ಮೂರು ದಿನಗಳ ರಾಮೋತ್ಸವದಲ್ಲಿ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಹಾಜರಿರುತ್ತಿದ್ದರು. ರಾಮೋತ್ಸವ, ಮಹಾ ರಥೋತ್ಸವ, ಅದ್ದೂರಿಯಾಗಿ ಶ್ರೀರಾಮನ ಗುಣಗಾನ ಮಾಡುವ ಹಬ್ಬದಂತೆ ನಡೆಸಲು ಮಠ ಅಣಿಯಾಗಿತ್ತು. ರಾಮ ನವಮಿಗೆ ಎರಡು ದಿನ ಮುನ್ನವೇ ರಾಮೋತ್ಸವ ಆರಂಭವಾಗುವುದು ವಾಡಿಕೆ. ರಾಮ ತಾರಕ ಯಾಗ, ಶ್ರೀರಾಮ ಪಟ್ಟಾಭೀಷೇಕ, ಸೀತಾ ಕಲ್ಯಾಣ, ರಾವಣ ದಹನ, ಅಖಂಡ ಭಜನೆ ಮತ್ತಿತರ ಕಾರ್ಯಕ್ರಮ ನಡೆಯುವುದು ಇಲ್ಲಿನ ವಿಶೇಷ. ಆದರೆ ಈ ಎಲ್ಲ ಸಮಾರಂಭಕ್ಕೂ ಕೊರೊನಾ ಕರಿ ನೆರಳು ಬೀರಿದ್ದರಿಂದ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ರಾಮೋತ್ಸವವನ್ನು ನಡೆಸದೆ ಇರಲು ತೀರ್ಮಾನಿಸಿದ್ದಾರೆ.