ಶಕ್ತಿನಗರ: ರಾಯಲ್ ಎನ್ಫೀಲ್ಡ್ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಶಕ್ತಿನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಾನ್ವಿಯ ಶೇಕ್ಷಾವಲಿ (27) ಬಂಧಿತ ಆರೋಪಿ.
2020 ರ ಡಿ.7 ರಂದು ಶಕ್ತಿನಗರದ ಸೂಗೂರೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಂಗಡಿ ಎದುರು ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕಳವು ಆಗಿತ್ತು. ಆರೋಪಿ ಬೈಕ್ನ ಗುರುತು ಸಿಗಬಾರದೆಂದು ನಂಬರ್ ಪ್ಲೇಟ್ ತೆಗೆದು, ಮಾರಾಟ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ಶಕ್ತಿನಗರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಕ್ತಿನಗರದ ಯಾದವ ನಗರ ಕ್ರಾಸ್ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ವಾಹನ ಮಾರಾಟಕ್ಕೆ ಹೈದರಾಬಾದ್ಗೆ ತೆರಳುತ್ತಿದ್ದ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಶಕ್ತಿನಗರ ಠಾಣೆಯ ಪಿಎಸ್ಐ ಎಚ್.ಹುಲಿಗೇಶ ಓಂಕಾರ, ಅಪರಾಧ ವಿಭಾಗದ ಪಿಎಸ್ಐ ಹನುಮಂತಪ್ಪ, ಸಿಬ್ಬಂದಿ ಅಮರೇಶ, ಮುನಿಸ್ವಾಮಿ, ನಿಂಗಪ್ಪ, ನರಸಿಂಗಪ್ಪ, ತಿಮ್ಮಪ್ಪ, ಶೇಖರ ಹಾಗೂ ರಮೇಶ ಇದ್ದರು.