<p><strong>ಮೈಸೂರು</strong>: ಶತಮಾನೋತ್ಸವದ ಸಂಭ್ರಮದಲ್ಲಿರುವ ಕೆ.ಆರ್.ಆಸ್ಪತ್ರೆಯಲ್ಲಿ ಬಿರುಕು ಬಿಟ್ಟ ಗೋಡೆಗಳ ನಡುವೆಯೇ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಅನೇಕ ಕಡೆಗಳಲ್ಲಿ ಸಿಮೆಂಟ್ ಎದ್ದು ಬಂದಿದ್ದು, ಗೋಡೆಗಳು ದುರಸ್ತಿಗಾಗಿ ಕಾಯುತ್ತಿವೆ.</p>.<p>ಈಚೆಗೆ ಆಸ್ಪತ್ರೆಯಲ್ಲಿರುವ ಕಟ್ಟಡಗಳ ಅವ್ಯವಸ್ಥೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದು, ಅದರಲ್ಲಿ, ಅಪಘಾತವಾದವರಿಗೆ ಚಿಕಿತ್ಸೆ ನೀಡುವ ಕೊಠಡಿ ಚಿತ್ರೀಕರಿಸಿ, ‘ಇದು ಶತಮಾನೋತ್ಸವ ಆಚರಿಸುತ್ತಿರುವ ಆಸ್ಪತ್ರೆ’ ಎಂದು ವ್ಯಂಗ್ಯವಾಗಿ ಬರೆಯಲಾಗಿತ್ತು. ಇದೇ ರೀತಿ ಗೋಡೆಗೆ ಬಳಿದ ಬಣ್ಣದ ಪದರುಗಳು ಕೂಡ ಉದುರುತ್ತಿವೆ.</p>.<p>ಕಣ್ಣಿನ ತಪಾಸಣೆ ನಡೆಸುವ ಕೊಠಡಿಯು ಹಳೆಯ ಕಟ್ಟಡದಲ್ಲಿದೆ. ಗೋಡೆಯ ಕಾಂಕ್ರಿಟ್ ಕಳಚಿ ಬಿದ್ದಿದೆ. ಅದರ ನಡುವೆಯೇ ರೋಗಿಗಳು ಚಿಕಿತ್ಸೆ ಪಡೆಯಬೇಕು. ಕರ್ತವ್ಯ ನಿರತ ವೈದ್ಯರ ಕೊಠಡಿಗಳಲ್ಲೂ ಸ್ವಚ್ಛತೆ ಇಲ್ಲ. ಗೋಡೆಗಳೂ ಬಿರುಕು ಬಿಟ್ಟಿವೆ.</p>.<p>ಆಡಳಿತ ಮಂಡಳಿಯು ಸರ್ಕಾರದ ಅನುದಾನದಲ್ಲಿ ಆಸ್ಪತ್ರೆ ನವೀಕರಣದ ಕೆಲಸಗಳನ್ನು ಮಾಡಿಸುತ್ತಿದ್ದು, ‘ಸೆಪ್ಟೆಂಬರ್ನಲ್ಲಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ಮೊದಲು ಗೋಡೆಗಳು ಮೊದಲಿನ ಸ್ಥಿತಿಗೆ ತಲುಪಬಹುದೇ’ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.</p>.<p><strong>ಶೌಚಾಲಯ ಸ್ವಚ್ಛವಿಲ್ಲ:</strong> ‘ಆಸ್ಪತ್ರೆಯ ಪ್ರತಿ ವಾರ್ಡ್ನಲ್ಲೂ ಶೌಚಾಲಯಗಳಿದ್ದು, ದುರ್ನಾತ ಬೀರುತ್ತಿವೆ. ಅನೇಕ ಬಾರಿ ರೋಗಿಗಳು ಸಾಧ್ಯವಾದಷ್ಟು ಶೌಚಾಲಯದಿಂದ ದೂರವಿರುವ ಬೆಡ್ಗಳಿಗೆ ಬೇಡಿಕೆ ಇಡುತ್ತಾರೆ’ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇಲ್ಲಿ ಪತ್ನಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದೇನೆ. ಸಿಬ್ಬಂದಿ ನೆಪ ಮಾತ್ರಕ್ಕೆ ಶೌಚಾಲಯ ಸ್ವಚ್ಛಗೊಳಿಸಿ ತೆರಳುತ್ತಾರೆ. ದುರ್ವಾಸನೆಯ ನಡುವೆಯೇ ದಿನ ಕಳೆಯಬೇಕು’ ಎಂದು ರೋಗಿಯೊಬ್ಬರ ಸಹಾಯಕರು ಅಸಹಾಯಕತೆ ವ್ಯಕ್ತಪಡಿಸಿದರು.</p>.<p><strong>ಕುಡುಕರ ಉಪಟಳ: </strong>ಆಸ್ಪತ್ರೆ ಆವರಣದಲ್ಲಿ ಕುಡುಕರು ಹಾಗೂ ಧೂಮಪಾನಿಗಳ ಉಪಟಳ ಹೆಚ್ಚಿದೆ. ರಾತ್ರಿ ವೇಳೆ ಹೊರಗೆ ಮದ್ಯ ಸೇವಿಸಿ ಬಂದು ಆಸ್ಪತ್ರೆ ಆವರಣ ಸೇರಿಕೊಳ್ಳುತ್ತಾರೆ. ಜನರ ಓಡಾಟ ಕಡಿಮೆ ಇರುವ ಪ್ರದೇಶದಲ್ಲಿ ಮಲಗುತ್ತಾರೆ. ತೃತೀಯ ಲಿಂಗಿಗಳೂ ಇಲ್ಲಿಗೇ ಬಂದಿರುತ್ತಾರೆ.</p>.<p>ಈಚೆಗೆ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಅವರನ್ನು ನೋಡಿ ಭಯದಿಂದ ಓಡಿ ಹೋದ ಪ್ರಸಂಗವೂ ನಡೆದಿದೆ. ‘ಪ್ರಜಾವಾಣಿ’ ಸರಣಿ ಬಳಿಕ ಇಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ‘ಪ್ರವೇಶ ದ್ವಾರದಲ್ಲೇ ಅವರನ್ನು ತಡೆದು ಹೊರಗೆ ಕಳಿಸುವ ವ್ಯವಸ್ಥೆ ಆಗಬೇಕು’ ಎಂಬುದು ಸಾರ್ವಜನಿಕರ ಆಗ್ರಹ.</p>.<p>ರೈಲು ನಿಲ್ದಾಣಕ್ಕೆ ಬರುವವರಿಗೂ ಇದು ಅತಿಥಿ ಗೃಹದಂತಾಗಿದೆ. ರೈಲು ನಿಲ್ದಾಣದಿಂದ ಮುಖ್ಯರಸ್ತೆಯಲ್ಲಿ ನೇರವಾಗಿ ಬಂದಾಗ ಆಸ್ಪತ್ರೆ ದೊರೆಯುವುದರಿಂದ ಅನೇಕರು ಇದೇ ಆವರಣದಲ್ಲಿ ರಾತ್ರಿ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ರೋಗಿಗಳಿಗೆ ಚಿಕಿತ್ಸೆಗಾಗಿ ಇರುವ ಆಸ್ಪತ್ರೆ ಇತರರ ವಿಶ್ರಾಂತಿ ತಾಣವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವೂ ಗಮನಹರಿಸಬೇಕು ಎನ್ನುವುದು ಇಲ್ಲಿನ ಅಧಿಕಾರಿಗಳ ಮಾತು.</p>.<div><blockquote>- ಆಸ್ಪತ್ರೆಯ ನವೀಕರಣ ಕೆಲಸಗಳು ಭರದಿಂದ ಸಾಗುತ್ತಿವೆ. ಗೋಡೆಗಳ ದುರಸ್ತಿ ಮಾಡಲಾಗುತ್ತಿದೆ. ಎಲ್ಲಾ ಕೊಠಡಿಗಳಿಗೂ ಸುಣ್ಣ–ಬಣ್ಣ ಬಳಿಯಲಾಗುವುದು ತಿಂಗಳ ಒಳಗಾಗಿ ಈ ಕೆಲಸ ಪೂರ್ಣಗೊಳ್ಳಲಿದೆ.</blockquote><span class="attribution">ಶೋಭಾ ಕೆ.ಆರ್.ಆಸ್ಪತ್ರೆ ಸೂಪರಿಂಟೆಂಡೆಂಟ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಶತಮಾನೋತ್ಸವದ ಸಂಭ್ರಮದಲ್ಲಿರುವ ಕೆ.ಆರ್.ಆಸ್ಪತ್ರೆಯಲ್ಲಿ ಬಿರುಕು ಬಿಟ್ಟ ಗೋಡೆಗಳ ನಡುವೆಯೇ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಅನೇಕ ಕಡೆಗಳಲ್ಲಿ ಸಿಮೆಂಟ್ ಎದ್ದು ಬಂದಿದ್ದು, ಗೋಡೆಗಳು ದುರಸ್ತಿಗಾಗಿ ಕಾಯುತ್ತಿವೆ.</p>.<p>ಈಚೆಗೆ ಆಸ್ಪತ್ರೆಯಲ್ಲಿರುವ ಕಟ್ಟಡಗಳ ಅವ್ಯವಸ್ಥೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದು, ಅದರಲ್ಲಿ, ಅಪಘಾತವಾದವರಿಗೆ ಚಿಕಿತ್ಸೆ ನೀಡುವ ಕೊಠಡಿ ಚಿತ್ರೀಕರಿಸಿ, ‘ಇದು ಶತಮಾನೋತ್ಸವ ಆಚರಿಸುತ್ತಿರುವ ಆಸ್ಪತ್ರೆ’ ಎಂದು ವ್ಯಂಗ್ಯವಾಗಿ ಬರೆಯಲಾಗಿತ್ತು. ಇದೇ ರೀತಿ ಗೋಡೆಗೆ ಬಳಿದ ಬಣ್ಣದ ಪದರುಗಳು ಕೂಡ ಉದುರುತ್ತಿವೆ.</p>.<p>ಕಣ್ಣಿನ ತಪಾಸಣೆ ನಡೆಸುವ ಕೊಠಡಿಯು ಹಳೆಯ ಕಟ್ಟಡದಲ್ಲಿದೆ. ಗೋಡೆಯ ಕಾಂಕ್ರಿಟ್ ಕಳಚಿ ಬಿದ್ದಿದೆ. ಅದರ ನಡುವೆಯೇ ರೋಗಿಗಳು ಚಿಕಿತ್ಸೆ ಪಡೆಯಬೇಕು. ಕರ್ತವ್ಯ ನಿರತ ವೈದ್ಯರ ಕೊಠಡಿಗಳಲ್ಲೂ ಸ್ವಚ್ಛತೆ ಇಲ್ಲ. ಗೋಡೆಗಳೂ ಬಿರುಕು ಬಿಟ್ಟಿವೆ.</p>.<p>ಆಡಳಿತ ಮಂಡಳಿಯು ಸರ್ಕಾರದ ಅನುದಾನದಲ್ಲಿ ಆಸ್ಪತ್ರೆ ನವೀಕರಣದ ಕೆಲಸಗಳನ್ನು ಮಾಡಿಸುತ್ತಿದ್ದು, ‘ಸೆಪ್ಟೆಂಬರ್ನಲ್ಲಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ಮೊದಲು ಗೋಡೆಗಳು ಮೊದಲಿನ ಸ್ಥಿತಿಗೆ ತಲುಪಬಹುದೇ’ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.</p>.<p><strong>ಶೌಚಾಲಯ ಸ್ವಚ್ಛವಿಲ್ಲ:</strong> ‘ಆಸ್ಪತ್ರೆಯ ಪ್ರತಿ ವಾರ್ಡ್ನಲ್ಲೂ ಶೌಚಾಲಯಗಳಿದ್ದು, ದುರ್ನಾತ ಬೀರುತ್ತಿವೆ. ಅನೇಕ ಬಾರಿ ರೋಗಿಗಳು ಸಾಧ್ಯವಾದಷ್ಟು ಶೌಚಾಲಯದಿಂದ ದೂರವಿರುವ ಬೆಡ್ಗಳಿಗೆ ಬೇಡಿಕೆ ಇಡುತ್ತಾರೆ’ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇಲ್ಲಿ ಪತ್ನಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದೇನೆ. ಸಿಬ್ಬಂದಿ ನೆಪ ಮಾತ್ರಕ್ಕೆ ಶೌಚಾಲಯ ಸ್ವಚ್ಛಗೊಳಿಸಿ ತೆರಳುತ್ತಾರೆ. ದುರ್ವಾಸನೆಯ ನಡುವೆಯೇ ದಿನ ಕಳೆಯಬೇಕು’ ಎಂದು ರೋಗಿಯೊಬ್ಬರ ಸಹಾಯಕರು ಅಸಹಾಯಕತೆ ವ್ಯಕ್ತಪಡಿಸಿದರು.</p>.<p><strong>ಕುಡುಕರ ಉಪಟಳ: </strong>ಆಸ್ಪತ್ರೆ ಆವರಣದಲ್ಲಿ ಕುಡುಕರು ಹಾಗೂ ಧೂಮಪಾನಿಗಳ ಉಪಟಳ ಹೆಚ್ಚಿದೆ. ರಾತ್ರಿ ವೇಳೆ ಹೊರಗೆ ಮದ್ಯ ಸೇವಿಸಿ ಬಂದು ಆಸ್ಪತ್ರೆ ಆವರಣ ಸೇರಿಕೊಳ್ಳುತ್ತಾರೆ. ಜನರ ಓಡಾಟ ಕಡಿಮೆ ಇರುವ ಪ್ರದೇಶದಲ್ಲಿ ಮಲಗುತ್ತಾರೆ. ತೃತೀಯ ಲಿಂಗಿಗಳೂ ಇಲ್ಲಿಗೇ ಬಂದಿರುತ್ತಾರೆ.</p>.<p>ಈಚೆಗೆ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಅವರನ್ನು ನೋಡಿ ಭಯದಿಂದ ಓಡಿ ಹೋದ ಪ್ರಸಂಗವೂ ನಡೆದಿದೆ. ‘ಪ್ರಜಾವಾಣಿ’ ಸರಣಿ ಬಳಿಕ ಇಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ‘ಪ್ರವೇಶ ದ್ವಾರದಲ್ಲೇ ಅವರನ್ನು ತಡೆದು ಹೊರಗೆ ಕಳಿಸುವ ವ್ಯವಸ್ಥೆ ಆಗಬೇಕು’ ಎಂಬುದು ಸಾರ್ವಜನಿಕರ ಆಗ್ರಹ.</p>.<p>ರೈಲು ನಿಲ್ದಾಣಕ್ಕೆ ಬರುವವರಿಗೂ ಇದು ಅತಿಥಿ ಗೃಹದಂತಾಗಿದೆ. ರೈಲು ನಿಲ್ದಾಣದಿಂದ ಮುಖ್ಯರಸ್ತೆಯಲ್ಲಿ ನೇರವಾಗಿ ಬಂದಾಗ ಆಸ್ಪತ್ರೆ ದೊರೆಯುವುದರಿಂದ ಅನೇಕರು ಇದೇ ಆವರಣದಲ್ಲಿ ರಾತ್ರಿ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ರೋಗಿಗಳಿಗೆ ಚಿಕಿತ್ಸೆಗಾಗಿ ಇರುವ ಆಸ್ಪತ್ರೆ ಇತರರ ವಿಶ್ರಾಂತಿ ತಾಣವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವೂ ಗಮನಹರಿಸಬೇಕು ಎನ್ನುವುದು ಇಲ್ಲಿನ ಅಧಿಕಾರಿಗಳ ಮಾತು.</p>.<div><blockquote>- ಆಸ್ಪತ್ರೆಯ ನವೀಕರಣ ಕೆಲಸಗಳು ಭರದಿಂದ ಸಾಗುತ್ತಿವೆ. ಗೋಡೆಗಳ ದುರಸ್ತಿ ಮಾಡಲಾಗುತ್ತಿದೆ. ಎಲ್ಲಾ ಕೊಠಡಿಗಳಿಗೂ ಸುಣ್ಣ–ಬಣ್ಣ ಬಳಿಯಲಾಗುವುದು ತಿಂಗಳ ಒಳಗಾಗಿ ಈ ಕೆಲಸ ಪೂರ್ಣಗೊಳ್ಳಲಿದೆ.</blockquote><span class="attribution">ಶೋಭಾ ಕೆ.ಆರ್.ಆಸ್ಪತ್ರೆ ಸೂಪರಿಂಟೆಂಡೆಂಟ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>