‘ಮುಖ್ಯಮಂತ್ರಿ ಮೂಗಿನ ಅಡಿಯಲ್ಲಿರುವ ತೆರಿಗೆ ಇಲಾಖೆಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಆಡಳಿತದ ಮೇಲಿನ ಹಿಡಿತ ಸಡಿಲವಾಗಿದೆ. ಉಪ್ಪಿನ ಮೇಲೂ ಜಿಎಸ್ಟಿ ವಿಧಿಸಲಾಗಿದೆ. ತಂಬಾಕು, ಕಬ್ಬಿಣ ಉತ್ಪನ್ನಗಳ ತೆರಿಗೆಯು ಕಳ್ಳದಾರಿ ಹಿಡಿದಿದೆ. ಸೋರಿಕೆ ತಡೆಗಟ್ಟಲು ಮುಂದಾಗದೇ ಸಾಲ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.