ಕಲ್ಮಂಗಿ ಗ್ರಾಮದ ಆರೋಪಿ ಯಲ್ಲಪ್ಪನನ್ನು ತುರ್ವಿಹಾಳ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವ ಮಹೇಶ (4) ಮೃತಪಟ್ಟ ನತದೃಷ್ಟ ಬಾಲಕ.
ಕೌಟುಂಬಿಕ ಕಲಹ ಕಾರಣದಿಂದ ಆರೋಪಿಯ ಪತ್ನಿ ಪಾರ್ವತಿಯು ತವರು ಮನೆಯಲ್ಲೇ ಉಳಿದುಕೊಂಡಿದ್ದರು. ಪತ್ನಿಯ ತವರಿಗೆ ಹೋಗಿದ್ದ ಆರೋಪಿ ಜಗಳ ಮಾಡಿಕೊಂಡಿದ್ದಲ್ಲದೆ, ಮಗುವನ್ನು ಎತ್ತಿಕೊಂಡು ಕಣ್ಮರೆಯಾಗಿದ್ದ.