<p><strong>ರಾಯಚೂರು:</strong> ಬಾಪನಯ್ಯ ಭೂ ಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ನಗರಸಭೆಯ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದೆ ಎಂದು ನವರತ್ನ ಯುವಕ ಸಂಘದ ಗೌರವಾಧ್ಯಕ್ಷ ಕೆ.ಪಿ ಅನಿಲಕುಮಾರ, ಅಧ್ಯಕ್ಷ ಚಂದ್ರು ಭಂಡಾರಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಅವರು ಆರೋಪಿಸಿದ್ದಾರೆ. <br /> <br /> ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹರಿಜನವಾಡ ಪ್ರದೇಶದ ನಾಗರಿಕರು, ಅನೇಕ ವರ್ಷಗಳಿಂದ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಮಣಿದ ನಗರಸಭೆ ಈ ಪ್ರದೇಶದ ಜನರಿಗೆ ಶೌಚಾಲಯ ನಿರ್ಮಾಣದ ಉದ್ದೇಶದಿಂದ ಸರ್ವೆ ನಂಬರ್ 1,1/1 ಮತ್ತು1/2ರಲ್ಲಿ ಬರುವ ಒಟ್ಟು 1ಎಕರೆ 30ಗುಂಟೆ ಪ್ರದೇಶದ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನಗರಸಭೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂದು ವಿವರಿಸಿದ್ದಾರೆ.<br /> <br /> 2010ರಲ್ಲಿ ನೋಟಿಫಿಕೇಶನ್ ಜಾರಿಗೊಳಿಸಿ,6-1ರ ನೋಟಿಫಿಕೇಶನ್ಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ನಗರಸಭೆ ಭೂಸ್ವಾಧೀನಕ್ಕೆ ಮಾತ್ರ ಮಂಜೂರಾತಿ ನೀಡಿ ಶೌಚಾಲಯದ ನಿರ್ಮಾಣಕ್ಕೆ ಮಾತ್ರ ಆಡಳಿತಾತ್ಮಕ ಅನುಮೋದನೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.<br /> <br /> ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಹಾಯಕ ಆಯುಕ್ತರಿಗೆ ನಗರಸಭೆ ಆಡಳಿತಾತ್ಮಕ ಅನುಮೋದನೆ ಪಡೆದ ಪ್ರತಿಯನ್ನು ಸಲ್ಲಿಸಲು ಸೂಚಿಸಿದ್ದರು. ಕಂದಾಯ ಕಾರ್ಯದರ್ಶಿಗಳ ಪತ್ರವನ್ನು ಆಧಾರವಿಟ್ಟುಕೊಂಡು ನಗರಸಭೆಗೆ ಅನೇಕ ಪತ್ರವ್ಯವಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.<br /> <br /> ಈ ಪತ್ರವ್ಯವಹಾರಗಳ ಬಗ್ಗೆ ನಗರಸಭೆ ಆಡಳಿತ ಮಂಡಳಿ ಅನುಮೋದನೆ ನೀಡಲಿಲ್ಲ. ಈ ಬಗ್ಗೆ ನವರತ್ನ ಯುವಕ ಸಂಘವು ಈ ಕಡತ ಅಸಿಂಧುಗೊಳ್ಳುವ ಮೊದಲೇ ಆಡಳಿತಾತ್ಮಕ ಮಂಜೂರಾತಿಗಾಗಿ ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಹಿರಿಯ ಸದಸ್ಯರಾದ ಜಯಣ್ಣ ಅವರಿಗೆ ಸಾಕಷ್ಟು ಬಾರಿ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.<br /> <br /> ವಾಸ್ತವಿಕವಾಗಿ ನಗರಸಭೆಯಿಂದ ಯಾವುದೇ ರೀತಿಯ ಪ್ರಸ್ತಾವನೆಗಳನ್ನು ಪೌರಾಡಳಿತ ನಿರ್ದೇಶನಾಲಯ ಸಲ್ಲಿಸಿರುವುದಿಲ್ಲ. ಇದರಿಂದ ಶೌಚಾಲಯದ ನಿರ್ಮಾಣ ಭೂಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ನಗರಸಭೆ ನೇರೆ ಹೊಣೆಯಾಗಿದೆ ಎಂದು ಹೇಳಿದ್ದಾರೆ.<br /> <br /> ಹರಿಜನವಾಡದ ನಿವಾಸಿಗಳು ಇದೇ 11ರಂದು ಸಭೆ ನಡೆಸಿ ನಂತರ ನಗರಸಭೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಬಾಪನಯ್ಯ ಭೂ ಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ನಗರಸಭೆಯ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದೆ ಎಂದು ನವರತ್ನ ಯುವಕ ಸಂಘದ ಗೌರವಾಧ್ಯಕ್ಷ ಕೆ.ಪಿ ಅನಿಲಕುಮಾರ, ಅಧ್ಯಕ್ಷ ಚಂದ್ರು ಭಂಡಾರಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಅವರು ಆರೋಪಿಸಿದ್ದಾರೆ. <br /> <br /> ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹರಿಜನವಾಡ ಪ್ರದೇಶದ ನಾಗರಿಕರು, ಅನೇಕ ವರ್ಷಗಳಿಂದ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಮಣಿದ ನಗರಸಭೆ ಈ ಪ್ರದೇಶದ ಜನರಿಗೆ ಶೌಚಾಲಯ ನಿರ್ಮಾಣದ ಉದ್ದೇಶದಿಂದ ಸರ್ವೆ ನಂಬರ್ 1,1/1 ಮತ್ತು1/2ರಲ್ಲಿ ಬರುವ ಒಟ್ಟು 1ಎಕರೆ 30ಗುಂಟೆ ಪ್ರದೇಶದ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನಗರಸಭೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂದು ವಿವರಿಸಿದ್ದಾರೆ.<br /> <br /> 2010ರಲ್ಲಿ ನೋಟಿಫಿಕೇಶನ್ ಜಾರಿಗೊಳಿಸಿ,6-1ರ ನೋಟಿಫಿಕೇಶನ್ಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ನಗರಸಭೆ ಭೂಸ್ವಾಧೀನಕ್ಕೆ ಮಾತ್ರ ಮಂಜೂರಾತಿ ನೀಡಿ ಶೌಚಾಲಯದ ನಿರ್ಮಾಣಕ್ಕೆ ಮಾತ್ರ ಆಡಳಿತಾತ್ಮಕ ಅನುಮೋದನೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.<br /> <br /> ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಹಾಯಕ ಆಯುಕ್ತರಿಗೆ ನಗರಸಭೆ ಆಡಳಿತಾತ್ಮಕ ಅನುಮೋದನೆ ಪಡೆದ ಪ್ರತಿಯನ್ನು ಸಲ್ಲಿಸಲು ಸೂಚಿಸಿದ್ದರು. ಕಂದಾಯ ಕಾರ್ಯದರ್ಶಿಗಳ ಪತ್ರವನ್ನು ಆಧಾರವಿಟ್ಟುಕೊಂಡು ನಗರಸಭೆಗೆ ಅನೇಕ ಪತ್ರವ್ಯವಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.<br /> <br /> ಈ ಪತ್ರವ್ಯವಹಾರಗಳ ಬಗ್ಗೆ ನಗರಸಭೆ ಆಡಳಿತ ಮಂಡಳಿ ಅನುಮೋದನೆ ನೀಡಲಿಲ್ಲ. ಈ ಬಗ್ಗೆ ನವರತ್ನ ಯುವಕ ಸಂಘವು ಈ ಕಡತ ಅಸಿಂಧುಗೊಳ್ಳುವ ಮೊದಲೇ ಆಡಳಿತಾತ್ಮಕ ಮಂಜೂರಾತಿಗಾಗಿ ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಹಿರಿಯ ಸದಸ್ಯರಾದ ಜಯಣ್ಣ ಅವರಿಗೆ ಸಾಕಷ್ಟು ಬಾರಿ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.<br /> <br /> ವಾಸ್ತವಿಕವಾಗಿ ನಗರಸಭೆಯಿಂದ ಯಾವುದೇ ರೀತಿಯ ಪ್ರಸ್ತಾವನೆಗಳನ್ನು ಪೌರಾಡಳಿತ ನಿರ್ದೇಶನಾಲಯ ಸಲ್ಲಿಸಿರುವುದಿಲ್ಲ. ಇದರಿಂದ ಶೌಚಾಲಯದ ನಿರ್ಮಾಣ ಭೂಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ನಗರಸಭೆ ನೇರೆ ಹೊಣೆಯಾಗಿದೆ ಎಂದು ಹೇಳಿದ್ದಾರೆ.<br /> <br /> ಹರಿಜನವಾಡದ ನಿವಾಸಿಗಳು ಇದೇ 11ರಂದು ಸಭೆ ನಡೆಸಿ ನಂತರ ನಗರಸಭೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>