ರಾಮನಗರ ತಾಲ್ಲೂಕಿನಲ್ಲಿ ಒಂದೇ ದಿನ 20 ಮಂದಿಯಲ್ಲಿ ಸೋಂಕು ಕಂಡುಬಂದಿರುವುದು ಜನರ ಆತಂಕ ಹೆಚ್ಚಿಸಿದೆ. ಚನ್ನಪಟ್ಟಣದಲ್ಲಿ 4, ಕನಕಪುರ 2, ಮಾಗಡಿಯಲ್ಲಿ 8 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ462ಕ್ಕೆ ಏರಿಕೆಯಾಗಿದೆ. ಈ ಪೈಕಿ ಕನಕಪುರ 94, ಮಾಗಡಿ 151, ಚನ್ನಪಟ್ಟಣ 87 ಮತ್ತು ರಾಮನಗರದ 130 ಪ್ರಕರಣಗಳು ಸೇರಿವೆ. 294 ಜನರು ಗುಣಮುಖರಾಗಿದ್ದರೆ, ಇನ್ನೂ 159 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.