<p><strong>ರಾಮನಗರ: </strong>ಜಿಲ್ಲೆಯ ಜನರಲ್ಲಿ ಎಚ್ಐವಿ/ಏಡ್ಸ್ ರೋಗದ ಬಗ್ಗೆ ಅರಿವು ಮೂಡುತ್ತಿದ್ದು, ವರ್ಷದಿಂದ ವರ್ಷಕ್ಕೆ ರೋಗಿಗಳ ಪ್ರಮಾಣವೂ ಇಳಿಮುಖವಾಗುತ್ತಿದೆ.</p>.<p>ಕಳೆದ ದಶಕಕ್ಕೆ ಹೋಲಿಸಿದರೆ ಈಚಿನ ವರ್ಷಗಳಲ್ಲಿ ರೋಗಿಗಳ ಪ್ರಮಾಣ ಕಡಿಮೆಯಾಗಿರುವುದು ಸಮಾಧಾನದ ಸಂಗತಿಯಾಗಿದೆ. ಎಚ್ಐವಿ ಹರಡುವ ಬಗೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿರುವುದು ಇದಕ್ಕೆ ಕಾರಣವಾಗಿದೆ.</p>.<p>ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 194 ಮಂದಿಯಲ್ಲಿ ಹೊಸದಾಗಿ ಈ ರೋಗವು ಪತ್ತೆಯಾಗಿದೆ. ಇವರಲ್ಲಿ 8 ಎಂಟು ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಪೀಡಿತರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಗರ್ಭಿಣಿಯರಲ್ಲೂ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತಹ ಮಹಿಳೆಯರ ಹೊಟ್ಟೆಯಲ್ಲಿರುವ ಶಿಶುಗಳಿಗೆ ರೋಗ ತಗುಲದಂತೆ ಚಿಕಿತ್ಸೆ ನೀಡುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.</p>.<p>ವಲಸೆ ಕಾರ್ಮಿಕರಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕನಕಪುರ ಹಾಗೂ ರಾಮನಗರ ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇಲ್ಲಿನ ಗಣಿ ಪ್ರದೇಶಗಳಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿದ್ದಾರೆ. ಅಶಿಕ್ಷಿತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಲ್ಲಿ ಈ ರೋಗದ ಬಗ್ಗೆ ಅರಿವಿನ ಕೊರತೆ ಇದೆ. ಹೀಗಾಗಿ ಇಂತಹ ಕಾರ್ಮಿಕರಲ್ಲಿ ಎಚ್ಐವಿ ಪೀಡಿತರು ಹೆಚ್ಚಾಗಿ ಕಂಡುಬಂದಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.</p>.<p>ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್ಐವಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಅದರಲ್ಲಿಯೂ ಗರ್ಭಿಣಿಯರನ್ನು ಕಡ್ಡಾಯವಾಗಿ ಈ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಒಂದು ವೇಳೆ ಅಂತಹ ಮಹಿಳೆಯರು ಸೋಂಕು ಪೀಡಿತರಾಗಿದ್ದಲ್ಲಿ ಗರ್ಭದಲ್ಲಿನ ಮಗುವನ್ನು ಸೂಕ್ತ ವೈದ್ಯೋಪಚಾರದಿಂದ ರಕ್ಷಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.</p>.<p>‘ಎಚ್ಐವಿ/ಏಡ್ಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯ ಕ್ರಮವೇ ಮದ್ದು’ ಎನ್ನುತ್ತಾರೆ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾ ಅಧಿಕಾರಿ ಡಾ. ಟಿ. ಅರುಣ್ಕುಮಾರ್. ‘ಈಗ ಜನರಲ್ಲಿಯೂ ಈ ಬಗ್ಗೆ ಸಾಕಷ್ಟು ಅರಿವು ಮೂಡುತ್ತಿದೆ. ಹೀಗಾಗಿ ರೋಗದ ಪ್ರಮಾಣವೂ ಕಡಿಮೆ ಆಗಿದೆ. ಆದಾಗ್ಯೂ ಹೆಚ್ಚೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ರೋಗ ಹರಡುವ ಬಗೆ ಹಾಗೂ ಅದರ ದುಷ್ಪರಿಣಾಮಗಳ ಅರಿವು ಮೂಡಿಸುವುದು, ಕಾಂಡೋಮ್ ಬಳಕೆಗೆ ಪ್ರೋತ್ಸಾಹಿಸುವುದು. ಜನರಲ್ಲಿ ಈ ಬಗೆಗಿನ ಮುಜುಗರವನ್ನು ಹೋಗಲಾಡಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.</p>.<p><strong>ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪತ್ತೆಯಾದ ಎಚ್ಐವಿ ಪೀಡಿತರ ಪ್ರಮಾಣ</strong></p>.<p><strong>ವರ್ಷ ಪರೀಕ್ಷೆಗೆ ಒಳಗಾದವರು ಎಚ್ಐವಿ ಪೀಡಿತರು</strong><br />2007–08 5388 128<br />2008–09 16,335 437<br />2009–10 21,768 423<br />2010–11 20,374 285<br />2011–12 33,681 350<br />2012–13 24,826 265<br />2013–14 45,366 177<br />2014–15 46,528 190<br />2015–16 49,819 179<br />2016–17 54,035 157<br />2017–18 54,469 194<br />2018(ಅಕ್ಟೋಬರ್ ಅಂತ್ಯಕ್ಕೆ) 33,359 100</p>.<p><strong>2017–18ರಲ್ಲಿ ತಾಲ್ಲೂಕುವಾರು ರೋಗ ಪತ್ತೆ ಪ್ರಮಾಣ<br />ತಾಲ್ಲೂಕು ಪರೀಕ್ಷೆಗೆ ಒಳಗಾದವರು ಎಚ್ಐವಿ ಪೀಡಿತರು</strong><br />ಚನ್ನಪಟ್ಟಣ 9883 41<br />ಮಾಗಡಿ 11,725 14<br />ಕನಕಪುರ 13,520 74<br />ರಾಮನಗರ 19,341 65</p>.<p><strong>2018ರಲ್ಲಿ (ಏಪ್ರಿಲ್ನಿಂದ ಅಕ್ಟೋಬರ್ವರೆಗೆ ) ರೋಗ ಪತ್ತೆ ಪ್ರಮಾಣ<br />ತಾಲ್ಲೂಕು ಪರೀಕ್ಷೆಗೆ ಒಳಗಾದವರು ಎಚ್ಐವಿ ಪೀಡಿತರು</strong><br />ಚನ್ನಪಟ್ಟಣ 6453 15<br />ಮಾಗಡಿ 8477 21<br />ಕನಕಪುರ 9879 36<br />ರಾಮನಗರ 8550 28</p>.<p>* ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಎಚ್ಐವಿ ಬಾಧಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ರೋಗ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವೂ ನಿರಂತರ ನಡೆದಿದೆ<br /><strong>-ಡಾ. ಟಿ. ಅರುಣ್ಕುಮಾರ್,</strong>ಜಿಲ್ಲಾ ಎಚ್ಐವಿ/ಏಡ್ಸ್ ರೋಗ ನಿಯಂತ್ರಣಾಧಿಕಾರಿ</p>.<p><strong>ರಾಮನಗರಕ್ಕೆ ಪ್ರಶಸ್ತಿ</strong><br />ಎಚ್ಐವಿ/ಏಡ್ಸ್ ನಿಯಂತ್ರಣ ಕುರಿತು ಉತ್ತಮ ಕಾರ್ಯಕ್ರಮ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆಗೆ ಈ ಬಾರಿ ರಾಜ್ಯ ಸರ್ಕಾರದ ಪ್ರಶಸ್ತಿಯು ಲಭಿಸಿದೆ.</p>.<p>ರಾಮನಗರದೊಟ್ಟಿಗೆ ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳು ಈ ಗೌರವಕ್ಕೆ ಪಾತ್ರವಾಗಿವೆ. ಶನಿವಾರ ವಿಜಯಪುರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಲಿದೆ. ‘ರೋಗ ನಿಯಂತ್ರಣದ ಜೊತೆಗೆ ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಕಾಳಜಿಗೆ ತೆಗೆದುಕೊಂಡ ಕ್ರಮಗಳಿಂದಾಗಿ ಈ ಪುರಸ್ಕಾರ ದೊರೆತಿದೆ’ ಎಂದು ಡಾ. ಅರುಣ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಜಿಲ್ಲೆಯ ಜನರಲ್ಲಿ ಎಚ್ಐವಿ/ಏಡ್ಸ್ ರೋಗದ ಬಗ್ಗೆ ಅರಿವು ಮೂಡುತ್ತಿದ್ದು, ವರ್ಷದಿಂದ ವರ್ಷಕ್ಕೆ ರೋಗಿಗಳ ಪ್ರಮಾಣವೂ ಇಳಿಮುಖವಾಗುತ್ತಿದೆ.</p>.<p>ಕಳೆದ ದಶಕಕ್ಕೆ ಹೋಲಿಸಿದರೆ ಈಚಿನ ವರ್ಷಗಳಲ್ಲಿ ರೋಗಿಗಳ ಪ್ರಮಾಣ ಕಡಿಮೆಯಾಗಿರುವುದು ಸಮಾಧಾನದ ಸಂಗತಿಯಾಗಿದೆ. ಎಚ್ಐವಿ ಹರಡುವ ಬಗೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿರುವುದು ಇದಕ್ಕೆ ಕಾರಣವಾಗಿದೆ.</p>.<p>ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 194 ಮಂದಿಯಲ್ಲಿ ಹೊಸದಾಗಿ ಈ ರೋಗವು ಪತ್ತೆಯಾಗಿದೆ. ಇವರಲ್ಲಿ 8 ಎಂಟು ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಪೀಡಿತರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಗರ್ಭಿಣಿಯರಲ್ಲೂ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂತಹ ಮಹಿಳೆಯರ ಹೊಟ್ಟೆಯಲ್ಲಿರುವ ಶಿಶುಗಳಿಗೆ ರೋಗ ತಗುಲದಂತೆ ಚಿಕಿತ್ಸೆ ನೀಡುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.</p>.<p>ವಲಸೆ ಕಾರ್ಮಿಕರಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕನಕಪುರ ಹಾಗೂ ರಾಮನಗರ ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇಲ್ಲಿನ ಗಣಿ ಪ್ರದೇಶಗಳಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿದ್ದಾರೆ. ಅಶಿಕ್ಷಿತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಲ್ಲಿ ಈ ರೋಗದ ಬಗ್ಗೆ ಅರಿವಿನ ಕೊರತೆ ಇದೆ. ಹೀಗಾಗಿ ಇಂತಹ ಕಾರ್ಮಿಕರಲ್ಲಿ ಎಚ್ಐವಿ ಪೀಡಿತರು ಹೆಚ್ಚಾಗಿ ಕಂಡುಬಂದಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.</p>.<p>ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್ಐವಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಅದರಲ್ಲಿಯೂ ಗರ್ಭಿಣಿಯರನ್ನು ಕಡ್ಡಾಯವಾಗಿ ಈ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಒಂದು ವೇಳೆ ಅಂತಹ ಮಹಿಳೆಯರು ಸೋಂಕು ಪೀಡಿತರಾಗಿದ್ದಲ್ಲಿ ಗರ್ಭದಲ್ಲಿನ ಮಗುವನ್ನು ಸೂಕ್ತ ವೈದ್ಯೋಪಚಾರದಿಂದ ರಕ್ಷಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.</p>.<p>‘ಎಚ್ಐವಿ/ಏಡ್ಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯ ಕ್ರಮವೇ ಮದ್ದು’ ಎನ್ನುತ್ತಾರೆ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾ ಅಧಿಕಾರಿ ಡಾ. ಟಿ. ಅರುಣ್ಕುಮಾರ್. ‘ಈಗ ಜನರಲ್ಲಿಯೂ ಈ ಬಗ್ಗೆ ಸಾಕಷ್ಟು ಅರಿವು ಮೂಡುತ್ತಿದೆ. ಹೀಗಾಗಿ ರೋಗದ ಪ್ರಮಾಣವೂ ಕಡಿಮೆ ಆಗಿದೆ. ಆದಾಗ್ಯೂ ಹೆಚ್ಚೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ರೋಗ ಹರಡುವ ಬಗೆ ಹಾಗೂ ಅದರ ದುಷ್ಪರಿಣಾಮಗಳ ಅರಿವು ಮೂಡಿಸುವುದು, ಕಾಂಡೋಮ್ ಬಳಕೆಗೆ ಪ್ರೋತ್ಸಾಹಿಸುವುದು. ಜನರಲ್ಲಿ ಈ ಬಗೆಗಿನ ಮುಜುಗರವನ್ನು ಹೋಗಲಾಡಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.</p>.<p><strong>ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪತ್ತೆಯಾದ ಎಚ್ಐವಿ ಪೀಡಿತರ ಪ್ರಮಾಣ</strong></p>.<p><strong>ವರ್ಷ ಪರೀಕ್ಷೆಗೆ ಒಳಗಾದವರು ಎಚ್ಐವಿ ಪೀಡಿತರು</strong><br />2007–08 5388 128<br />2008–09 16,335 437<br />2009–10 21,768 423<br />2010–11 20,374 285<br />2011–12 33,681 350<br />2012–13 24,826 265<br />2013–14 45,366 177<br />2014–15 46,528 190<br />2015–16 49,819 179<br />2016–17 54,035 157<br />2017–18 54,469 194<br />2018(ಅಕ್ಟೋಬರ್ ಅಂತ್ಯಕ್ಕೆ) 33,359 100</p>.<p><strong>2017–18ರಲ್ಲಿ ತಾಲ್ಲೂಕುವಾರು ರೋಗ ಪತ್ತೆ ಪ್ರಮಾಣ<br />ತಾಲ್ಲೂಕು ಪರೀಕ್ಷೆಗೆ ಒಳಗಾದವರು ಎಚ್ಐವಿ ಪೀಡಿತರು</strong><br />ಚನ್ನಪಟ್ಟಣ 9883 41<br />ಮಾಗಡಿ 11,725 14<br />ಕನಕಪುರ 13,520 74<br />ರಾಮನಗರ 19,341 65</p>.<p><strong>2018ರಲ್ಲಿ (ಏಪ್ರಿಲ್ನಿಂದ ಅಕ್ಟೋಬರ್ವರೆಗೆ ) ರೋಗ ಪತ್ತೆ ಪ್ರಮಾಣ<br />ತಾಲ್ಲೂಕು ಪರೀಕ್ಷೆಗೆ ಒಳಗಾದವರು ಎಚ್ಐವಿ ಪೀಡಿತರು</strong><br />ಚನ್ನಪಟ್ಟಣ 6453 15<br />ಮಾಗಡಿ 8477 21<br />ಕನಕಪುರ 9879 36<br />ರಾಮನಗರ 8550 28</p>.<p>* ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಎಚ್ಐವಿ ಬಾಧಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ರೋಗ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವೂ ನಿರಂತರ ನಡೆದಿದೆ<br /><strong>-ಡಾ. ಟಿ. ಅರುಣ್ಕುಮಾರ್,</strong>ಜಿಲ್ಲಾ ಎಚ್ಐವಿ/ಏಡ್ಸ್ ರೋಗ ನಿಯಂತ್ರಣಾಧಿಕಾರಿ</p>.<p><strong>ರಾಮನಗರಕ್ಕೆ ಪ್ರಶಸ್ತಿ</strong><br />ಎಚ್ಐವಿ/ಏಡ್ಸ್ ನಿಯಂತ್ರಣ ಕುರಿತು ಉತ್ತಮ ಕಾರ್ಯಕ್ರಮ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆಗೆ ಈ ಬಾರಿ ರಾಜ್ಯ ಸರ್ಕಾರದ ಪ್ರಶಸ್ತಿಯು ಲಭಿಸಿದೆ.</p>.<p>ರಾಮನಗರದೊಟ್ಟಿಗೆ ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳು ಈ ಗೌರವಕ್ಕೆ ಪಾತ್ರವಾಗಿವೆ. ಶನಿವಾರ ವಿಜಯಪುರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಲಿದೆ. ‘ರೋಗ ನಿಯಂತ್ರಣದ ಜೊತೆಗೆ ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಕಾಳಜಿಗೆ ತೆಗೆದುಕೊಂಡ ಕ್ರಮಗಳಿಂದಾಗಿ ಈ ಪುರಸ್ಕಾರ ದೊರೆತಿದೆ’ ಎಂದು ಡಾ. ಅರುಣ್ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>