀಣೆಪ್ರಿಯರ ಮನಗೆದ್ದರು.</p>.<p>ಸೋಮವಾರ ಸಂಜೆ 7 ರಿಂದ 8ರ ವರೆಗೆ ಅಂಬಯ್ಯ ನುಲಿ ತಂಡದವರಿಂದ ವಚನಗಾಯನ ನಡೆಯಲಿದೆ. ರಾತ್ರಿ 8 ರಿಂದ 9ರ ವರೆಗೆ ಪುತ್ತೂರು ನರಸಿಂಹನಾಯಕ ಮತ್ತು ತಂಡದಿಂದ ದಾಸವಾಣಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>