ನಗರದ ಬಹಳಷ್ಟು ರಸ್ತೆಗಳ ಎಡಬಲಕ್ಕೆ ಚರಂಡಿಗಳನ್ನು ನಿರ್ಮಾಣ ಮಾಡಿಲ್ಲ. ಇದರಿಂದ ಮಳೆನೀರು ಹರಿದು ಹೋಗಲು ದಾರಿಯಿಲ್ಲದೆ, ಪ್ರತಿವರ್ಷ ರಸ್ತೆ ಕಿತ್ತುಹೋಗಿ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಶಾಪುರ ಮಾರ್ಗದ ಎಫ್ಸಿಐ ಗೋದಾಮು ಎದುರು ರಸ್ತೆ ಕಿತ್ತುಹೋಗಿದ್ದು, ಇನ್ನೊಮ್ಮೆ ಮಳೆ ಸುರಿದರೆ ಸಂಪರ್ಕ ಕಡಿತವಾಗಲಿದೆ. ಗುಡ್ಡದಿಂದ ಹರಿದುಬರುವ ಮಳೆನೀರಿಗೆ ಮಾರ್ಗವೆ ಇಲ್ಲ.