ಹಟ್ಟಿ ಸಮೀಪದ ಆನ್ವರಿ ಗ್ರಾಮದ ಪುರಾತನ ಬಾವಿಯಲ್ಲಿ ನೀರು ತಳ ತಲುಪಿದೆ
ಹಟ್ಟಿ ಸಮೀಪದ ಕಾಳೇಶ್ವರ ಕೆರೆ ನೀರಿಲ್ಲದೆ ಬರಿದಾಗಿದೆ
ಪಟ್ಟಣ ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯದಿಂದ ನಗರದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಸಮಸ್ಯೆಯನ್ನು ಆಲಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ
ರೇಣುಕಮ್ಮ, ಹಟ್ಟಿ ಪಟ್ಟಣದ ನಿವಾಸಿ
ಹಟ್ಟಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಆರ್ಡ್ಯಬ್ಲುಎಸ್ ಕಾರ್ಯ. ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಲಾಗಿದೆ, ಮೋಟರ್ ಸುಟ್ಟಿದ್ದು ದುರಸ್ತಿ ಕಾರ್ಯ ನಡೆದಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಜನರಿಗೆ ನೀಡಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು
ಜಗನ್ನಾಥ, ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಮೋಟರ್ ದುರಸ್ತಿಯಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿತ್ತು. ಕೋಠಾ ಗ್ರಾಮದವರೆಗೂ ನೀರು ಸರಬರಾಜು ಮಾಡುವುದು ನಮ್ಮ ಕರ್ತವ್ಯ. ನಂತರ ಹಟ್ಟಿ ಮುಖ್ಯಾಧಿಕಾರಿಗಳು ಅದರ ಬಗ್ಗೆ ಗಮನಹರಿಸಬೇಕು
ಪರಮೇಶ್ವರ, ಆರ್ಡ್ಯಬ್ಲುಎಸ್ ಎಇಇ, ಲಿಂಗಸುಗೂರು
ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರೆರಚುತ್ತಾ ಕಾಲಹರರಣ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ಇತ್ತಕಡೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ