ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಮಾಡುವವರು ಬಿಸಿಲಿನಿಂದ ಬಸವಳಿಯುಂತಾಗಿದೆ. ಸ್ಟೇಷನ್ ವೃತ್ತ, ಆಶಾಪುರ ಮಾರ್ಗ, ಸೂಪರ್ ಮಾರ್ಕೆಟ್, ಸರಾಫ್ ಬಜಾರ್, ಚಂದ್ರಮೌಳೇಶ್ವರ ವೃತ್ತ ಹಾಗೂ ಎಪಿಎಂಸಿ ಸುತ್ತಮುತ್ತ ಬೀದಿ ವ್ಯಾಪಾರಿಗಳು ಗ್ರಾಹಕರಿಗಾಗಿ ಬಿಸಿಲಿನಲ್ಲಿ ಕಾದು ಕುಳಿತುಕೊಳ್ಳುತ್ತಾರೆ. ಬಿಸಿಲಿನ ಬಾಧೆಗೆ ತರಕಾರಿ ವ್ಯಾಪಾರಿಗಳು ನಷ್ಟಕ್ಕೀಡಾಗುತ್ತಿದ್ದಾರೆ. ಬೇಗ ಮಾರಾಟವಾದರೆ ಮಾತ್ರ ಹಾಕಿದ ದುಡ್ಡು ವಾಪಸ್ ಬರುತ್ತದೆ. ಇಲ್ಲದಿದ್ದರೆ ತರಕಾರಿ ಜೀವ ಕಳೆದುಕೊಳ್ಳುತ್ತವೆ. ನೀರು ಸಂಪಡಿಸಿದರೂ ಎರಡು ದಿನ ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.