<p><strong>ಮುದಗಲ್</strong>: ಮೊಹರಂ ನಿಮಿತ್ತ ಕೋಟೆ ಮುಂಭಾಗದಲ್ಲಿ ಹಾಕಿರುವ ಅಂಗಡಿಗಳ ಭೂಬಾಡಿಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡುವುದನ್ನು ವಿರೋಧಿಸಿ ವ್ಯಾಪಾರಸ್ಥರು ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಮಖ್ಯಾಧಿಕಾರಿಗೆ ಮುತ್ತಿಗೆ ಹಾಕಿ ಟೆಂಡರ್ದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯ ಹಾಗೂ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಆಗಮಿಸಿ ಅಂಗಡಿಗಳು ಹಾಕಿದ್ದೇವೆ. ಭೂ ಬಾಡಿಗೆ ವಸೂಲಿಗಾಗಿ ಟೆಂಡರ್ ಪಡೆದ ಟೆಂಡರ್ದಾರ ಸರ್ಕಾರದ ನಿಯಮದಂತೆ ವಸೂಲಿ ಮಾಡುತ್ತಿಲ್ಲ. ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ₹3,000, ₹5000 ವಸೂಲಿ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದರು.</p>.<p>‘ಕಳೆದ ವರ್ಷದಂತೆ ಹಣ ಪಡೆಯಲು ಸೂಚಿಸಬೇಕು. ಹೆಚ್ಚಿನ ಹಣ ನೀಡಬೇಕು ಎಂದು ಟೆಂಡರ್ದಾರ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಬಸಪ್ಪ ಶಿರೂರ, ಗುಂಡಪ್ಪ ಸೇರಿದಂತೆ ಇನ್ನಿತರರು ಅಳಲು ತೋಡಿಕೊಂಡರು.</p>.<p>‘ಆದೇಶದಂತೆ ಭೂಬಾಡಿಗೆ ವಸೂಲಿ ಮಾಡಲು ಟೆಂಡರ್ದಾರರಿಗೆ ಸೂಚಿಸುತ್ತೇನೆ. ಆದೇಶ ಮೀರಿದರೆ ಟೆಂಡರ್ ರದ್ದುಗೊಳಿಸಿ, ಸೂಕ್ತ ಕ್ರಮ ಜರುಗಿಸುತ್ತೇನೆ’ ಎಂದು ಮುಖ್ಯಾಧಿಕಾರಿ ಪ್ರವೀಣ ಬೋಗರ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್</strong>: ಮೊಹರಂ ನಿಮಿತ್ತ ಕೋಟೆ ಮುಂಭಾಗದಲ್ಲಿ ಹಾಕಿರುವ ಅಂಗಡಿಗಳ ಭೂಬಾಡಿಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡುವುದನ್ನು ವಿರೋಧಿಸಿ ವ್ಯಾಪಾರಸ್ಥರು ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಮಖ್ಯಾಧಿಕಾರಿಗೆ ಮುತ್ತಿಗೆ ಹಾಕಿ ಟೆಂಡರ್ದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯ ಹಾಗೂ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಆಗಮಿಸಿ ಅಂಗಡಿಗಳು ಹಾಕಿದ್ದೇವೆ. ಭೂ ಬಾಡಿಗೆ ವಸೂಲಿಗಾಗಿ ಟೆಂಡರ್ ಪಡೆದ ಟೆಂಡರ್ದಾರ ಸರ್ಕಾರದ ನಿಯಮದಂತೆ ವಸೂಲಿ ಮಾಡುತ್ತಿಲ್ಲ. ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ₹3,000, ₹5000 ವಸೂಲಿ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದರು.</p>.<p>‘ಕಳೆದ ವರ್ಷದಂತೆ ಹಣ ಪಡೆಯಲು ಸೂಚಿಸಬೇಕು. ಹೆಚ್ಚಿನ ಹಣ ನೀಡಬೇಕು ಎಂದು ಟೆಂಡರ್ದಾರ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಬಸಪ್ಪ ಶಿರೂರ, ಗುಂಡಪ್ಪ ಸೇರಿದಂತೆ ಇನ್ನಿತರರು ಅಳಲು ತೋಡಿಕೊಂಡರು.</p>.<p>‘ಆದೇಶದಂತೆ ಭೂಬಾಡಿಗೆ ವಸೂಲಿ ಮಾಡಲು ಟೆಂಡರ್ದಾರರಿಗೆ ಸೂಚಿಸುತ್ತೇನೆ. ಆದೇಶ ಮೀರಿದರೆ ಟೆಂಡರ್ ರದ್ದುಗೊಳಿಸಿ, ಸೂಕ್ತ ಕ್ರಮ ಜರುಗಿಸುತ್ತೇನೆ’ ಎಂದು ಮುಖ್ಯಾಧಿಕಾರಿ ಪ್ರವೀಣ ಬೋಗರ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>