ಶುಕ್ರವಾರ ಬೆಳಗಿನ ಜಾವ ವಿಶ್ವವಿದ್ಯಾಲಯ ಲಲಿತಕಲಾ ಕಾಲೇಜಿನ ಉತ್ತರ ಭಾಗದ ಮರದ ತೋಪಿನಲ್ಲಿ ಮರ ಬಿದ್ದ ಶಬ್ದ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಭದ್ರತಾ ಉಸ್ತುವಾರಿ ಅರುಣ್ಕುಮಾರ್, ಭದ್ರತಾ ಸಿಬ್ಬಂದಿ ವೆಂಕೇಗೌಡ ಮತ್ತು ಮಹದೇವ ಅವರು ಮರ ಬಿದ್ದ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಆರೋಪಿಯು ಗಿಡಗಳ ಮರೆಯಲ್ಲಿ ಕುಳಿತಿದ್ದು, ಸಿಬ್ಬಂದಿಯನ್ನು ನೋಡಿ ಓಡಲು ಯತ್ನಿಸಿದ್ದಾನೆ.