ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ನಡೆದಿದೆ. ಮಕ್ಕಳ ಪೋಷಕರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗುತ್ತಿದೆ. ತಿಂಗಳ ಹಿಂದಷ್ಟೇ ಇದೇ ಬಾಲಮಂದಿರದಿಂದ ಇಬ್ಬರು ನಾಪತ್ತೆಯಾಗಿದ್ದು, ಮೂರು ದಿನದ ಬಳಿಕ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಾಲಮಂದಿರವನ್ನು ವಂದಾರಗುಪ್ಪೆಯಲ್ಲಿನ ಖಾಸಗಿ ಕಟ್ಟಡದಿಂದ ಐಜೂರಿನ ಮಲ್ಲೇಶ್ವರ ಬಡಾವಣೆಯ ಹಳೆಯ ಖಾಸಗಿ ಕಲ್ಯಾಣಮಂಟಪವೊಂದಕ್ಕೆ ವಾರದ ಹಿಂದಷ್ಟೇ ಸ್ಥಳಾಂತರ ಮಾಡಲಾಗಿತ್ತು.