<p><strong>ರಾಮನಗರ:</strong> ಜೆಡಿಎಸ್ ಹಿಡಿತದಲ್ಲಿದ್ದ ಚನ್ನಪಟ್ಟಣ ನಗರಸಭೆಯನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಹೂಡಿದ್ದ ತಂತ್ರ ಫಲಿಸಿದೆ. ಲೋಕಸಭೆ ಚುನಾವಣೆಗೆ ಮುಂಚೆ ಜೆಡಿಎಸ್ ತೊರೆದು ‘ಕೈ’ ಹಿಡಿದಿದ್ದ 9 ಸದಸ್ಯರ ಜೊತೆಗೆ, ಇನ್ನೂ ನಾಲ್ವರು ದಳವನ್ನು ತೊರೆದಿದ್ದಾರೆ. ಅದರೊಂದಿಗೆ 13 ಸದಸ್ಯರನ್ನು ತನ್ನತ್ತ ಸೆಳೆದಿರುವ ಕಾಂಗ್ರೆಸ್, ತನ್ನ ಬಲವನ್ನು 20ಕ್ಕೆ ಏರಿಸಿಕೊಂಡಿದೆ.</p>.<p>31 ಸದಸ್ಯರ ಬಲದ ನಗರಸಭೆಯಲ್ಲಿ ಜೆಡಿಎಸ್ನ 16, ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 7 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಇದೀಗ ಜೆಡಿಎಸ್ನ ಒಟ್ಟು ಬಲದ ಪೈಕಿ 2/3ರಷ್ಟು ಅಂದರೆ, 13 ಮಂದಿ ಪಕ್ಷ ತೊರೆದಿದ್ದಾರೆ. ಅವರೊಂದಿಗೆ ಪಕ್ಷೇತರ ಸದಸ್ಯೆ ಉಮಾ ಅವರನ್ನು ಸಹ ಕಾಂಗ್ರೆಸ್ನಲ್ಲಿ ವಿಲೀನ ಮಾಡಿ, ಪಕ್ಷದ ಸದಸ್ಯರು ಎಂದು ಪರಿಗಣಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಕೋರಿದ್ದರು.</p>.<p>ಅದರಂತೆ, ಕರ್ನಾಟಕ ಸ್ಥಳೀಯ ಸಂಸ್ಥೆಗಳು (ಪಕ್ಷಾಂತರ ನಿಷೇಧ) ಅಧಿನಿಯಮ–1987ರ ಕಲಂ 3(ಬಿ)(2ಎ) ಅಡಿ, ಜೆಡಿಎಸ್ ಪಕ್ಷದ ಮೂಲಕ ಹಾಗೂ ಪಕ್ಷೇತರರಾಗಿ ಚನ್ನಪಟ್ಟಣ ನಗರಸಭೆಗೆ ಆಯ್ಕೆಯಾಗಿರುವ 2/3ರಷ್ಟು ಮೀರಿದ ಸದಸ್ಯರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೇರೆಗೆ, ಪಕ್ಷಕ್ಕೆ ವಿಲೀನತೆ ಎಂದು ಪರಿಗಣಿಸಲಾಗಿದೆ ಎಂದು ಚುನಾವಣಾಧಿಕಾರಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಜೆಡಿಎಸ್ ಹಿಡಿತದಲ್ಲಿದ್ದ ಚನ್ನಪಟ್ಟಣ ನಗರಸಭೆಯನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಹೂಡಿದ್ದ ತಂತ್ರ ಫಲಿಸಿದೆ. ಲೋಕಸಭೆ ಚುನಾವಣೆಗೆ ಮುಂಚೆ ಜೆಡಿಎಸ್ ತೊರೆದು ‘ಕೈ’ ಹಿಡಿದಿದ್ದ 9 ಸದಸ್ಯರ ಜೊತೆಗೆ, ಇನ್ನೂ ನಾಲ್ವರು ದಳವನ್ನು ತೊರೆದಿದ್ದಾರೆ. ಅದರೊಂದಿಗೆ 13 ಸದಸ್ಯರನ್ನು ತನ್ನತ್ತ ಸೆಳೆದಿರುವ ಕಾಂಗ್ರೆಸ್, ತನ್ನ ಬಲವನ್ನು 20ಕ್ಕೆ ಏರಿಸಿಕೊಂಡಿದೆ.</p>.<p>31 ಸದಸ್ಯರ ಬಲದ ನಗರಸಭೆಯಲ್ಲಿ ಜೆಡಿಎಸ್ನ 16, ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ 7 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಇದೀಗ ಜೆಡಿಎಸ್ನ ಒಟ್ಟು ಬಲದ ಪೈಕಿ 2/3ರಷ್ಟು ಅಂದರೆ, 13 ಮಂದಿ ಪಕ್ಷ ತೊರೆದಿದ್ದಾರೆ. ಅವರೊಂದಿಗೆ ಪಕ್ಷೇತರ ಸದಸ್ಯೆ ಉಮಾ ಅವರನ್ನು ಸಹ ಕಾಂಗ್ರೆಸ್ನಲ್ಲಿ ವಿಲೀನ ಮಾಡಿ, ಪಕ್ಷದ ಸದಸ್ಯರು ಎಂದು ಪರಿಗಣಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಕೋರಿದ್ದರು.</p>.<p>ಅದರಂತೆ, ಕರ್ನಾಟಕ ಸ್ಥಳೀಯ ಸಂಸ್ಥೆಗಳು (ಪಕ್ಷಾಂತರ ನಿಷೇಧ) ಅಧಿನಿಯಮ–1987ರ ಕಲಂ 3(ಬಿ)(2ಎ) ಅಡಿ, ಜೆಡಿಎಸ್ ಪಕ್ಷದ ಮೂಲಕ ಹಾಗೂ ಪಕ್ಷೇತರರಾಗಿ ಚನ್ನಪಟ್ಟಣ ನಗರಸಭೆಗೆ ಆಯ್ಕೆಯಾಗಿರುವ 2/3ರಷ್ಟು ಮೀರಿದ ಸದಸ್ಯರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೇರೆಗೆ, ಪಕ್ಷಕ್ಕೆ ವಿಲೀನತೆ ಎಂದು ಪರಿಗಣಿಸಲಾಗಿದೆ ಎಂದು ಚುನಾವಣಾಧಿಕಾರಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>