<p><strong>ದೇವಸೂಗೂರು (ಶಕ್ತಿನಗರ):</strong> ‘ಸಾರ್ವಜನಿಕರ ಪ್ರತಿಯೊಂದು ಮಾಹಿತಿಯನ್ನು ಒದಗಿಸುವ ಏಕಗವಾಕ್ಷಿ ಮತ್ತು ಏಕೀಕೃತ ವೆಬ್ ಪೋರ್ಟಲ್ (ಮಾಹಿತಿ ಕಣಜ ಪೋರ್ಟಲ್)ಆಗಿದೆ’ ಎಂದು ದೇವಸೂಗೂರು ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ ಹೇಳಿದರು.</p>.<p>ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ದೊಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗಾಗಿ ಮಾಹಿತಿ ಕಣಜ ಪೋರ್ಟಲ್ ಕುರಿತು ಮತ್ತು 2022–23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಳ್ಳುವ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಏರ್ಪಡಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.</p>.<p>ನೈಜ ಸಮಯದ ದತ್ತಾಂಶ ಲಭ್ಯತೆ, ಆರ್.ಟಿ.ಐ.ಅರ್ಜಿಗಳ ಕಡಿತ, ಉತ್ತಮ ಆಡಳಿತ, ಮಾಹಿತಿ ಕಣಜದ ವೈಶಿಷ್ಟಗಳು, ಪಾರದರ್ಶಕತೆ, ಫಲಾನುಭವಿಗಳ ಅರ್ಹತಾ ಸ್ಥಿತಿ, ಯಾವುದೇ ಬಳಕೆದಾರರ ನೋಂದಣಿ ಅಗತ್ಯವಿಲ್ಲ.</p>.<p>226 ಯೋಜನೆಗಳು, ಸೇವೆಗಳು ಮತ್ತು 62 ಇಲಾಖೆಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ರಾಜ್ಯದ ನಾಗರಿಕರಿಗೆ, ಒಂದೇ ಸೂರಿನಡಿ ಪಡೆಯಲು ಮಾಹಿತಿ ಕಣಜ ವೆಬ್ ಪೋರ್ಟಲ್ ಉದ್ದೇಶ. ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.</p>.<p>ನಂತರ, 2022–23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿಗಳ ಬೇಡಿಕೆಯ ಅವಶ್ಯಕತೆಗನುಗುಣವಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು. ವೈಯಕ್ತಿಕ ಕಾಮಗಾರಿಗಳು, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಿಡಿಒ ಸೂಚಿಸಿದರು.</p>.<p>ಸಭೆಯಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ದೇಸಾಯಿ, ನೋಡಲ್ ಅಧಿಕಾರಿ ಶಿವಾನಂದ, ಲೆಕ್ಕಾಧಿಕಾರಿ ಉದಯಕುಮಾರ, ಬಿಲ್ ಕಲೆಕ್ಟರ್ ಸುರೇಶ ಮಾನ್ವಿ , ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವಸೂಗೂರು (ಶಕ್ತಿನಗರ):</strong> ‘ಸಾರ್ವಜನಿಕರ ಪ್ರತಿಯೊಂದು ಮಾಹಿತಿಯನ್ನು ಒದಗಿಸುವ ಏಕಗವಾಕ್ಷಿ ಮತ್ತು ಏಕೀಕೃತ ವೆಬ್ ಪೋರ್ಟಲ್ (ಮಾಹಿತಿ ಕಣಜ ಪೋರ್ಟಲ್)ಆಗಿದೆ’ ಎಂದು ದೇವಸೂಗೂರು ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ ಹೇಳಿದರು.</p>.<p>ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ದೊಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗಾಗಿ ಮಾಹಿತಿ ಕಣಜ ಪೋರ್ಟಲ್ ಕುರಿತು ಮತ್ತು 2022–23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಳ್ಳುವ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಏರ್ಪಡಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.</p>.<p>ನೈಜ ಸಮಯದ ದತ್ತಾಂಶ ಲಭ್ಯತೆ, ಆರ್.ಟಿ.ಐ.ಅರ್ಜಿಗಳ ಕಡಿತ, ಉತ್ತಮ ಆಡಳಿತ, ಮಾಹಿತಿ ಕಣಜದ ವೈಶಿಷ್ಟಗಳು, ಪಾರದರ್ಶಕತೆ, ಫಲಾನುಭವಿಗಳ ಅರ್ಹತಾ ಸ್ಥಿತಿ, ಯಾವುದೇ ಬಳಕೆದಾರರ ನೋಂದಣಿ ಅಗತ್ಯವಿಲ್ಲ.</p>.<p>226 ಯೋಜನೆಗಳು, ಸೇವೆಗಳು ಮತ್ತು 62 ಇಲಾಖೆಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ರಾಜ್ಯದ ನಾಗರಿಕರಿಗೆ, ಒಂದೇ ಸೂರಿನಡಿ ಪಡೆಯಲು ಮಾಹಿತಿ ಕಣಜ ವೆಬ್ ಪೋರ್ಟಲ್ ಉದ್ದೇಶ. ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.</p>.<p>ನಂತರ, 2022–23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿಗಳ ಬೇಡಿಕೆಯ ಅವಶ್ಯಕತೆಗನುಗುಣವಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು. ವೈಯಕ್ತಿಕ ಕಾಮಗಾರಿಗಳು, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಿಡಿಒ ಸೂಚಿಸಿದರು.</p>.<p>ಸಭೆಯಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ದೇಸಾಯಿ, ನೋಡಲ್ ಅಧಿಕಾರಿ ಶಿವಾನಂದ, ಲೆಕ್ಕಾಧಿಕಾರಿ ಉದಯಕುಮಾರ, ಬಿಲ್ ಕಲೆಕ್ಟರ್ ಸುರೇಶ ಮಾನ್ವಿ , ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>