<p><strong>ಚನ್ನಪಟ್ಟಣ:</strong> ತಾಲ್ಲೂಕಿನ ರಾಂಪುರ ಗ್ರಾಮದ ತ್ರಿಪುರ ಸುಂದರಿ (ಮೂಗೂರಮ್ಮ) ಅಮ್ಮನ 40ನೇ ವರ್ಷದ ಕರಗ ಮಹೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.</p>.<p>ಪ್ರತಿ ವರ್ಷವೂ ಮೂಗೂರಮ್ಮನ ಕರಗ ಉತ್ಸವದಲ್ಲಿ ಗ್ರಾಮದ ಮಹಿಳೆಯೊಬ್ಬರು ದೇವಿಯ ಕರಗ ಹೊತ್ತು ಮುನ್ನಡೆಯುವುದು ವಾಡಿಕೆ. ಅದರಂತೆ ಈ ಬಾರಿ ಗ್ರಾಮದ ಆರ್.ವಿ. ಅಚಲ ಕಳಸ ಹೊತ್ತು ಹೆಜ್ಜೆ ಹಾಕಿದರು.</p>.<p>ಒಕ್ಕಲಿನ ಮಹಿಳೆಯರು ತಲೆಯ ಮೇಲೆ ಬಾಳೆಹಣ್ಣು, ಕಾಯಿ, ಬೆಲ್ಲ, ಅಕ್ಕಿ, ಬಳೆ, ಸೀರೆ, ಅರಿಶಿನ ಕುಂಕುಮ ತುಂಬಿದ ಬುಟ್ಟಿ ಹೊತ್ತು ಕರಗ ಉತ್ಸವದ ಹಿಂದೆ ಹೆಜ್ಜೆ ಹಾಕಿದರು.</p>.<p>ಹುಲಿ ವೇಷ, ಗಾರುಡಿ ಗೊಂಬೆ, ಸೋಮನ ಕುಣಿತ, ಕೀಲು ಕುದುರೆ, ಕಹಳೆ ಹಾಗೂ ಮಂಗಳ ವಾದ್ಯಗಳೊಂದಿಗೆ ಕರಗ ಉತ್ಸವ ಗ್ರಾಮದ ಬೀದಿಗಳಲ್ಲಿ ಸಂಚರಿಸಿತು. ಉತ್ಸವದಲ್ಲಿ ಕವಣಾಪುರ ಗ್ರಾಮದ ಬಸವಣ್ಣ ದೇವರು ಪ್ರಮುಖ ಆಕರ್ಷಣೆಯಾಗಿತ್ತು.</p>.<p>ಧರ್ಮದರ್ಶಿ ಆರ್.ವಿ. ವೆಂಕಟೇಶಯ್ಯ, ರಾಂಪುರ ರಾಜಣ್ಣ, ನಿವೃತ್ತ ಅಧೀನ ಕಾರ್ಯದರ್ಶಿ ಶಿವಮಲವಯ್ಯ, ನಿವೃತ್ತ ರೆವಿನ್ಯೂ ಇನ್ ಸ್ಪೆಕ್ಟರ್ ಆರ್.ಎಸ್. ಕೃಷ್ಣಪ್ಪ, ವಿಜಯ್ ರಾಂಪುರ, ಆರ್.ವಿ. ವೇಣು, ಡಾ.ದಿನೇಶ್ ಹಾಗೂ ರವಿ ದೀಕ್ಷಿತ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ತಾಲ್ಲೂಕಿನ ರಾಂಪುರ ಗ್ರಾಮದ ತ್ರಿಪುರ ಸುಂದರಿ (ಮೂಗೂರಮ್ಮ) ಅಮ್ಮನ 40ನೇ ವರ್ಷದ ಕರಗ ಮಹೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.</p>.<p>ಪ್ರತಿ ವರ್ಷವೂ ಮೂಗೂರಮ್ಮನ ಕರಗ ಉತ್ಸವದಲ್ಲಿ ಗ್ರಾಮದ ಮಹಿಳೆಯೊಬ್ಬರು ದೇವಿಯ ಕರಗ ಹೊತ್ತು ಮುನ್ನಡೆಯುವುದು ವಾಡಿಕೆ. ಅದರಂತೆ ಈ ಬಾರಿ ಗ್ರಾಮದ ಆರ್.ವಿ. ಅಚಲ ಕಳಸ ಹೊತ್ತು ಹೆಜ್ಜೆ ಹಾಕಿದರು.</p>.<p>ಒಕ್ಕಲಿನ ಮಹಿಳೆಯರು ತಲೆಯ ಮೇಲೆ ಬಾಳೆಹಣ್ಣು, ಕಾಯಿ, ಬೆಲ್ಲ, ಅಕ್ಕಿ, ಬಳೆ, ಸೀರೆ, ಅರಿಶಿನ ಕುಂಕುಮ ತುಂಬಿದ ಬುಟ್ಟಿ ಹೊತ್ತು ಕರಗ ಉತ್ಸವದ ಹಿಂದೆ ಹೆಜ್ಜೆ ಹಾಕಿದರು.</p>.<p>ಹುಲಿ ವೇಷ, ಗಾರುಡಿ ಗೊಂಬೆ, ಸೋಮನ ಕುಣಿತ, ಕೀಲು ಕುದುರೆ, ಕಹಳೆ ಹಾಗೂ ಮಂಗಳ ವಾದ್ಯಗಳೊಂದಿಗೆ ಕರಗ ಉತ್ಸವ ಗ್ರಾಮದ ಬೀದಿಗಳಲ್ಲಿ ಸಂಚರಿಸಿತು. ಉತ್ಸವದಲ್ಲಿ ಕವಣಾಪುರ ಗ್ರಾಮದ ಬಸವಣ್ಣ ದೇವರು ಪ್ರಮುಖ ಆಕರ್ಷಣೆಯಾಗಿತ್ತು.</p>.<p>ಧರ್ಮದರ್ಶಿ ಆರ್.ವಿ. ವೆಂಕಟೇಶಯ್ಯ, ರಾಂಪುರ ರಾಜಣ್ಣ, ನಿವೃತ್ತ ಅಧೀನ ಕಾರ್ಯದರ್ಶಿ ಶಿವಮಲವಯ್ಯ, ನಿವೃತ್ತ ರೆವಿನ್ಯೂ ಇನ್ ಸ್ಪೆಕ್ಟರ್ ಆರ್.ಎಸ್. ಕೃಷ್ಣಪ್ಪ, ವಿಜಯ್ ರಾಂಪುರ, ಆರ್.ವಿ. ವೇಣು, ಡಾ.ದಿನೇಶ್ ಹಾಗೂ ರವಿ ದೀಕ್ಷಿತ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>