ರಾಯಚೂರು ಕೇಂದ್ರ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಹನಗಳು ಸರದಿಯಲ್ಲಿ ಪ್ರಯಾಣಿಕರು ಕರೆದೊಯ್ಯುತ್ತಿರುವುದು ಕಂಡುಬಂತು. ಆದರೆ, ಮನಬಂದಂತೆ ಪ್ರಯಾಣದರ ಕೇಳುತ್ತಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಸಂಚರಿಸುವ ಅನಿವಾರ್ಯ ಇದ್ದವರು ಮಾತ್ರ ಕ್ರೂಸರ್, ಟೆಂಪೊಗಳಲ್ಲಿ ತೆರಳುತ್ತಿದ್ದಾರೆ.