<p><strong>ಮೈಸೂರು:</strong> ‘ಆಧುನಿಕ ಶೈಲಿಯ ಬದುಕಿನಲ್ಲಿ ಪರಂಪರೆ, ಇತಿಹಾಸದ ಮೌಲ್ಯವನ್ನು ಅರಿಯದೆ ಮುಂದೆ ಸಾಗುತ್ತಿದ್ದೇವೆ. ಇದರ ಮಹತ್ವವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಸಬೇಕಾದ ಅನಿವಾರ್ಯತೆಯಿದೆ’ ಎಂದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ತಿಳಿಸಿದರು.</p>.<p>ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ವಿಶ್ವ ಪರಂಪರೆ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಸಾರ್ಕೋಫೇಗಸ್’ (ಪ್ರಾಚೀನ ಶವಪೆಟ್ಟಿಗೆ) ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನಮ್ಮ ಪರಂಪರೆಯನ್ನು ಮತ್ತೆ ಕಣ್ಮುಂದೆ ತರುವ ಕೆಲಸಗಳಾಗಬೇಕು. ಅದಕ್ಕಾಗಿ ಉತ್ಖನನ ಹಾಗೂ ಸರ್ವೆ ಕಾರ್ಯಗಳು ಹೆಚ್ಚುವ ಅವಶ್ಯಕತೆಯಿದೆ. ಇದರ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಲಾಖೆ ಬೆಂಬಲವಾಗಿ ನಿಲ್ಲಲಿದೆ. ಹೊಸ ಅನ್ವೇಷಣೆಗಳು ಪೂರ್ವಿಕರ ದಾಖಲೆಗಳನ್ನು ಹೊರತರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<p>‘ಇಲಾಖೆಯಲ್ಲಿ ಮೂಲ ಸೌಕರ್ಯಗಳಿದ್ದು, ಮಾನವ ಸಂಪನ್ಮೂಲದ ಕೊರತೆಯಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ವ್ಯತಿರಿಕ್ತ ಸನ್ನಿವೇಶವಿದೆ. ಹೀಗಾಗಿ ಇಲ್ಲಿನ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಒಟ್ಟಾಗಿ ಬೆಳೆಯೋಣ. ವಿನೂತನ ಸಂಶೋಧನೆಗಳನ್ನು ಮಾಡೋಣ’ ಎಂದು ತಿಳಿಸಿದರು.</p>.<p>ವಿಭಾಗದ ಅಧ್ಯಕ್ಷೆ ಬಿ.ಶೋಭಾ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿರುವ ಅಲಂಬಾಡಿ ಗ್ರಾಮದಿಂದ ‘ಸಾರ್ಕೋಫೇಗಸ್’ ತಂದು ಸಂರಕ್ಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಅಪರೂಪವಾಗಿ ದೊರಕುವ ಈ ಪಾರಂಪರಿಕ ವಸ್ತು ಅಲ್ಲಿನ ಸರ್ಕಾರಿ ಶಾಲೆಗೆ ಪಾಯ ಹಾಕುವಾಗ ದೊರಕಿದ್ದು, ಅಲ್ಲಿನ ಶಿಕ್ಷಕ ಜಯರಾಮನ್ ಅದನ್ನು ತೆಗೆದಿಟ್ಟಿದ್ದರು. ನಂತರ ಅವನ್ನು ತಂದು ಜೋಡಿಸಿದ್ದೇವೆ’ ಎಂದರು.</p>.<p>‘ಆ ಜಾಗದಲ್ಲಿ ಗಂಗರ ಕಾಲದ ಮಡಕೆಗಳು, ವಿಜಯನಗರ ಕಾಲದ ರಂಗನಾಥ ದೇವಾಲಯ ಇದೆ. ಇಂತಹ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ನುಡಿದರು.</p>.<p>ವಿಶ್ವವಿದ್ಯಾಲಯದ ಕುಲಪತಿ ಎನ್.ಕೆ.ಲೋಕನಾಥ್, ಹಣಕಾಸು ಅಧಿಕಾರಿ ರೇಖಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಆಧುನಿಕ ಶೈಲಿಯ ಬದುಕಿನಲ್ಲಿ ಪರಂಪರೆ, ಇತಿಹಾಸದ ಮೌಲ್ಯವನ್ನು ಅರಿಯದೆ ಮುಂದೆ ಸಾಗುತ್ತಿದ್ದೇವೆ. ಇದರ ಮಹತ್ವವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಸಬೇಕಾದ ಅನಿವಾರ್ಯತೆಯಿದೆ’ ಎಂದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ತಿಳಿಸಿದರು.</p>.<p>ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ವಿಶ್ವ ಪರಂಪರೆ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಸಾರ್ಕೋಫೇಗಸ್’ (ಪ್ರಾಚೀನ ಶವಪೆಟ್ಟಿಗೆ) ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನಮ್ಮ ಪರಂಪರೆಯನ್ನು ಮತ್ತೆ ಕಣ್ಮುಂದೆ ತರುವ ಕೆಲಸಗಳಾಗಬೇಕು. ಅದಕ್ಕಾಗಿ ಉತ್ಖನನ ಹಾಗೂ ಸರ್ವೆ ಕಾರ್ಯಗಳು ಹೆಚ್ಚುವ ಅವಶ್ಯಕತೆಯಿದೆ. ಇದರ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಲಾಖೆ ಬೆಂಬಲವಾಗಿ ನಿಲ್ಲಲಿದೆ. ಹೊಸ ಅನ್ವೇಷಣೆಗಳು ಪೂರ್ವಿಕರ ದಾಖಲೆಗಳನ್ನು ಹೊರತರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<p>‘ಇಲಾಖೆಯಲ್ಲಿ ಮೂಲ ಸೌಕರ್ಯಗಳಿದ್ದು, ಮಾನವ ಸಂಪನ್ಮೂಲದ ಕೊರತೆಯಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ವ್ಯತಿರಿಕ್ತ ಸನ್ನಿವೇಶವಿದೆ. ಹೀಗಾಗಿ ಇಲ್ಲಿನ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಒಟ್ಟಾಗಿ ಬೆಳೆಯೋಣ. ವಿನೂತನ ಸಂಶೋಧನೆಗಳನ್ನು ಮಾಡೋಣ’ ಎಂದು ತಿಳಿಸಿದರು.</p>.<p>ವಿಭಾಗದ ಅಧ್ಯಕ್ಷೆ ಬಿ.ಶೋಭಾ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿರುವ ಅಲಂಬಾಡಿ ಗ್ರಾಮದಿಂದ ‘ಸಾರ್ಕೋಫೇಗಸ್’ ತಂದು ಸಂರಕ್ಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಅಪರೂಪವಾಗಿ ದೊರಕುವ ಈ ಪಾರಂಪರಿಕ ವಸ್ತು ಅಲ್ಲಿನ ಸರ್ಕಾರಿ ಶಾಲೆಗೆ ಪಾಯ ಹಾಕುವಾಗ ದೊರಕಿದ್ದು, ಅಲ್ಲಿನ ಶಿಕ್ಷಕ ಜಯರಾಮನ್ ಅದನ್ನು ತೆಗೆದಿಟ್ಟಿದ್ದರು. ನಂತರ ಅವನ್ನು ತಂದು ಜೋಡಿಸಿದ್ದೇವೆ’ ಎಂದರು.</p>.<p>‘ಆ ಜಾಗದಲ್ಲಿ ಗಂಗರ ಕಾಲದ ಮಡಕೆಗಳು, ವಿಜಯನಗರ ಕಾಲದ ರಂಗನಾಥ ದೇವಾಲಯ ಇದೆ. ಇಂತಹ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ನುಡಿದರು.</p>.<p>ವಿಶ್ವವಿದ್ಯಾಲಯದ ಕುಲಪತಿ ಎನ್.ಕೆ.ಲೋಕನಾಥ್, ಹಣಕಾಸು ಅಧಿಕಾರಿ ರೇಖಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>