ಮಸ್ಕಿ: ಚೀನಾ ಮತ್ತು ಭಾರತ ನಡುವೆ ಯುದ್ಧ ನಡೆದಲ್ಲಿ, ಚೀನಾದ ವಿರುದ್ಧ ಹೋರಾಡಲು ಭಾರತೀಯ ಸೇನೆಯಲ್ಲಿ ಅವಕಾಶ ನೀಡುವಂತೆ ಕೋರಿ ಹೋಂ–ಗಾರ್ಡ್ ಸಿಬ್ಬಂದಿ ಲಕ್ಷ್ಮಣ ಮಡಿವಾಳ ಅವರು ಭಾನುವಾರ ರಾಷ್ಟ್ರಪತಿಗೆ ರಕ್ತದಲ್ಲಿ ಮೂರು ಪುಟಗಳ ಪತ್ರ ಬರೆದಿದ್ದಾರೆ.
‘ನನ್ನ ದೇಶದ ರಕ್ಷಣೆ ನನ್ನ ಕರ್ತವ್ಯ. ಯೋಧರು ಹುತಾತ್ಮರಾಗಿದ್ದು ವ್ಯರ್ಥವಾಗಬಾರದು. ದೇಶವೆಂದರೆ ನನಗೆ ಪಂಚಪ್ರಾಣ. ದೇಶಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧನಿದ್ದೇನೆ’ ಎಂದು ಲಕ್ಷ್ಮಣ ಮಡಿವಾಳ ಪತ್ರದಲ್ಲಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಜೈಹಿಂದ್ ಭಗತ್ ಸಿಂಗ್ ಉಚಿತ ತರಬೇತಿ ಕೇಂದ್ರ ನಡೆಸುತ್ತಿರುವ ಅವರು ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಮತ್ತು ವಿವಿಧ ಕ್ರೀಡೆಗಳ ಕುರಿತು ತರಬೇತಿ ನೀಡುತ್ತಿದ್ದಾರೆ.