‘ಮನುಷ್ಯ ಹೆಚ್ಚು ನೈತಿಕವಾಗಿ ಬಾಳಲು ಕಾಡು, ಹಸಿರು, ಕೆಸರು ಕೊಡುವಷ್ಟು ಕೊಡುಗೆಯನ್ನು ನಗರ, ಮಹಾನಗರಗಳು ಎಂದೂ ಕೊಡಲಾರವು. ನಗರಗಳು ಮೋಸ, ವಂಚನೆಗೆ ಅವಕಾಶ ಮಾಡಿಕೊಡುತ್ತವೆಯೆಂದು ತೇಜಸ್ವಿ ತಿಳಿದಿದ್ದರು. ಅವರು ಹೆಚ್ಚು ಮಾತನಾಡಿದ್ದು, ಬಾಳಿದ್ದು ಕೀಟ, ಪತಂಗ, ನಾಯಿ, ಮೀನು, ಹಕ್ಕಿ, ಉಡ, ಇರುವೆಗಳ ಜೊತೆ’ ಎಂದು ಸ್ಮರಿಸಿದರು.