ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ, ಎನ್ಆರ್ಸಿ, ಎನ್ಪಿಆರ್ ಕಾಯ್ದೆ ವಿರೋಧಿಸಿ ಹಲವೆಡೆ ಹೋರಾಟ ನಡೆಯುತ್ತಿವೆ. ರಾಯಚೂರಿನಲ್ಲಿಯೂ ಕಳೆದ ಜನವರಿ 26ರಿಂದ ಹೋರಾಟ ನಡೆಯುತ್ತಿದೆ. ಅನೇಕ ಪ್ರಗತಿಪರರರು ಬೆಂಬಲ ನೀಡುತ್ತಿದ್ದು, ಹೈದರಾಬಾದ್ನಿಂದ ನಾಸಿರಾ ಖಾನಂ, ವಿಮ್ಲಾ, ಖಾಲಿದಾ ಪರ್ವೀನ್, ಅಂಜುಮ್ ರಝ್ವಿ ಹಾಗೂ ವಿದ್ಯಾರ್ಥಿ ಸಂಘಟನೆಯ ನಜ್ಮಾ ನಜೀರ್ ಆಗಮಿಸುವರು ಎಂದರು.