ನಡು ರಸ್ತೆಯಲ್ಲಿ ಚರಂಡಿ ನಿರ್ಮಿಸಲಾಗಿದ್ದು ಸ್ಥಳೀಯ ನಿವಾಸಿಗಳು ತಿರುಗಾಡಲು ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ಪಾಡಂತೂ ಕೇಳ ಬಾರದು. ಶಾಲೆಯ ಈ ಬಡವಾಣೆಯಲ್ಲಿ ವಾಸಿಸುವ ಜನರು ನಿತ್ಯ ಸೊಳ್ಳೆಗಳ ಜೊತೆ ಜೀವನ ಸಾಗಿಸುವಂತಾಗಿದ್ದರೂ ಸಹ ಪುರಸಭೆಯವರು ಈ ಕಡೆ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.