<p><strong>ಸಿಂಧನೂರು:</strong> ‘ದೇಶದಲ್ಲಿ ಮರಗಳನ್ನು ಸ್ವಂತ ಮಕ್ಕಳಂತೆ ಪಾಲನೆ, ಪೋಷಣೆ ಮಾಡಿದ ವ್ಯಕ್ತಿ ಸಾಲು ಮರದ ತಿಮ್ಮಕ್ಕ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಎಫ್. ಮಸ್ಕಿ ಅಭಿಪ್ರಾಯಪಟ್ಟರು.</p>.<p>ನಗರದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ನಿವೃತ್ತ ಹಾಗೂ ಪಿಂಚಣಿ ನೌಕರರ ಸಂಘದಿಂದ ಸಾಲುಮರದ ತಿಮ್ಮಕ್ಕನವರಿಗೆ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ತಿಮ್ಮಕ್ಕನವರು ಮಕ್ಕಳಿರದ ಕಾರಣ ರಸ್ತೆ ಬದಿಯಲ್ಲಿ 380 ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳೆಂದು ಭಾವಿಸಿ ಪೋಷಿಸುತ್ತಾ ಅವುಗಳ ಜೊತೆಗೆ 8 ಸಾವಿರ ಮರಗಳನ್ನು ನೆಟ್ಟು ತಾವೇ ನೀರೆರೆದು ಪೋಷಿಸಿದ ಹೆಗ್ಗಳಿಕೆ ಅವರದ್ದು’ ಎಂದರು.</p>.<p>‘ಪರಿಸರ ರಕ್ಷಣೆ ಮತ್ತು ಕಾಡು ರಕ್ಷಣೆ ಮಾಡಿದ ತಿಮ್ಮಕ್ಕನವರಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ’ ಎಂದು ವಿವರಿಸಿದರು.</p>.<p>ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬೀರಪ್ಪ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಾಹಿತಿಗಳಾದ ಹುಸೇನಪ್ಪ ಅಮರಾಪುರ, ಹುಸೇನ್ಬಾಷಾ ಕವಿತೆಗಳನ್ನು ಓದಿ ತಿಮ್ಮಕ್ಕನವರ ಸಾಧನೆಯನ್ನು ಸ್ಮರಿಸಿದರು.</p>.<p>ನಿವೃತ್ತ ಶಿಕ್ಷಕಿ ಸಿದ್ದೇಶ್ವರಿ, ಬಸವರಾಜ ಬಿಳೆಕಲ್, ವೆಂಕಟರೆಡ್ಡಿ, ಟಿ.ಅಯ್ಯಪ್ಪ, ಪ್ರಭು, ಎಚ್.ಎಂ.ಶ್ರೀಶೈಲ ಸೇರಿದಂತೆ ನಿವೃತ್ತ ನೌಕರರ ಸಂಘದ ಸದಸ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು:</strong> ‘ದೇಶದಲ್ಲಿ ಮರಗಳನ್ನು ಸ್ವಂತ ಮಕ್ಕಳಂತೆ ಪಾಲನೆ, ಪೋಷಣೆ ಮಾಡಿದ ವ್ಯಕ್ತಿ ಸಾಲು ಮರದ ತಿಮ್ಮಕ್ಕ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಎಫ್. ಮಸ್ಕಿ ಅಭಿಪ್ರಾಯಪಟ್ಟರು.</p>.<p>ನಗರದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ನಿವೃತ್ತ ಹಾಗೂ ಪಿಂಚಣಿ ನೌಕರರ ಸಂಘದಿಂದ ಸಾಲುಮರದ ತಿಮ್ಮಕ್ಕನವರಿಗೆ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ತಿಮ್ಮಕ್ಕನವರು ಮಕ್ಕಳಿರದ ಕಾರಣ ರಸ್ತೆ ಬದಿಯಲ್ಲಿ 380 ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳೆಂದು ಭಾವಿಸಿ ಪೋಷಿಸುತ್ತಾ ಅವುಗಳ ಜೊತೆಗೆ 8 ಸಾವಿರ ಮರಗಳನ್ನು ನೆಟ್ಟು ತಾವೇ ನೀರೆರೆದು ಪೋಷಿಸಿದ ಹೆಗ್ಗಳಿಕೆ ಅವರದ್ದು’ ಎಂದರು.</p>.<p>‘ಪರಿಸರ ರಕ್ಷಣೆ ಮತ್ತು ಕಾಡು ರಕ್ಷಣೆ ಮಾಡಿದ ತಿಮ್ಮಕ್ಕನವರಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ’ ಎಂದು ವಿವರಿಸಿದರು.</p>.<p>ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬೀರಪ್ಪ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಾಹಿತಿಗಳಾದ ಹುಸೇನಪ್ಪ ಅಮರಾಪುರ, ಹುಸೇನ್ಬಾಷಾ ಕವಿತೆಗಳನ್ನು ಓದಿ ತಿಮ್ಮಕ್ಕನವರ ಸಾಧನೆಯನ್ನು ಸ್ಮರಿಸಿದರು.</p>.<p>ನಿವೃತ್ತ ಶಿಕ್ಷಕಿ ಸಿದ್ದೇಶ್ವರಿ, ಬಸವರಾಜ ಬಿಳೆಕಲ್, ವೆಂಕಟರೆಡ್ಡಿ, ಟಿ.ಅಯ್ಯಪ್ಪ, ಪ್ರಭು, ಎಚ್.ಎಂ.ಶ್ರೀಶೈಲ ಸೇರಿದಂತೆ ನಿವೃತ್ತ ನೌಕರರ ಸಂಘದ ಸದಸ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>