<p><strong>ಮೈಸೂರು</strong>: ‘ದೇವಸ್ಥಾನ ಒಡೆದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದವರು ಹಿಂದೂ ತಾಲಿಬಾನಿಗಳು‘ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ವಾಗ್ದಾಳಿ ನಡೆಸಿದರು.</p>.<p>’ರೈತರ ಆತ್ಮಹತ್ಯೆ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ದನಿಯೆತ್ತದ ಕೆಲವರು, ಇದೀಗ ದೇಗುಲ ಒಡೆದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ‘ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.</p>.<p><strong>ಮಹಿಷ ದಸರಾ ನಡೆಸಿಯೇ ಸಿದ್ಧ: </strong>’ರಾಷ್ಟ್ರಪ್ರೇಮಿ ವೇಷತೊಟ್ಟ ನಕಲಿ ದೇಶಭಕ್ತರು, ಹಿಂದೂ ತಾಲಿಬಾನಿಗಳಾಗಿದ್ದಾರೆ. ಇಂಥವರು ಮಹಿಷ ದಸರಾ ವಿರೋಧಿಸುತ್ತಿದ್ದಾರೆ. ಇದಕ್ಕೆ, ನಾವು ಅಂಜುವುದಿಲ್ಲ. ಮಹಿಷ ದಸರಾ ನಡೆಸಿಯೇ ಸಿದ್ಧ‘ ಎಂದರು.</p>.<p><strong>ಚಾಮುಂಡಿ ನಾಡದೇವತೆಯಲ್ಲ: </strong>‘ದಸರಾ ಸಂದರ್ಭದಲ್ಲಿ ಪೂಜಿಸುವ ಚಾಮುಂಡಿ ನಾಡದೇವತೆಅಲ್ಲ. ’ನಾಡಹಬ್ಬ– ಹುಟ್ಟು ಬೆಳವಣಿಗೆ‘ ಕುರಿತು 1962ರ ದಸರಾ ಸಂಚಿಕೆಯಲ್ಲಿ ವರಕವಿ ಬೇಂದ್ರೆ ಲೇಖನ ಬರೆದಿದ್ದು, ’ನಾಡದೇವತೆ ಜೈ ಭುವನೇಶ್ವರಿ‘ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜಯನಗರ ಸಂಸ್ಥಾನದವರು ಮಹಾನವಮಿ ದಿಬ್ಬದಲ್ಲಿ ’ಭುವನೇಶ್ವರಿ ದೇವಿ‘ ಪೂಜಿಸುತ್ತಿದ್ದರು‘ ಎಂದು ಲೇಖಕ ಸಿದ್ಧಸ್ವಾಮಿ ಹೇಳಿದರು.</p>.<p>’ಚಾಮುಂಡೇಶ್ವರಿ ಮೈಸೂರು ಸಂಸ್ಥಾನಕ್ಕೆ ಸೇರಿದವಳಲ್ಲ. ಚಂಡ–ಮುಂಡರನ್ನು ಸಂಹರಿಸಿ, ಅವರ ಹೆಸರನ್ನು ತನಗೆ ಇಟ್ಟುಕೊಳ್ಳುತ್ತಾಳೆ. ಈ ಯುದ್ಧ ನಡೆದಿರುವುದು ಹಿಮಾಲಯದಲ್ಲಿ. ಆ ರೀತಿ ಇರುವಾಗ, ಚಾಮುಂಡೇಶ್ವರಿ ಕರ್ನಾಟಕದವಳು ಹೇಗಾಗುತ್ತಾಳೆ‘ ಎಂದು ತಮ್ಮ ಸಂಶೋಧನೆಯ ’ಮಹಿಷಾಮಂಡಲ‘ ಕೃತಿ ಪ್ರದರ್ಶಿಸಿದರು.</p>.<p>’ಮಹಿಷಾಸುರ ಅವಧಿಯಲ್ಲಿ ಮಾತೃ ಸಂಸ್ಕೃತಿಯಿತ್ತು. ಮಾರಮ್ಮನಿಗೆ ಪೂಜೆ ಸಲ್ಲಿಸುವ ಪದ್ಧತಿಯಿತ್ತು. ಮಾರಮ್ಮನ ಪೂಜೆ ಸಲ್ಲಿಸಿದ ಊರು, ಮೈಸೂರು ಆಗಿ ಬದಲಾಗಿದೆ‘ ಎಂದು ವಿವರಿಸಿದರು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/district/mysore/demolition-of-illegal-religious-structures-controversy-erupts-in-mysuru-prajavani-fb-live-discussion-866469.html" itemprop="url">ಪ್ರಜಾವಾಣಿ Live ಸಂವಾದ: ಧಾರ್ಮಿಕ ಕಟ್ಟಡಗಳ ತೆರವು ಗೊಂದಲ; ಏನು, ಎತ್ತ?</a><br /><strong>*</strong><a href="https://cms.prajavani.net/district/mysore/temples-demolition-case-mysore-district-siddaramaiah-pratap-simha-politics-867412.html" itemprop="url">ಸಿದ್ದರಾಮಯ್ಯನವರೇ, ದೇಗುಲಗಳ ಮೇಲೆ ಪ್ರೀತಿ ಮೂಡಿದ್ದು ಏಕೆ: ಪ್ರತಾಪ ಸಿಂಹ ಪ್ರಶ್ನೆ </a><br /><strong>*</strong><a href="https://cms.prajavani.net/district/mysore/where-are-the-hindutva-leaders-hiding-belur-gopalakrishna-asks-questions-to-bjp-leaders-867431.html" itemprop="url">ಹಿಂದುತ್ವದ ಕವಚ ತೊಟ್ಟವರು ಎಲ್ಲಿ ಅಡಗಿದ್ದಾರೆ: ಬೇಳೂರು ಗೋಪಾಲಕೃಷ್ಣ ಪ್ರಶ್ನೆ </a><br /><strong>*</strong><a href="https://cms.prajavani.net/district/mysore/religious-building-demolition-mysore-district-866721.html" itemprop="url">ಧಾರ್ಮಿಕ ಕಟ್ಟಡ ತೆರವು: ಸಾಮರಸ್ಯ ರಕ್ಷಿಸಿ</a><br />*<a href="https://cms.prajavani.net/district/mysore/complaint-against-mp-pratap-simha-to-mysuru-deputy-commissioner-by-congress-866458.html" itemprop="url">ಮೈಸೂರು: ಸಂಸದ ಪ್ರತಾಪ ಸಿಂಹ ವಿರುದ್ಧ ಜಿಲ್ಲಾಧಿಕಾರಿಗೆ ದೂರು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ದೇವಸ್ಥಾನ ಒಡೆದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದವರು ಹಿಂದೂ ತಾಲಿಬಾನಿಗಳು‘ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ವಾಗ್ದಾಳಿ ನಡೆಸಿದರು.</p>.<p>’ರೈತರ ಆತ್ಮಹತ್ಯೆ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ದನಿಯೆತ್ತದ ಕೆಲವರು, ಇದೀಗ ದೇಗುಲ ಒಡೆದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ‘ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.</p>.<p><strong>ಮಹಿಷ ದಸರಾ ನಡೆಸಿಯೇ ಸಿದ್ಧ: </strong>’ರಾಷ್ಟ್ರಪ್ರೇಮಿ ವೇಷತೊಟ್ಟ ನಕಲಿ ದೇಶಭಕ್ತರು, ಹಿಂದೂ ತಾಲಿಬಾನಿಗಳಾಗಿದ್ದಾರೆ. ಇಂಥವರು ಮಹಿಷ ದಸರಾ ವಿರೋಧಿಸುತ್ತಿದ್ದಾರೆ. ಇದಕ್ಕೆ, ನಾವು ಅಂಜುವುದಿಲ್ಲ. ಮಹಿಷ ದಸರಾ ನಡೆಸಿಯೇ ಸಿದ್ಧ‘ ಎಂದರು.</p>.<p><strong>ಚಾಮುಂಡಿ ನಾಡದೇವತೆಯಲ್ಲ: </strong>‘ದಸರಾ ಸಂದರ್ಭದಲ್ಲಿ ಪೂಜಿಸುವ ಚಾಮುಂಡಿ ನಾಡದೇವತೆಅಲ್ಲ. ’ನಾಡಹಬ್ಬ– ಹುಟ್ಟು ಬೆಳವಣಿಗೆ‘ ಕುರಿತು 1962ರ ದಸರಾ ಸಂಚಿಕೆಯಲ್ಲಿ ವರಕವಿ ಬೇಂದ್ರೆ ಲೇಖನ ಬರೆದಿದ್ದು, ’ನಾಡದೇವತೆ ಜೈ ಭುವನೇಶ್ವರಿ‘ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ವಿಜಯನಗರ ಸಂಸ್ಥಾನದವರು ಮಹಾನವಮಿ ದಿಬ್ಬದಲ್ಲಿ ’ಭುವನೇಶ್ವರಿ ದೇವಿ‘ ಪೂಜಿಸುತ್ತಿದ್ದರು‘ ಎಂದು ಲೇಖಕ ಸಿದ್ಧಸ್ವಾಮಿ ಹೇಳಿದರು.</p>.<p>’ಚಾಮುಂಡೇಶ್ವರಿ ಮೈಸೂರು ಸಂಸ್ಥಾನಕ್ಕೆ ಸೇರಿದವಳಲ್ಲ. ಚಂಡ–ಮುಂಡರನ್ನು ಸಂಹರಿಸಿ, ಅವರ ಹೆಸರನ್ನು ತನಗೆ ಇಟ್ಟುಕೊಳ್ಳುತ್ತಾಳೆ. ಈ ಯುದ್ಧ ನಡೆದಿರುವುದು ಹಿಮಾಲಯದಲ್ಲಿ. ಆ ರೀತಿ ಇರುವಾಗ, ಚಾಮುಂಡೇಶ್ವರಿ ಕರ್ನಾಟಕದವಳು ಹೇಗಾಗುತ್ತಾಳೆ‘ ಎಂದು ತಮ್ಮ ಸಂಶೋಧನೆಯ ’ಮಹಿಷಾಮಂಡಲ‘ ಕೃತಿ ಪ್ರದರ್ಶಿಸಿದರು.</p>.<p>’ಮಹಿಷಾಸುರ ಅವಧಿಯಲ್ಲಿ ಮಾತೃ ಸಂಸ್ಕೃತಿಯಿತ್ತು. ಮಾರಮ್ಮನಿಗೆ ಪೂಜೆ ಸಲ್ಲಿಸುವ ಪದ್ಧತಿಯಿತ್ತು. ಮಾರಮ್ಮನ ಪೂಜೆ ಸಲ್ಲಿಸಿದ ಊರು, ಮೈಸೂರು ಆಗಿ ಬದಲಾಗಿದೆ‘ ಎಂದು ವಿವರಿಸಿದರು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/district/mysore/demolition-of-illegal-religious-structures-controversy-erupts-in-mysuru-prajavani-fb-live-discussion-866469.html" itemprop="url">ಪ್ರಜಾವಾಣಿ Live ಸಂವಾದ: ಧಾರ್ಮಿಕ ಕಟ್ಟಡಗಳ ತೆರವು ಗೊಂದಲ; ಏನು, ಎತ್ತ?</a><br /><strong>*</strong><a href="https://cms.prajavani.net/district/mysore/temples-demolition-case-mysore-district-siddaramaiah-pratap-simha-politics-867412.html" itemprop="url">ಸಿದ್ದರಾಮಯ್ಯನವರೇ, ದೇಗುಲಗಳ ಮೇಲೆ ಪ್ರೀತಿ ಮೂಡಿದ್ದು ಏಕೆ: ಪ್ರತಾಪ ಸಿಂಹ ಪ್ರಶ್ನೆ </a><br /><strong>*</strong><a href="https://cms.prajavani.net/district/mysore/where-are-the-hindutva-leaders-hiding-belur-gopalakrishna-asks-questions-to-bjp-leaders-867431.html" itemprop="url">ಹಿಂದುತ್ವದ ಕವಚ ತೊಟ್ಟವರು ಎಲ್ಲಿ ಅಡಗಿದ್ದಾರೆ: ಬೇಳೂರು ಗೋಪಾಲಕೃಷ್ಣ ಪ್ರಶ್ನೆ </a><br /><strong>*</strong><a href="https://cms.prajavani.net/district/mysore/religious-building-demolition-mysore-district-866721.html" itemprop="url">ಧಾರ್ಮಿಕ ಕಟ್ಟಡ ತೆರವು: ಸಾಮರಸ್ಯ ರಕ್ಷಿಸಿ</a><br />*<a href="https://cms.prajavani.net/district/mysore/complaint-against-mp-pratap-simha-to-mysuru-deputy-commissioner-by-congress-866458.html" itemprop="url">ಮೈಸೂರು: ಸಂಸದ ಪ್ರತಾಪ ಸಿಂಹ ವಿರುದ್ಧ ಜಿಲ್ಲಾಧಿಕಾರಿಗೆ ದೂರು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>