<p><strong>ಮೈಸೂರು: </strong>ದಟ್ಟ ದುರ್ವಾಸನೆಯ ಮಧ್ಯೆಯೇ ಮಂಗಳವಾರ ಶಾಸಕ ವಿ.ಎಸ್.ಉಗ್ರಪ್ಪ ಇಲ್ಲಿನ ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು.</p>.<p>ಒಂದು ಗಂಟೆಯಲ್ಲಿಯೇ ಅಲ್ಲಿನ ದುರ್ವಾಸನೆಯಿಂದ ತಲೆನೋವು ಬಂದಿತು. ಇನ್ನು ಇಲ್ಲಿನ ವಿದ್ಯಾರ್ಥಿನಿಯರು ಹೇಗಿರಬೇಕು ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಹಾಸ್ಟೆಲ್ನ ಆವರಣದಲ್ಲೇ ಹರಿಯುತ್ತಿರುವ ದೊಡ್ಡ ಮೋರಿಯಿಂದ ದುರ್ವಾಸನೆ ಹೊಮ್ಮುತ್ತಿದೆ. ಇದನ್ನು ನಿವಾರಿಸುವ ಗೋಜಿಗೆ ಯಾರೂ ಹೋಗಿಲ್ಲ. ಹಾಸ್ಟೆಲ್ ಒಳಗೂ ಕಮಟು ವಾಸನೆ ಮೂಗಿಗೆ ಅಡರುತ್ತಿದೆ. ಇಷ್ಟು ದುರಾವಸ್ಥೆಯಲ್ಲಿ ವಿದ್ಯಾರ್ಥಿನಿಯರು ಹೇಗೆ ತಾನೇ ಇರಬೇಕು’ ಎಂದು ಪ್ರಶ್ನಿಸಿದರು.</p>.<p>ಹಾಸ್ಟೆಲ್ಗೆ ಬರುತ್ತಿರುವ ಅನುದಾನ ಕುರಿತು ಕೇಳಲಾದ ಪ್ರಶ್ನೆಗೆ ಪ್ರಾಂಶುಪಾಲರಾಗಲಿ, ವಾರ್ಡನ್ ಆಗಲಿ ಉತ್ತರಿಸಲಿಲ್ಲ. ಊಟದ ವೆಚ್ಚವನ್ನು ವಿದ್ಯಾರ್ಥಿನಿಯರೇ ಭರಿಸಬೇಕು ಎಂಬುದನ್ನು ಕೇಳಿ ಉಗ್ರಪ್ಪ ಆಶ್ಚರ್ಯ ವ್ಯಕ್ತಪಡಿಸಿದರು.</p>.<p>‘ನಿಮ್ಮ ಮಕ್ಕಳಾದರೆ ಇಂತಹ ಹಾಸ್ಟೆಲ್ನಲ್ಲಿ ಇರಿಸುತ್ತಿದ್ದೀರಾ’ ಎಂದು ಕಟುವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರು. ‘ವಿದ್ಯಾರ್ಥಿನಿಯರು ಬಟ್ಟೆ ಒಗೆಯುವ ಕಡೆ, ಸ್ನಾನದ ಮನೆ ಇರುವ ಕಡೆ ಸಿಸಿಟಿವಿ ಹಾಕಿದ್ದೀರಿ. ಅದೇ ಹಾಸ್ಟೆಲ್ ಹಿಂಬದಿ ಹಾಕಿಲ್ಲ. ಇದು ಎಷ್ಟು ಸರಿ’ ಎಂದು ತರಾಟೆಗೆ ತೆಗೆದುಕೊಂಡರು.</p>.<p>3 ವರ್ಷಗಳಿಂದ ಅನಾಮಿಕ ವ್ಯಕ್ತಿ ಹಾಸ್ಟೆಲ್ ಪ್ರವೇಶಿಸುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿದ್ಯಾರ್ಥಿನಿಯರ ಬದುಕಿನ ಜತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.</p>.<p>ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎನಿಸಿದರೆ ‘ವಿ.ಎಸ್.ಉಗ್ರಪ್ಪ, ಶಾಸಕರ ಭವನ, ಬೆಂಗಳೂರು’ ವಿಳಾಸಕ್ಕೆ ಅಂಚೆ ಮೂಲಕ ತಿಳಿಸಬಹುದು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.</p>.<p>ಅಖಂಡ ಕರ್ನಾಟಕ ಉಳಿಯಬೇಕು. ಪ್ರತ್ಯೇಕತೆಯ ಕೂಗು ಸರಿಯಲ್ಲ. ಯಾವುದೇ ಪಕ್ಷದವರಾದರೂ ಇಂತಹ ಕೂಗಿಗೆ ಬೆಂಬಲ ನೀಡಿದರೆ ಅದನ್ನು ಖಂಡಿಸುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ದಟ್ಟ ದುರ್ವಾಸನೆಯ ಮಧ್ಯೆಯೇ ಮಂಗಳವಾರ ಶಾಸಕ ವಿ.ಎಸ್.ಉಗ್ರಪ್ಪ ಇಲ್ಲಿನ ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು.</p>.<p>ಒಂದು ಗಂಟೆಯಲ್ಲಿಯೇ ಅಲ್ಲಿನ ದುರ್ವಾಸನೆಯಿಂದ ತಲೆನೋವು ಬಂದಿತು. ಇನ್ನು ಇಲ್ಲಿನ ವಿದ್ಯಾರ್ಥಿನಿಯರು ಹೇಗಿರಬೇಕು ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಹಾಸ್ಟೆಲ್ನ ಆವರಣದಲ್ಲೇ ಹರಿಯುತ್ತಿರುವ ದೊಡ್ಡ ಮೋರಿಯಿಂದ ದುರ್ವಾಸನೆ ಹೊಮ್ಮುತ್ತಿದೆ. ಇದನ್ನು ನಿವಾರಿಸುವ ಗೋಜಿಗೆ ಯಾರೂ ಹೋಗಿಲ್ಲ. ಹಾಸ್ಟೆಲ್ ಒಳಗೂ ಕಮಟು ವಾಸನೆ ಮೂಗಿಗೆ ಅಡರುತ್ತಿದೆ. ಇಷ್ಟು ದುರಾವಸ್ಥೆಯಲ್ಲಿ ವಿದ್ಯಾರ್ಥಿನಿಯರು ಹೇಗೆ ತಾನೇ ಇರಬೇಕು’ ಎಂದು ಪ್ರಶ್ನಿಸಿದರು.</p>.<p>ಹಾಸ್ಟೆಲ್ಗೆ ಬರುತ್ತಿರುವ ಅನುದಾನ ಕುರಿತು ಕೇಳಲಾದ ಪ್ರಶ್ನೆಗೆ ಪ್ರಾಂಶುಪಾಲರಾಗಲಿ, ವಾರ್ಡನ್ ಆಗಲಿ ಉತ್ತರಿಸಲಿಲ್ಲ. ಊಟದ ವೆಚ್ಚವನ್ನು ವಿದ್ಯಾರ್ಥಿನಿಯರೇ ಭರಿಸಬೇಕು ಎಂಬುದನ್ನು ಕೇಳಿ ಉಗ್ರಪ್ಪ ಆಶ್ಚರ್ಯ ವ್ಯಕ್ತಪಡಿಸಿದರು.</p>.<p>‘ನಿಮ್ಮ ಮಕ್ಕಳಾದರೆ ಇಂತಹ ಹಾಸ್ಟೆಲ್ನಲ್ಲಿ ಇರಿಸುತ್ತಿದ್ದೀರಾ’ ಎಂದು ಕಟುವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರು. ‘ವಿದ್ಯಾರ್ಥಿನಿಯರು ಬಟ್ಟೆ ಒಗೆಯುವ ಕಡೆ, ಸ್ನಾನದ ಮನೆ ಇರುವ ಕಡೆ ಸಿಸಿಟಿವಿ ಹಾಕಿದ್ದೀರಿ. ಅದೇ ಹಾಸ್ಟೆಲ್ ಹಿಂಬದಿ ಹಾಕಿಲ್ಲ. ಇದು ಎಷ್ಟು ಸರಿ’ ಎಂದು ತರಾಟೆಗೆ ತೆಗೆದುಕೊಂಡರು.</p>.<p>3 ವರ್ಷಗಳಿಂದ ಅನಾಮಿಕ ವ್ಯಕ್ತಿ ಹಾಸ್ಟೆಲ್ ಪ್ರವೇಶಿಸುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿದ್ಯಾರ್ಥಿನಿಯರ ಬದುಕಿನ ಜತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.</p>.<p>ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎನಿಸಿದರೆ ‘ವಿ.ಎಸ್.ಉಗ್ರಪ್ಪ, ಶಾಸಕರ ಭವನ, ಬೆಂಗಳೂರು’ ವಿಳಾಸಕ್ಕೆ ಅಂಚೆ ಮೂಲಕ ತಿಳಿಸಬಹುದು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.</p>.<p>ಅಖಂಡ ಕರ್ನಾಟಕ ಉಳಿಯಬೇಕು. ಪ್ರತ್ಯೇಕತೆಯ ಕೂಗು ಸರಿಯಲ್ಲ. ಯಾವುದೇ ಪಕ್ಷದವರಾದರೂ ಇಂತಹ ಕೂಗಿಗೆ ಬೆಂಬಲ ನೀಡಿದರೆ ಅದನ್ನು ಖಂಡಿಸುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>