ವಿಭಾಗದ ಅಧ್ಯಕ್ಷೆ ಬಿ.ಶೋಭಾ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿರುವ ಅಲಂಬಾಡಿ ಗ್ರಾಮದಿಂದ ‘ಸಾರ್ಕೋಫೇಗಸ್’ ತಂದು ಸಂರಕ್ಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಅಪರೂಪವಾಗಿ ದೊರಕುವ ಈ ಪಾರಂಪರಿಕ ವಸ್ತು ಅಲ್ಲಿನ ಸರ್ಕಾರಿ ಶಾಲೆಗೆ ಪಾಯ ಹಾಕುವಾಗ ದೊರಕಿದ್ದು, ಅಲ್ಲಿನ ಶಿಕ್ಷಕ ಜಯರಾಮನ್ ಅದನ್ನು ತೆಗೆದಿಟ್ಟಿದ್ದರು. ನಂತರ ಅವನ್ನು ತಂದು ಜೋಡಿಸಿದ್ದೇವೆ’ ಎಂದರು.