<p><strong>ಮೈಸೂರು</strong>: ಸುನೀತಾ ಚಂದ್ರಕುಮಾರ್ ಅವರ ‘ರಘುಲೀಲಾ ಸಂಗೀತ ಮಂದಿರ’ದ ನಗರ ಸಂಕೀರ್ತನೆಯೊಂದಿಗೆ 64ನೇ ಪಾರಂಪರಿಕ ಸಂಗೀತೋತ್ಸವವು ಸೋಮವಾರ ಸಂಪನ್ನಗೊಂಡಿತು. </p>.<p>ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆದ 13 ದಿನಗಳ ಉತ್ಸವಕ್ಕೆ ಸಹೃದಯರು ಸಾಕ್ಷಿಯಾದರು. </p>.<p>ವಿದ್ವಾನ್ ಟಿ.ಎಂ.ಕೃಷ್ಣ ಅವರ ಗಾಯನದೊಂದಿಗೆ ಗರಿಗೆದರಿದ ಸಂಗೀತ ಉತ್ಸವಕ್ಕೆ ಉದ್ಯಮಿ ಕ್ಯಾಪ್ಟನ್ ಜಿ.ಗೋಪಿನಾಥ್ ಸೆ.28ರಂದು ಚಾಲನೆ ನೀಡಿದ್ದರು. </p>.<p>ಮೇಲುಕೋಟೆ ನಾಗೇಶ್, ರಾಹುಲ್ ವೆಲ್ಲಾಳ್, ಪೃಥ್ವಿ ಭಾಸ್ಕರ್, ಮನ್ನಾರ್ಗುಡಿ ಶಂಕರ್ ರಾಮನ್, ಪದ್ಮಾ ಶಂಕರ್, ರಮಣ ಬಾಲಚಂದರ್, ಇಶಾನ್ ಘೋಷ್, ಭಾರದ್ವಾಜ್ ಸಾತವಲ್ಲಿ, ಸುನಿಲ್ ಗಾರ್ಗ್ಯಾನ್, ಕಾರ್ತಿಕ್ ಪ್ರಣವ್ ಇದೇ ಮೊದಲ ಬಾರಿ ಕಛೇರಿಯನ್ನು ನೀಡಿದರು. </p>.<p>ಅಕ್ಕರೈ ಸೋದರಿಯರು, ಬೆಂಗಳೂರು ಸಹೋದರರು, ವಿನಯ್ ಶರ್ವ, ಅಭಿಷೇಕ್ ರಘುರಾಮ್, ವಿದ್ವಾನ್ ವಿಠ್ಠಲ ರಾಮಮೂರ್ತಿ, ನೆಮ್ಮಾರ ಕಣ್ಣನ್– ಆನಂದ ಬ್ರಹ್ಮ ನಾದ ಹಾಗೂ ಗಾಯನ ಲಹರಿಯು ಕಿವಿದುಂಬಿತ್ತು. </p>.<p><strong>ಗಣೇಶ ವಿಸರ್ಜನೆ:</strong> ಪ್ರತಿಷ್ಠಾಪಿಸಲಾಗಿದ್ದ ‘ನಾದಪ್ರಿಯ’ ಗಣೇಶನ ವಿಸರ್ಜನೆ, ಸೋಮವಾರ ಸಂಜೆ ನಡೆಯಿತು. ಇದಕ್ಕೂ ಮೊದಲು ಚಳ್ಳಕೆರೆ ಶ್ರೀನಿವಾಸ ಹಾಗೂ ವೇಣುಗೋಪಾಲ್ ಪವಮಾನ ಹೋಮ ನಡೆಸಿದರು. ನಂತರ ಅನ್ನಸಂತರ್ಪಣೆಯೂ ನಡೆಯಿತು. </p>.<p>ಟ್ರಸ್ಟ್ ಕಾರ್ಯದರ್ಶಿ ಸಿ.ಆರ್.ಹಿಮಾಂಶು ಮಾತನಾಡಿ, ‘ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ಕೊನೆಗೊಂಡಿದೆ. ದಾನಿಗಳು, ಪೋಷಕರು, ಸಹೃದಯರು ನೇರ ಹಾಗೂ ಪರೀಕ್ಷವಾಗಿ ಉತ್ಸವದ ಯಶಸ್ಸಿಗೆ ಶ್ರಮಿಸಿದ್ದಾರೆ’ ಎಂದು ಸ್ಮರಿಸಿದರು.</p>.<p>ಟ್ರಸ್ಟ್ ಅಧ್ಯಕ್ಷ ಎಂ.ಜಗನ್ನಾಥ ಶೆಣೈ, ಉಪಾಧ್ಯಕ್ಷ ಟಿ.ಎಸ್. ವೇಣುಗೋಪಾಲ್, ಖಜಾಂಚಿ ಆರ್.ಗುರುರಾಜ್, ಟ್ರಸ್ಟಿಗಳಾದ ಶೈಲಜಾ, ಅಮರೇಶ ದಾಸ್, ಎಂ.ಕೆ. ಶ್ರೀಧರ್, ವಸಂತ್, ಸಿ.ಚಲುವರಾಜ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಸುನೀತಾ ಚಂದ್ರಕುಮಾರ್ ಅವರ ‘ರಘುಲೀಲಾ ಸಂಗೀತ ಮಂದಿರ’ದ ನಗರ ಸಂಕೀರ್ತನೆಯೊಂದಿಗೆ 64ನೇ ಪಾರಂಪರಿಕ ಸಂಗೀತೋತ್ಸವವು ಸೋಮವಾರ ಸಂಪನ್ನಗೊಂಡಿತು. </p>.<p>ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆದ 13 ದಿನಗಳ ಉತ್ಸವಕ್ಕೆ ಸಹೃದಯರು ಸಾಕ್ಷಿಯಾದರು. </p>.<p>ವಿದ್ವಾನ್ ಟಿ.ಎಂ.ಕೃಷ್ಣ ಅವರ ಗಾಯನದೊಂದಿಗೆ ಗರಿಗೆದರಿದ ಸಂಗೀತ ಉತ್ಸವಕ್ಕೆ ಉದ್ಯಮಿ ಕ್ಯಾಪ್ಟನ್ ಜಿ.ಗೋಪಿನಾಥ್ ಸೆ.28ರಂದು ಚಾಲನೆ ನೀಡಿದ್ದರು. </p>.<p>ಮೇಲುಕೋಟೆ ನಾಗೇಶ್, ರಾಹುಲ್ ವೆಲ್ಲಾಳ್, ಪೃಥ್ವಿ ಭಾಸ್ಕರ್, ಮನ್ನಾರ್ಗುಡಿ ಶಂಕರ್ ರಾಮನ್, ಪದ್ಮಾ ಶಂಕರ್, ರಮಣ ಬಾಲಚಂದರ್, ಇಶಾನ್ ಘೋಷ್, ಭಾರದ್ವಾಜ್ ಸಾತವಲ್ಲಿ, ಸುನಿಲ್ ಗಾರ್ಗ್ಯಾನ್, ಕಾರ್ತಿಕ್ ಪ್ರಣವ್ ಇದೇ ಮೊದಲ ಬಾರಿ ಕಛೇರಿಯನ್ನು ನೀಡಿದರು. </p>.<p>ಅಕ್ಕರೈ ಸೋದರಿಯರು, ಬೆಂಗಳೂರು ಸಹೋದರರು, ವಿನಯ್ ಶರ್ವ, ಅಭಿಷೇಕ್ ರಘುರಾಮ್, ವಿದ್ವಾನ್ ವಿಠ್ಠಲ ರಾಮಮೂರ್ತಿ, ನೆಮ್ಮಾರ ಕಣ್ಣನ್– ಆನಂದ ಬ್ರಹ್ಮ ನಾದ ಹಾಗೂ ಗಾಯನ ಲಹರಿಯು ಕಿವಿದುಂಬಿತ್ತು. </p>.<p><strong>ಗಣೇಶ ವಿಸರ್ಜನೆ:</strong> ಪ್ರತಿಷ್ಠಾಪಿಸಲಾಗಿದ್ದ ‘ನಾದಪ್ರಿಯ’ ಗಣೇಶನ ವಿಸರ್ಜನೆ, ಸೋಮವಾರ ಸಂಜೆ ನಡೆಯಿತು. ಇದಕ್ಕೂ ಮೊದಲು ಚಳ್ಳಕೆರೆ ಶ್ರೀನಿವಾಸ ಹಾಗೂ ವೇಣುಗೋಪಾಲ್ ಪವಮಾನ ಹೋಮ ನಡೆಸಿದರು. ನಂತರ ಅನ್ನಸಂತರ್ಪಣೆಯೂ ನಡೆಯಿತು. </p>.<p>ಟ್ರಸ್ಟ್ ಕಾರ್ಯದರ್ಶಿ ಸಿ.ಆರ್.ಹಿಮಾಂಶು ಮಾತನಾಡಿ, ‘ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ಕೊನೆಗೊಂಡಿದೆ. ದಾನಿಗಳು, ಪೋಷಕರು, ಸಹೃದಯರು ನೇರ ಹಾಗೂ ಪರೀಕ್ಷವಾಗಿ ಉತ್ಸವದ ಯಶಸ್ಸಿಗೆ ಶ್ರಮಿಸಿದ್ದಾರೆ’ ಎಂದು ಸ್ಮರಿಸಿದರು.</p>.<p>ಟ್ರಸ್ಟ್ ಅಧ್ಯಕ್ಷ ಎಂ.ಜಗನ್ನಾಥ ಶೆಣೈ, ಉಪಾಧ್ಯಕ್ಷ ಟಿ.ಎಸ್. ವೇಣುಗೋಪಾಲ್, ಖಜಾಂಚಿ ಆರ್.ಗುರುರಾಜ್, ಟ್ರಸ್ಟಿಗಳಾದ ಶೈಲಜಾ, ಅಮರೇಶ ದಾಸ್, ಎಂ.ಕೆ. ಶ್ರೀಧರ್, ವಸಂತ್, ಸಿ.ಚಲುವರಾಜ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>