<p><strong>ಚನ್ನಪಟ್ಟಣ:</strong> ಚನ್ನಪಟ್ಟಣ ಉಪ ಚುನಾವಣೆ ಕಣದಲ್ಲಿ ಗಣೇಶನ ರಾಜಕಾರಣ ಆರಂಭವಾಗಿದೆ!</p>.<p>ಉಪ ಚುನಾವಣೆಗೂ ಮುನ್ನವೇ ಹತ್ತು, ಹಲವು ಗಿಮಿಕ್ಗಳಿಗೆ ಸಾಕ್ಷಿಯಾಗುತ್ತಿರುವ ಚನ್ನಪಟ್ಟಣದ ಮತದಾರರ ಓಲೈಕೆಗೆ ಮೂರು ಪ್ರಮುಖ ಪಕ್ಷಗಳ ನಾಯಕರು ಮತದಾರರ ಹಲವು ಮಾರ್ಗ ಕಂಡುಕೊಂಡಿದ್ದಾರೆ. </p>.<p>ಒಂದೆಡೆ ಕಾಂಗ್ರೆಸ್ ಪಕ್ಷ ಜನಸ್ಪಂದನ, ಉದ್ಯೋಗ ಮೇಳದ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿದ್ದರೆ, ಮೈತ್ರಿ ಟಿಕೆಟ್ ಆಕಾಂಕ್ಷಿಗಳಾದ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ನ ಎಚ್.ಸಿ. ಜಯಮುತ್ತು ಗೌರಿ ಗಣೇಶ ಹಬ್ಬಕ್ಕೆ ಸಾವಿರಾರು ಗಣೇಶ ಮೂರ್ತಿ ಹಂಚಲು ಮುಂದಾಗಿದ್ದಾರೆ.</p>.<p>ಪಕ್ಷದ ಟಿಕೆಟ್ ಸಿಕ್ಕರೂ ಸರಿಯೇ, ಸಿಗದಿದ್ದರೂ ಸರಿಯೇ ಚುನಾವಣೆಗೆ ಸ್ಪರ್ಧಿಸಿಯೇ ತೀರುತ್ತೇನೆ ಎಂದು ತೊಡೆ ತಟ್ಟಿರುವ ಯೋಗೇಶ್ವರ್ ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಳ್ಳಲು ಬೇಕಾದ ಎಲ್ಲಾ ಮಾರ್ಗ ಅನುಸರಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದಂದು ಸಾವಿರ ಗಣೇಶ ಮೂರ್ತಿ ಹಂಚಲು ಮುಂದಾಗಿದ್ದಾರೆ.</p>.<p>ಎರಡು ಬಾರಿ ಗೆದ್ದಿರುವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರವನ್ನು ಜೆಡಿಎಸ್ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯತ್ತಾರೆ ಎಂಬ ಸುದ್ದಿ ಇದೆ. ನಿಖಿಲ್ ಕಣಕ್ಕಿಳಿಯದಿದ್ದರೆ ತಮಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಜಯಮುತ್ತು ಇದ್ದಾರೆ.<br><br> ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿರುವ ಜಯಮುತ್ತು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ವರ್ಷ 1001 ಗಣೇಶ ಮೂರ್ತಿಗಳನ್ನು ಹಂಚಲು ನೋಂದಣಿ ಆರಂಭಿಸಿದ್ದಾರೆ.</p>.<p>ಜಯಮುತ್ತು ಉಚಿತವಾಗಿ ಗಣೇಶ ಮೂರ್ತಿ ಹಂಚಿಕೆಗೆ ಪ್ರಕಟಣೆ ಹೊರಡಿಸಿದ್ದೆ ತಡ ಯೋಗೇಶ್ವರ್ ಸಹ ಸಾವಿರ ಗಣೇಶ ಮೂರ್ತಿ ಹಂಚಿಕೆಗೆ ಪ್ರಕಟಣೆ ಹೊರಡಿಸಿ, ನೋಂದಣಿ ಆರಂಭಿಸಿದ್ದಾರೆ.</p>.<p>ಯೋಗೇಶ್ವರ್ ಅವರು 2022ರಲ್ಲಿ ಒಮ್ಮೆ 500ಕ್ಕೂ ಹೆಚ್ಚು ಗಣೇಶ ಮೂರ್ತಿ ಹಂಚಿದ್ದರು. ಆದರೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋಲುಂಡ ಬಳಿಕ ಗಣೇಶ ಉತ್ಸವ ಬಂದ ಕಾರಣ ಆ ವರ್ಷ ಮೂರ್ತಿ ಹಂಚಿರಲಿಲ್ಲ. </p>.<p>ಈ ಇಬ್ಬರೂ ಸೇರಿ ತಾಲ್ಲೂಕಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಘ, ಸಂಸ್ಥೆಗಳು ಪ್ರತಿಷ್ಠಾಪಿಸಲು ಒಟ್ಟು 2001 ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದಾರೆ. ತಾಲ್ಲೂಕಿನ ಪ್ರಮುಖ ಪಟ್ಟಣ ಹಾಗೂ ಸಣ್ಣ ಪುಟ್ಟ ಗ್ರಾಮ ಸೇರಿಸಿದರೂ ಒಟ್ಟು 300 ಗಣೇಶ ಮೂರ್ತಿಗಳು ಸಾಕಾಗುತ್ತಿದ್ದವು.</p>.<p>ಈ ಬಾರಿ 2001 ಗಣೇಶ ಮೂರ್ತಿ ಉಚಿತವಾಗಿ ಸಿಗುತ್ತಿರುವ ಕಾರಣ ತಾಲ್ಲೂಕಿನ ಗಲ್ಲಿ,ಗಲ್ಲಿಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ಯುವಕರು ಮುಂದಾಗುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ಚನ್ನಪಟ್ಟಣ ಉಪ ಚುನಾವಣೆ ಕಣದಲ್ಲಿ ಗಣೇಶನ ರಾಜಕಾರಣ ಆರಂಭವಾಗಿದೆ!</p>.<p>ಉಪ ಚುನಾವಣೆಗೂ ಮುನ್ನವೇ ಹತ್ತು, ಹಲವು ಗಿಮಿಕ್ಗಳಿಗೆ ಸಾಕ್ಷಿಯಾಗುತ್ತಿರುವ ಚನ್ನಪಟ್ಟಣದ ಮತದಾರರ ಓಲೈಕೆಗೆ ಮೂರು ಪ್ರಮುಖ ಪಕ್ಷಗಳ ನಾಯಕರು ಮತದಾರರ ಹಲವು ಮಾರ್ಗ ಕಂಡುಕೊಂಡಿದ್ದಾರೆ. </p>.<p>ಒಂದೆಡೆ ಕಾಂಗ್ರೆಸ್ ಪಕ್ಷ ಜನಸ್ಪಂದನ, ಉದ್ಯೋಗ ಮೇಳದ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿದ್ದರೆ, ಮೈತ್ರಿ ಟಿಕೆಟ್ ಆಕಾಂಕ್ಷಿಗಳಾದ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ನ ಎಚ್.ಸಿ. ಜಯಮುತ್ತು ಗೌರಿ ಗಣೇಶ ಹಬ್ಬಕ್ಕೆ ಸಾವಿರಾರು ಗಣೇಶ ಮೂರ್ತಿ ಹಂಚಲು ಮುಂದಾಗಿದ್ದಾರೆ.</p>.<p>ಪಕ್ಷದ ಟಿಕೆಟ್ ಸಿಕ್ಕರೂ ಸರಿಯೇ, ಸಿಗದಿದ್ದರೂ ಸರಿಯೇ ಚುನಾವಣೆಗೆ ಸ್ಪರ್ಧಿಸಿಯೇ ತೀರುತ್ತೇನೆ ಎಂದು ತೊಡೆ ತಟ್ಟಿರುವ ಯೋಗೇಶ್ವರ್ ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಳ್ಳಲು ಬೇಕಾದ ಎಲ್ಲಾ ಮಾರ್ಗ ಅನುಸರಿಸುತ್ತಿದ್ದಾರೆ. ಗೌರಿ ಗಣೇಶ ಹಬ್ಬದಂದು ಸಾವಿರ ಗಣೇಶ ಮೂರ್ತಿ ಹಂಚಲು ಮುಂದಾಗಿದ್ದಾರೆ.</p>.<p>ಎರಡು ಬಾರಿ ಗೆದ್ದಿರುವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರವನ್ನು ಜೆಡಿಎಸ್ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯತ್ತಾರೆ ಎಂಬ ಸುದ್ದಿ ಇದೆ. ನಿಖಿಲ್ ಕಣಕ್ಕಿಳಿಯದಿದ್ದರೆ ತಮಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಜಯಮುತ್ತು ಇದ್ದಾರೆ.<br><br> ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿರುವ ಜಯಮುತ್ತು ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ವರ್ಷ 1001 ಗಣೇಶ ಮೂರ್ತಿಗಳನ್ನು ಹಂಚಲು ನೋಂದಣಿ ಆರಂಭಿಸಿದ್ದಾರೆ.</p>.<p>ಜಯಮುತ್ತು ಉಚಿತವಾಗಿ ಗಣೇಶ ಮೂರ್ತಿ ಹಂಚಿಕೆಗೆ ಪ್ರಕಟಣೆ ಹೊರಡಿಸಿದ್ದೆ ತಡ ಯೋಗೇಶ್ವರ್ ಸಹ ಸಾವಿರ ಗಣೇಶ ಮೂರ್ತಿ ಹಂಚಿಕೆಗೆ ಪ್ರಕಟಣೆ ಹೊರಡಿಸಿ, ನೋಂದಣಿ ಆರಂಭಿಸಿದ್ದಾರೆ.</p>.<p>ಯೋಗೇಶ್ವರ್ ಅವರು 2022ರಲ್ಲಿ ಒಮ್ಮೆ 500ಕ್ಕೂ ಹೆಚ್ಚು ಗಣೇಶ ಮೂರ್ತಿ ಹಂಚಿದ್ದರು. ಆದರೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋಲುಂಡ ಬಳಿಕ ಗಣೇಶ ಉತ್ಸವ ಬಂದ ಕಾರಣ ಆ ವರ್ಷ ಮೂರ್ತಿ ಹಂಚಿರಲಿಲ್ಲ. </p>.<p>ಈ ಇಬ್ಬರೂ ಸೇರಿ ತಾಲ್ಲೂಕಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಘ, ಸಂಸ್ಥೆಗಳು ಪ್ರತಿಷ್ಠಾಪಿಸಲು ಒಟ್ಟು 2001 ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದಾರೆ. ತಾಲ್ಲೂಕಿನ ಪ್ರಮುಖ ಪಟ್ಟಣ ಹಾಗೂ ಸಣ್ಣ ಪುಟ್ಟ ಗ್ರಾಮ ಸೇರಿಸಿದರೂ ಒಟ್ಟು 300 ಗಣೇಶ ಮೂರ್ತಿಗಳು ಸಾಕಾಗುತ್ತಿದ್ದವು.</p>.<p>ಈ ಬಾರಿ 2001 ಗಣೇಶ ಮೂರ್ತಿ ಉಚಿತವಾಗಿ ಸಿಗುತ್ತಿರುವ ಕಾರಣ ತಾಲ್ಲೂಕಿನ ಗಲ್ಲಿ,ಗಲ್ಲಿಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ಯುವಕರು ಮುಂದಾಗುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>