ರಾಯಚೂರು: ತಾಲ್ಲೂಕಿನ ಸಗಮಕುಂಟಾ ಗ್ರಾಮದಿಂದ ಕಾಶಿ ಯಾತ್ರೆಗಾಗಿ ತೆರಳಿ, ಬುಧವಾರ ಮರಳಿದ 16 ಜನರನ್ನು 'ಹೋಮ್ ಕ್ವಾರಂಟೈನ್' ಮಾಡಲಾಗಿದೆ.
ಆರೋಗ್ಯ ಇಲಾಖೆಯ ನಿಯೋಜಿತ ಸಿಬ್ಬಂದಿಯು ಎಲ್ಲರ ಆರೋಗ್ಯ ತಪಾಸಣೆ ನಡೆಸಿದರು. ಕೈ ಮಣಿಕಟ್ಟಿನ ಮೇಲೆ ಸೀಲ್ ಹಾಕಿದ್ದು, ಮುಂದೆ ಸೂಚನೆ ಕೊಡುವವರೆಗೂ ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಬರದಂತೆ ತಿಳಿಸಿದ್ದಾರೆ.
ಗೋಡೆಗೆ ಭಿತ್ತಿಪತ್ರ: ಹೋಮ್ ಕ್ವಾರಂಟೈನ್ ಇರಬೇಕು ಎಂದು ಕೈ ಮೇಲೆ ಸೀಲ್ ಹಾಕಲಾಗಿರುವವರು ವಾಸಿಸುವ ಮನೆ ಗೋಡೆ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬುಧವಾರ ಭಿತ್ತಿಪತ್ರ ಅಂಟಿಸಿದರು.
ಜಿಲ್ಲೆಯಲ್ಲಿ ಇದುವರೆಗೂ 148 ಜನರು ವಿದೇಶಗಳಿಂದ ಮರಳಿದ್ದು, 625 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.