<p><strong>ಮೈಸೂರು</strong>: ಲಾಕ್ಡೌನ್ ನಂತರ ವೀಕ್ಷಣೆಗೆ ಮುಕ್ತವಾದ ಸಾಂಸ್ಕೃತಿಕ ನಗರಿಯ ಪ್ರವಾಸಿ ಸ್ಥಳಗಳು ಭಣಗುಡುತ್ತಿದ್ದು, ಪ್ರವಾಸಿಗರ ಕೊರತೆಯನ್ನು ಎದುರಿಸುತ್ತಿವೆ.</p>.<p>ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯಗಳಿಗೆ ಕಳೆದ 4 ದಿನಗಳಲ್ಲಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರವೇ ಭೇಟಿ ಕೊಟ್ಟಿದ್ದಾರೆ. ಎರಡೂ ಕಡೆ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರೂ ಪ್ರವಾಸಿಗರು ಭೇಟಿ ನೀಡಲು ಹಿಂದೇಟು ಹಾಕಿದ್ದಾರೆ.</p>.<p>ಮೈಸೂರು ಅರಮನೆಗೆ ಜ.8ರಂದು 58, 9ರಂದು 174, 10ರಂದು 140 ಹಾಗೂ 11ರಂದು 90 ಮಂದಿಯಷ್ಟೇ ಪ್ರವಾಸಿಗರು ಭೇಟಿ ನೀಡಿದ್ದಾರೆ.</p>.<p>ಚಾಮರಾಜೇಂದ್ರ ಮೃಗಾಲಯಕ್ಕೆ ಜ.8ರಂದು 250, 9ರಂದು 117, 10ರಂದು 350 ಹಾಗೂ 11ರಂದು 230 ಮಂದಿಯಷ್ಟೇ ಪ್ರವಾಸಿಗರು ಬಂದು ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿದ್ದಾರೆ.</p>.<p>ಮೃಗಾಲಯದ ನಿರ್ವಹಣೆ, ಸಿಬ್ಬಂದಿಯ ವೇತನ ಮತ್ತು ಪ್ರಾಣಿಗಳ ಆಹಾರ ಸೇರಿ ತಿಂಗಳಿಗೆ ₹ 2 ಕೋಟಿಯಷ್ಟು ಹಣ ಬೇಕಿದೆ. ಈ ಹಿಂದೆ ಪ್ರತಿನಿತ್ಯ ಸರಾಸರಿ 4 ಸಾವಿರಕ್ಕೂ ಅಧಿಕ ಪ್ರವಾಸಿಗರು ಬರುತ್ತಿದ್ದರು. ಇದರಿಂದ ಬರುತ್ತಿದ್ದ ಆದಾಯವೇ ನಿರ್ವಹಣೆಯ ಪ್ರಮುಖ ಮೂಲವಾಗಿತ್ತು.</p>.<p><strong>ಏಕೆ ಹೀಗೆ?</strong></p>.<p>ಶಾಲಾ– ಕಾಲೇಜುಗಳಿಗೆ ರಜೆ ಮುಂದುವರಿದಿದ್ದರೂ ಜನರು ಪ್ರವಾಸ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಕೊರೊನಾ ಸೋಂಕಿನ ಭಯ ಒಂದೆಡೆಯಾದರೆ, ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಮತ್ತೊಂದು ಪ್ರಮುಖ ಕಾರಣ ಎನಿಸಿದೆ.</p>.<p>ಬಹಳಷ್ಟು ಕೈಗಾರಿಕೆಗಳು, ಕಂಪನಿಗಳು ಇನ್ನೂ ಆರಂಭವೇ ಆಗಿಲ್ಲ. ವೇತನ ಕಡಿತ, ಉದ್ಯೋಗ ಕಡಿತ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ ಎನಿಸಿವೆ. ಕೆಲವು ಕಂಪನಿಗಳು ಕೇವಲ 15 ದಿನಗಳು ಮಾತ್ರ ವೇತನ ಸಹಿತ ಕೆಲಸ ನೀಡುತ್ತಿವೆ. ಈ ಎಲ್ಲ ಕಾರಣಗಳಿಂದ ಜನರು ಪ್ರವಾಸ ಒಳಗೊಂಡಂತೆ ಇತರ ಮನರಂಜನಾ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಮುಂದೂಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಲಾಕ್ಡೌನ್ ನಂತರ ವೀಕ್ಷಣೆಗೆ ಮುಕ್ತವಾದ ಸಾಂಸ್ಕೃತಿಕ ನಗರಿಯ ಪ್ರವಾಸಿ ಸ್ಥಳಗಳು ಭಣಗುಡುತ್ತಿದ್ದು, ಪ್ರವಾಸಿಗರ ಕೊರತೆಯನ್ನು ಎದುರಿಸುತ್ತಿವೆ.</p>.<p>ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯಗಳಿಗೆ ಕಳೆದ 4 ದಿನಗಳಲ್ಲಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರವೇ ಭೇಟಿ ಕೊಟ್ಟಿದ್ದಾರೆ. ಎರಡೂ ಕಡೆ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರೂ ಪ್ರವಾಸಿಗರು ಭೇಟಿ ನೀಡಲು ಹಿಂದೇಟು ಹಾಕಿದ್ದಾರೆ.</p>.<p>ಮೈಸೂರು ಅರಮನೆಗೆ ಜ.8ರಂದು 58, 9ರಂದು 174, 10ರಂದು 140 ಹಾಗೂ 11ರಂದು 90 ಮಂದಿಯಷ್ಟೇ ಪ್ರವಾಸಿಗರು ಭೇಟಿ ನೀಡಿದ್ದಾರೆ.</p>.<p>ಚಾಮರಾಜೇಂದ್ರ ಮೃಗಾಲಯಕ್ಕೆ ಜ.8ರಂದು 250, 9ರಂದು 117, 10ರಂದು 350 ಹಾಗೂ 11ರಂದು 230 ಮಂದಿಯಷ್ಟೇ ಪ್ರವಾಸಿಗರು ಬಂದು ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿದ್ದಾರೆ.</p>.<p>ಮೃಗಾಲಯದ ನಿರ್ವಹಣೆ, ಸಿಬ್ಬಂದಿಯ ವೇತನ ಮತ್ತು ಪ್ರಾಣಿಗಳ ಆಹಾರ ಸೇರಿ ತಿಂಗಳಿಗೆ ₹ 2 ಕೋಟಿಯಷ್ಟು ಹಣ ಬೇಕಿದೆ. ಈ ಹಿಂದೆ ಪ್ರತಿನಿತ್ಯ ಸರಾಸರಿ 4 ಸಾವಿರಕ್ಕೂ ಅಧಿಕ ಪ್ರವಾಸಿಗರು ಬರುತ್ತಿದ್ದರು. ಇದರಿಂದ ಬರುತ್ತಿದ್ದ ಆದಾಯವೇ ನಿರ್ವಹಣೆಯ ಪ್ರಮುಖ ಮೂಲವಾಗಿತ್ತು.</p>.<p><strong>ಏಕೆ ಹೀಗೆ?</strong></p>.<p>ಶಾಲಾ– ಕಾಲೇಜುಗಳಿಗೆ ರಜೆ ಮುಂದುವರಿದಿದ್ದರೂ ಜನರು ಪ್ರವಾಸ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಕೊರೊನಾ ಸೋಂಕಿನ ಭಯ ಒಂದೆಡೆಯಾದರೆ, ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಮತ್ತೊಂದು ಪ್ರಮುಖ ಕಾರಣ ಎನಿಸಿದೆ.</p>.<p>ಬಹಳಷ್ಟು ಕೈಗಾರಿಕೆಗಳು, ಕಂಪನಿಗಳು ಇನ್ನೂ ಆರಂಭವೇ ಆಗಿಲ್ಲ. ವೇತನ ಕಡಿತ, ಉದ್ಯೋಗ ಕಡಿತ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ ಎನಿಸಿವೆ. ಕೆಲವು ಕಂಪನಿಗಳು ಕೇವಲ 15 ದಿನಗಳು ಮಾತ್ರ ವೇತನ ಸಹಿತ ಕೆಲಸ ನೀಡುತ್ತಿವೆ. ಈ ಎಲ್ಲ ಕಾರಣಗಳಿಂದ ಜನರು ಪ್ರವಾಸ ಒಳಗೊಂಡಂತೆ ಇತರ ಮನರಂಜನಾ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಮುಂದೂಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>