ರೋಗಿಗಳಿಗೆ ಉಚಿತ ಆಶ್ರಯ ನೀಡಲಾಗುತ್ತಿದೆ. ರೋಗಿಗಳಿಗೆ ನೆರವಾಗುವ ಪೋಷಕರಿಗೆ ಉಳಿಯಲು ಅವಕಾಶ ನೀಡಲಾಗುತ್ತಿದೆ.ಊಟೋಪಚಾರ ಮಾಡಲಾಗುತ್ತಿದೆ. ತಜ್ಞ ವೈದ್ಯರ ಭೇಟಿ, ನಿರಂತರ ತಪಾಸಣೆ, ಕ್ರೀಡೆ, ಮನರಂಜನೆ, ಟಿವಿ ಸೌಲಭ್ಯಸೇರಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.15 ವರ್ಷದಲ್ಲಿ ಸಂಸ್ಥೆಗೆ ದಾನ ನೀಡಿದವರನ್ನು ನೆನಪಿಸಿಕೊಳ್ಳಲು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದುದೆ.ವಿಆರ್ಎಲ್ ಮುಖ್ಯಸ್ಥ ವಿಜಯಸಂಕೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ವಾಗ್ಮಿ ನಿತ್ಯಾನಂದ ವಿವೇಕವಂಶಿ ಉಪನ್ಯಾಸ ನೀಡುವರು.ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ,ಉಪಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿಭಾಗವಹಿಸುವರು ಎಂದರು.