ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಟಾಸ್ಕ್‌ಫೋರ್ಸ್‌ಗೆ ₹ 10 ಕೋಟಿ ಬೇಡಿಕೆ

ಶಾಸಕ ಆರಗ ಜ್ಞಾನೇಂದ್ರ ಮಾಹಿತಿ
Last Updated 8 ಫೆಬ್ರುವರಿ 2020, 11:00 IST
ಅಕ್ಷರ ಗಾತ್ರ

ಶಿವಮೊಗ್ಗ: ಅಡಿಕೆ ಬೆಳೆಗಾರರ ಹಿತಾಸಕ್ತಿ, ಸಂಶೋಧನೆಗಳು ಹಾಗೂ ಟಾಸ್ಕ್‌ಫೋರ್ಸ್ ನಿರ್ವಹಣೆಗಾಗಿ ಬಜೆಟ್‌ನಲ್ಲಿ ₹10 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಅಡಿಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಅಡಿಕೆ ಹಾನಿಕಾರಕವಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆದಿವೆ. ಅಗತ್ಯ ಸಂಶೋಧನಾ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ರಾಜ್ಯಸರ್ಕಾರ ನೆರವು ನೀಡುತ್ತಿದೆ.ಈಗಾಗಲೇತಮ್ಮ ಅಧ್ಯಕ್ಷತೆಯಲ್ಲೇಟಾಸ್ಕ್‌ಫೋರ್ಸ್ ರಚನೆಯಾಗಿದೆ.ಅಡಿಕೆ ಬೆಳೆ ಸಂರಕ್ಷಣೆ, ಬೆಲೆಸ್ಥಿರತೆ,ರೈತರಿಗೆ ಸಬ್ಸಿಡಿದರಲ್ಲಿ ಯಂತ್ರಗಳ ವಿತರಣೆ, ಹಳದಿ ರೋಗಕ್ಕೆ ಶಾಶ್ವತ ಪರಿಹಾರ, ರೈತರಿಂದ ನೇರ ಅಡಿಕೆ ಖರೀದಿಮತ್ತಿತರ ಕಾರ್ಯಗಳನ್ನು ಟಾಸ್ಕ್‌ಫೋರ್ಸ್ ಮಾಡಲಿದೆ. ತೀರ್ಥಹಳ್ಳಿಯಲ್ಲಿ ಬಹುಕೋಟಿ ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೂ ಕ್ರಮಕೈಗೊಳ್ಳಲಾಗುವುದು ಎಂದರು

ಸಹಕಾರ ಭಾರತಿ ಬೆಂಬಲಕ್ಕೆ ಮನವಿ

ಫೆ.22 ರಂದು ನಡೆಯಲಿರುವ ಮ್ಯಾಮ್‌ಕೋಸ್(ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ) ಚುನಾವಣೆಯಲ್ಲಿ ಸ್ಪರ್ಧಿಸಿರುವ ಸಹಕಾರ ಭಾರತೀಯ 19 ಜನ ಅಭ್ಯರ್ಥಿಗಳಗುಂಪು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಹಕಾರ ಭಾರತಿಅಡಿಕೆ ಬೆಳೆಗಾರರ ಹಿತಕ್ಕಾಗಿ ಕೆಲಸ ಮಾಡುತ್ತಿದೆ.ಬೆಳೆಗಾರರಿಗೆ ಎಲ್ಲ ರೀತಿಯ ನೆರವು ನೀಡಲು ಮುಂದಾಗಿದೆ. ಅಡಿಕೆ ಬೆಳೆಗೆ ತಗಲುತ್ತಿರುವ ರೋಗಗಳನಿವಾರಣೆಗೂಗಮನಹರಿಸಿದೆ.ಅಡಿಕೆ ಆರೋಗ್ಯಕ್ಕೆ ಹಾನಿಕರ ಅಲ್ಲ ಎಂದು ಕೇಂದ್ರ ಸರ್ಕಾರಕ್ಕೆ,ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಿರಂತರವಾಗಿಮಾಡುತ್ತಿದೆ. ಅದಕ್ಕಾಗಿ ಈ ಬಾರಿಯೂ ಸಹಕಾರ ಭಾರತಿ ಬೆಂಬಲಿಸಬೇಕು ಎಂದು ಕೋರಿದರು.

ಮ್ಯಾಮ್‌ಕೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ಮಾತನಾಡಿ, ಮ್ಯಾಮ್‌ಕೋಸ್ ಅಧಿಕಾರ ಹಿಡಿದ ಮೇಲೆ ಹಲವು ಉತ್ತಮ ಕೆಲಸ ಮಾಡಲಾಗಿದೆ. ಸದಸ್ಯರ ಮಕ್ಕಳ ಪುರಸ್ಕಾರ ನಿಧಿ ಹೆಚ್ಚಳ, ಅಪಘಾತ ವಿಮೆ, ವೈದ್ಯಕೀಯ ವೆಚ್ಚ, ಅಸ್ತ್ರ ಒಲೆಗೆ ಸಹಾಯಧನ, ಸುಸ್ತಿ ಷೇರುದಾರರಿಗೆ ಏಕಕಾಲಿಕ ಸಾಲ ತೀರುವಳಿ ವ್ಯವಸ್ಥೆ ಕಲ್ಪಿಸಲಾಗಿದೆ. ಆವಶ್ಯಕತೆಗಳಿಗೆ
ತಕ್ಕಂತೆ ಶಾಖೆಗಳು, ಖರೀದಿ ಕೇಂದ್ರಗಳ ವಿಸ್ತರಣೆ, ಅಡಿಕೆ ವ್ಯಾಪಾರಕ್ಕಾಗಿ ಆ್ಯಪ್‌ಅಭಿವೃದ್ಧಿ,ಸದಸ್ಯರಿಗೆ ಆರೋಗ್ಯವಿಮೆ, ಡಿಜಿಟಲ್ ತೂಕ ಯಂತ್ರ, ಸದಸ್ಯರ ತೋಟಗಳಲ್ಲಿ ಅಡಿಕೆ ಮತ್ತು ಆಂತರಿಕ ಬೆಳೆಗಳ ಅಭಿವೃದ್ದಿ ಕುರಿತು ಹಲವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದಲ್ಲಿ26 ಸಾವಿರ ಸದಸ್ಯರಿದ್ದಾರೆ.6 ಸಾವಿರ ಸದಸ್ಯರಿಗೆ ಮತದಾನ ಹಕ್ಕು ಇದೆ. ಫೆ.22 ರಂದು ಮತದಾನ ನಡೆಯಲಿದೆ.ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ, ಕೊಪ್ಪ, ಶೃಂಗೇರಿ, ತರೀಕೆರೆ ಮತ್ತು ಚನ್ನಗಿರಿಯಲ್ಲಿ ಮತದಾನ ಕೇಂದ್ರಗಳಿವೆ. ಆಯಾ ಭಾಗದ ಮತದಾರರು ಆಯಾ ಕೇಂದ್ರಗಳಲ್ಲಿ ಮತದಾನ ಮಾಡಬಹುದು. ಒಬ್ಬರು 19 ಮತಗಳನ್ನು ಚಲಾಯಿಸಬಹುದುಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿರೂಪಾಕ್ಷಪ್ಪ, ರವಿಕುಮಾರ್, ಭೀಮರಾವ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT