ರಾಯಚೂರು ತಾಲ್ಲೂಕಿನ ಮಂಚಲಾಪುರದಿಂದ ಉಡಮಗಲ್ ಗ್ರಾಮಕ್ಕೆ ರೈತರು ಮೇವು ತೆಗೆದುಕೊಂಡು ಹೋಗುತ್ತಿದ್ದರು. ಈಗಷ್ಟೇ ಜಿಲ್ಲೆಯಲ್ಲಿ ಜೋಳದ ಕೊಯ್ಲು ನಡೆಯುತ್ತಿದ್ದು, ಒಣಮೇವು ಟ್ರ್ಯಾಕ್ಟರ್ಗಳಲ್ಲಿ ಸಾಗಿಸುವುದು ಸಾಮನ್ಯ ನೋಟವಾಗಿದೆ. ಬೆಂಕಿ ಅನಾಹುತ ಘಟನೆಗಳು ನಿರಂತರ ನಡೆಯುತ್ತಿದ್ದರೂ, ರೈತರನ್ನು ಜಾಗೃತಿಗೊಳಿಸುವ ಕೆಲಸ ಆಗುತ್ತಿಲ್ಲ.