<p><strong>ಮಾನ್ವಿ:</strong> ಪಟ್ಟಣದ ಜಗನ್ನಾಥ ದಾಸರ ಮಂದಿರದಲ್ಲಿ ಬೆಂಗಳೂರಿನ ರಾಮನಾರಾಯಣ ಗುರುಕುಲಂ ವತಿಯಿಂದ ಗುಡಿ ನಮನ -2025 ಕಾರ್ಯಕ್ರಮ ಶನಿವಾರ ಜರುಗಿತು.</p>.<p>ರಾಮನಾರಾಯಣ ಗುರುಕುಲಂ ಅಧ್ಯಕ್ಷ ಪಟ್ಟಭಿರಾಮ ಪಂಡಿತ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು. </p>.<p>ಅಮೆರಿಕದ ಬೋಸ್ಟನ್ ನಗರದಿಂದ ಆಗಮಿಸಿದ್ದ ವಿದ್ವಾನ್ ಸುರಭಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಹನುಮಾನ್ ಚಾಲಿಸ್, ರೊಗಹರಣಿ, ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ಹಾಗೂ ಜಗನ್ನಾಥ ವಿಠಲ ವಚನಗಳು ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.</p>.<p>ಪಕ್ಕವಾದ್ಯದಲ್ಲಿ ಅಂತರಾಷ್ಟ್ರೀಯ ಸಂಗೀತ ಕಲಾವಿದರಾದ ವಿದ್ವಾನ ಹೇಮಿಜಿ. ಎಸ್. ಪ್ರಶಾಂತ ಅವರಿಂದ ವೀಣಾವದನ , ವಿದ್ವಾನ ಚಂದನ್ ಕುಮಾರ ಕೋಳಲು ವಾದನ, ವಿದ್ವಾನ ಚಾರುಲತಾ ರಾಮಾನುಜಂ ಪೀಟಿಲು ವಾದನ, ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ ವಾದನದ ಮೂಲಕ ಸಾತ್ ನೀಡಿದರು. ತ್ರಯಾ ಅವರ ಸಂಗೀತ ಗಾಯನ ಗಮನ ಸೆಳೆಯಿತು.</p>.<p>ಬೆಳಿಗ್ಗೆ 10ಗಂಟೆಯಿಂದ ಸಂಜೆಯವರೆಗೂ 50ಕ್ಕೂ ಹೆಚ್ಚು ಕಲಾವಿದರು ನಿರಂತರವಾಗಿ ನಾದಸೇವೆ ಸಲ್ಲಿಸಿದರು. ನೂರಾರು ಜನರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸ್ತ್ರೀಯ ಸಂಗೀತ ಅಲಿಸಿದರು.</p>.<p>ಜಗನ್ನಾಥ ದಾಸರ ಮಂದಿರದ ಮಂದಿರದ ವ್ಯವಸ್ಥಾಪಕರಾದ ಶ್ರೀನಿವಾಸ ಕರ್ಲಹಳ್ಳಿ, ಜಗನ್ನಾಥಚಾರ್ ಪುರೋಹಿತ್, ಪ್ರವೀಣ್ ಕುಮಾರ, ವಿಜಯರಾವ್ ಕುಪನೇಶಿ, ವರದರಾಜ ಕುಲಕರ್ಣಿ, ಕೃಷ್ಣಮೂರ್ತಿ ಗುಡಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾನ್ವಿ:</strong> ಪಟ್ಟಣದ ಜಗನ್ನಾಥ ದಾಸರ ಮಂದಿರದಲ್ಲಿ ಬೆಂಗಳೂರಿನ ರಾಮನಾರಾಯಣ ಗುರುಕುಲಂ ವತಿಯಿಂದ ಗುಡಿ ನಮನ -2025 ಕಾರ್ಯಕ್ರಮ ಶನಿವಾರ ಜರುಗಿತು.</p>.<p>ರಾಮನಾರಾಯಣ ಗುರುಕುಲಂ ಅಧ್ಯಕ್ಷ ಪಟ್ಟಭಿರಾಮ ಪಂಡಿತ್ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು. </p>.<p>ಅಮೆರಿಕದ ಬೋಸ್ಟನ್ ನಗರದಿಂದ ಆಗಮಿಸಿದ್ದ ವಿದ್ವಾನ್ ಸುರಭಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಹನುಮಾನ್ ಚಾಲಿಸ್, ರೊಗಹರಣಿ, ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ಹಾಗೂ ಜಗನ್ನಾಥ ವಿಠಲ ವಚನಗಳು ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.</p>.<p>ಪಕ್ಕವಾದ್ಯದಲ್ಲಿ ಅಂತರಾಷ್ಟ್ರೀಯ ಸಂಗೀತ ಕಲಾವಿದರಾದ ವಿದ್ವಾನ ಹೇಮಿಜಿ. ಎಸ್. ಪ್ರಶಾಂತ ಅವರಿಂದ ವೀಣಾವದನ , ವಿದ್ವಾನ ಚಂದನ್ ಕುಮಾರ ಕೋಳಲು ವಾದನ, ವಿದ್ವಾನ ಚಾರುಲತಾ ರಾಮಾನುಜಂ ಪೀಟಿಲು ವಾದನ, ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ ವಾದನದ ಮೂಲಕ ಸಾತ್ ನೀಡಿದರು. ತ್ರಯಾ ಅವರ ಸಂಗೀತ ಗಾಯನ ಗಮನ ಸೆಳೆಯಿತು.</p>.<p>ಬೆಳಿಗ್ಗೆ 10ಗಂಟೆಯಿಂದ ಸಂಜೆಯವರೆಗೂ 50ಕ್ಕೂ ಹೆಚ್ಚು ಕಲಾವಿದರು ನಿರಂತರವಾಗಿ ನಾದಸೇವೆ ಸಲ್ಲಿಸಿದರು. ನೂರಾರು ಜನರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸ್ತ್ರೀಯ ಸಂಗೀತ ಅಲಿಸಿದರು.</p>.<p>ಜಗನ್ನಾಥ ದಾಸರ ಮಂದಿರದ ಮಂದಿರದ ವ್ಯವಸ್ಥಾಪಕರಾದ ಶ್ರೀನಿವಾಸ ಕರ್ಲಹಳ್ಳಿ, ಜಗನ್ನಾಥಚಾರ್ ಪುರೋಹಿತ್, ಪ್ರವೀಣ್ ಕುಮಾರ, ವಿಜಯರಾವ್ ಕುಪನೇಶಿ, ವರದರಾಜ ಕುಲಕರ್ಣಿ, ಕೃಷ್ಣಮೂರ್ತಿ ಗುಡಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>