<p><strong>ಮೈಸೂರು:</strong> ‘ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಜಾತಿ ಜನಗಣತಿ ಮುನ್ನೆಲೆಗೆ ತಂದಿದ್ದಾರೆ ಎಂಬುದು ಸುಳ್ಳು’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.</p>.<p>ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುರ್ಚಿಗೆ ಆಪತ್ತೆಲ್ಲಿ ಬಂದಿದೆ? ಅವರ ಕುರ್ಚಿ ಸುರಕ್ಷಿತವಾಗಿದೆ. ಇಳಿಸಬೇಕೆಂದು ಯಾರಾದರೂ ಹೇಳಿದ್ದಾರಾ? ನಮ್ಮ ಶಾಸಕರು ಮತ್ತು ಹೈಕಮಾಂಡ್ನವರು ಸಿ.ಎಂ. ಪರ ನಿಂತಿದ್ದಾರೆ’ ಎಂದರು.</p>.<p>‘ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಗೂ–ಜಾತಿ ಜನಗಣತಿ ವರದಿಗೂ ಸಂಬಂಧವಿಲ್ಲ. ಈಗಿನದಕ್ಕಿಂತಲೂ ಕಠಿಣ ಪರಿಸ್ಥಿತಿ ಹಿಂದೆ ಇತ್ತು. ಆದರೂ ಆಗ ವರದಿ ತಂದಿರಲಿಲ್ಲ’ ಎಂದು ಹೇಳಿದರು.</p>.<p>‘ಮುಡಾ ಕೇಸ್ ಇ.ಡಿಗೆ ವಹಿಸಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರುವುದಿಲ್ಲ. ಮುಂದಿನ ನ್ಯಾಯಾಲಯಕ್ಕೆ ಅಪೀಲು ಹಾಕುತ್ತೇವೆ. ಮುಡಾ ಪ್ರಕರಣದಲ್ಲಿ ಸತ್ಯಾಂಶವೇನೂ ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಹೆದರುವ ಅಗತ್ಯವಿಲ್ಲ’ ಎಂದರು.</p>.<p>‘ಇ.ಡಿ ಬೇಕೆಂದೇ ಹಿಂಸೆ ನೀಡುತ್ತಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಇ.ಡಿ ತನಿಖೆ ಅದರ ಪಾಡಿಗೆ ನಡೆಯುತ್ತದೆ; ಸಿದ್ದರಾಮಯ್ಯ ಕುರ್ಚಿಯಲ್ಲಿ ಮುಂದುವರಿಯುತ್ತಾರೆ. ಮುಡಾ ಕೇಸನ್ನು ಸಿಬಿಐಗೇ ಬೇಕಿದ್ದರೂ ಕೊಡಲಿ. ತಪ್ಪೇ ಮಾಡಿಲ್ಲವಾದ್ದರಿಂದ, ಹೆದರೋಲ್ಲ’ ಎಂದರು.</p>.<p>‘ಜಾತಿ ಜನಗಣತಿ ಮೂಲ ಪ್ರತಿ ಹಾಳಾಗಿದ್ದರೆ ಸ್ಪಷ್ಟನೆಯನ್ನು ಆಯೋಗದ ಅಂದಿನ ಮುಖ್ಯಸ್ಥರು ನೀಡುತ್ತಾರೆ. ಮೂಲ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪದಲ್ಲಿ ಹುರುಳಿಲ್ಲ’ ಎಂದು ಹೇಳಿದರು.</p>.<p>‘ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಪ್ರಬಲ ವರ್ಗಗಳಿಗೆ ಅನ್ಯಾಯ ಮಾಡಿಬಿಡುತ್ತಾರೆ ಎಂಬುದು ಪೂರ್ವಗ್ರಹಪೀಡಿತ. ಗಣತಿಯಿಂದ ಅನುಕೂಲ ಆಗುತ್ತದೆಯೇ ಹೊರತು ಯಾರಿಗೂ ಅನ್ಯಾಯವಾಗದು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತದೆ’ ಎಂದರು.</p>.<p>‘ಲಕ್ಷಾಂತರ ಶಿಕ್ಷಕರಿಂದ ಗಣತಿ ಮಾಡಿಸಲಾಗಿದೆ. ಮೋಸ ಮಾಡಿ ಎಂದು ಅಷ್ಟೂ ಮಂದಿಗೆ ಸಿಎಂ ಹೇಳಲಾಗುತ್ತದೆಯೇ? ಸಾಕ್ಷಿ– ಆಧಾರವಿಲ್ಲದೇ ಸಿದ್ದರಾಮಯ್ಯ ಗೂಬೆ ಕೂರಿಸುವುದು ತಪ್ಪು’ ಎಂದು ಪ್ರತಿಕ್ರಿಯಿಸಿದರು.</p>.<p>‘ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಖಂಡಿಸಿದ್ದೇವೆ. ಜನಿವಾರವಿರಲಿ, ಹಿಜಾಬ್ ಇರಲಿ ನಮ್ಮ ನಿಲುವು ಒಂದೇ. ಜನಿವಾರ ತೆಗೆಸಿದರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.</p>.ಜಾತಿ ಜನಗಣತಿ | ಶಾಸಕಾಂಗ ಸಭೆ ಕರೆಯಬೇಕು: ಶಾಸಕ ಬೇಳೂರು ಗೋಪಾಲಕೃಷ್ಣ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಜಾತಿ ಜನಗಣತಿ ಮುನ್ನೆಲೆಗೆ ತಂದಿದ್ದಾರೆ ಎಂಬುದು ಸುಳ್ಳು’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.</p>.<p>ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುರ್ಚಿಗೆ ಆಪತ್ತೆಲ್ಲಿ ಬಂದಿದೆ? ಅವರ ಕುರ್ಚಿ ಸುರಕ್ಷಿತವಾಗಿದೆ. ಇಳಿಸಬೇಕೆಂದು ಯಾರಾದರೂ ಹೇಳಿದ್ದಾರಾ? ನಮ್ಮ ಶಾಸಕರು ಮತ್ತು ಹೈಕಮಾಂಡ್ನವರು ಸಿ.ಎಂ. ಪರ ನಿಂತಿದ್ದಾರೆ’ ಎಂದರು.</p>.<p>‘ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಗೂ–ಜಾತಿ ಜನಗಣತಿ ವರದಿಗೂ ಸಂಬಂಧವಿಲ್ಲ. ಈಗಿನದಕ್ಕಿಂತಲೂ ಕಠಿಣ ಪರಿಸ್ಥಿತಿ ಹಿಂದೆ ಇತ್ತು. ಆದರೂ ಆಗ ವರದಿ ತಂದಿರಲಿಲ್ಲ’ ಎಂದು ಹೇಳಿದರು.</p>.<p>‘ಮುಡಾ ಕೇಸ್ ಇ.ಡಿಗೆ ವಹಿಸಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರುವುದಿಲ್ಲ. ಮುಂದಿನ ನ್ಯಾಯಾಲಯಕ್ಕೆ ಅಪೀಲು ಹಾಕುತ್ತೇವೆ. ಮುಡಾ ಪ್ರಕರಣದಲ್ಲಿ ಸತ್ಯಾಂಶವೇನೂ ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಹೆದರುವ ಅಗತ್ಯವಿಲ್ಲ’ ಎಂದರು.</p>.<p>‘ಇ.ಡಿ ಬೇಕೆಂದೇ ಹಿಂಸೆ ನೀಡುತ್ತಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಇ.ಡಿ ತನಿಖೆ ಅದರ ಪಾಡಿಗೆ ನಡೆಯುತ್ತದೆ; ಸಿದ್ದರಾಮಯ್ಯ ಕುರ್ಚಿಯಲ್ಲಿ ಮುಂದುವರಿಯುತ್ತಾರೆ. ಮುಡಾ ಕೇಸನ್ನು ಸಿಬಿಐಗೇ ಬೇಕಿದ್ದರೂ ಕೊಡಲಿ. ತಪ್ಪೇ ಮಾಡಿಲ್ಲವಾದ್ದರಿಂದ, ಹೆದರೋಲ್ಲ’ ಎಂದರು.</p>.<p>‘ಜಾತಿ ಜನಗಣತಿ ಮೂಲ ಪ್ರತಿ ಹಾಳಾಗಿದ್ದರೆ ಸ್ಪಷ್ಟನೆಯನ್ನು ಆಯೋಗದ ಅಂದಿನ ಮುಖ್ಯಸ್ಥರು ನೀಡುತ್ತಾರೆ. ಮೂಲ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪದಲ್ಲಿ ಹುರುಳಿಲ್ಲ’ ಎಂದು ಹೇಳಿದರು.</p>.<p>‘ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಪ್ರಬಲ ವರ್ಗಗಳಿಗೆ ಅನ್ಯಾಯ ಮಾಡಿಬಿಡುತ್ತಾರೆ ಎಂಬುದು ಪೂರ್ವಗ್ರಹಪೀಡಿತ. ಗಣತಿಯಿಂದ ಅನುಕೂಲ ಆಗುತ್ತದೆಯೇ ಹೊರತು ಯಾರಿಗೂ ಅನ್ಯಾಯವಾಗದು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತದೆ’ ಎಂದರು.</p>.<p>‘ಲಕ್ಷಾಂತರ ಶಿಕ್ಷಕರಿಂದ ಗಣತಿ ಮಾಡಿಸಲಾಗಿದೆ. ಮೋಸ ಮಾಡಿ ಎಂದು ಅಷ್ಟೂ ಮಂದಿಗೆ ಸಿಎಂ ಹೇಳಲಾಗುತ್ತದೆಯೇ? ಸಾಕ್ಷಿ– ಆಧಾರವಿಲ್ಲದೇ ಸಿದ್ದರಾಮಯ್ಯ ಗೂಬೆ ಕೂರಿಸುವುದು ತಪ್ಪು’ ಎಂದು ಪ್ರತಿಕ್ರಿಯಿಸಿದರು.</p>.<p>‘ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಖಂಡಿಸಿದ್ದೇವೆ. ಜನಿವಾರವಿರಲಿ, ಹಿಜಾಬ್ ಇರಲಿ ನಮ್ಮ ನಿಲುವು ಒಂದೇ. ಜನಿವಾರ ತೆಗೆಸಿದರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.</p>.ಜಾತಿ ಜನಗಣತಿ | ಶಾಸಕಾಂಗ ಸಭೆ ಕರೆಯಬೇಕು: ಶಾಸಕ ಬೇಳೂರು ಗೋಪಾಲಕೃಷ್ಣ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>