ಗೀತೆ ಈ ಬಾರಿಯ ಯುವ ಸಂಭ್ರಮಕ್ಕೆಂದೇ ವಿಶೇಷ ಥೀಮ್ ಗೀತೆಯನ್ನು ಸಿದ್ಧಪಡಿಸಿದ್ದು ಖ್ಯಾತ ಗಾಯಕ ವಿಜಯ್ಪ್ರಕಾಶ್ ಧ್ವನಿಗೂಡಿಸಿ ಜೋಶ್ ಹೆಚ್ಚಿಸಿದ್ದಾರೆ. ‘ಹೆಜ್ಜೆ ಮೇಲೆ ಹೆಜ್ಜೆ ಸೇರಿದೆ ಸದ್ದು ಊರ ತುಂಬ ಕೇಳಿದೆ.. ಎದ್ದು ಕುಣಿಯೋ ಹಾಗೆ ಮಾಡಿದೆ. ನಾಡ ಹಬ್ಬ ಶುರುವಾಗಿದೆ’ ಎಂದು ಶುರುವಾಗುವ ಈ ಗೀತೆಗೆ ಮೈಸೂರಿನವರೇ ಆದ ನೀತೂನಿನಾದ್ ಸಂಗೀತ ನೀಡಿದ್ದು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿಗಣಿ ಸೋಮಶೇಖರ್ ರಾಗ ಸಂಯೋಜನೆ ಜೊತೆಗೆ ಮನೋಜ್ ಸೌಗಂದ್ ಜೊತೆಗೂಡಿ ಸಾಹಿತ್ಯ ರಚಿಸಿದ್ದಾರೆ. 2 ನಿಮಿಷ 52 ಸೆಕೆಂಡುಗಳ ಅವಧಿಯ ಈ ಗೀತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.