<p><strong>ರಾಮನಗರ:</strong> ಇಲ್ಲಿನ ಹಳೇ ಬಸ್ ನಿಲ್ದಾಣದ ಸಮೀಪ ಅರ್ಕಾವತಿ ನದಿ ದಂಡೆಯ ಮನೆಯೊಂದರ ಬಳಿ ಇಡಲಾಗಿದ್ದ ಬೋನಿನಲ್ಲಿ ಭಾನುವಾರ ತಡರಾತ್ರಿ ಚಿರತೆ ಸೆರೆಯಾಯಿತು.</p>.<p>ತಡರಾತ್ರಿ 2.30ರ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತು. ಅದರ ಕೂಗಾಟ ಕೇಳಿ ಸ್ಥಳೀಯರು ಎಚ್ಚೆತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸೋಮವಾರ ಮುಂಜಾನೆ 4ರ ಸುಮಾರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆ ಸಮೇತ ಬೋನನ್ನು ಕೊಂಡೊಯ್ದರು.<br />ಎರಡು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು. ಜನರ ಮನವಿ ಮೇರೆಗೆ ಸ್ಥಳದಲ್ಲಿ ಮತ್ತೆರಡು ಬೋನುಗಳನ್ನು ಇಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ದಾಳೇಶ್ ತಿಳಿಸಿದರು.</p>.<p>ನಿಟ್ಟುಸಿರು ಬಿಟ್ಟ ಜನತೆ: ಅರ್ಕಾವತಿ ನದಿ ದಡದಲ್ಲಿ ಕಳೆದ 15 ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು.</p>.<p>ಈಚೆಗೆ ರಾಘವೇಂದ್ರ ಕಾಲೊನಿಯಲ್ಲಿನ ಮನೆಯೊಂದಕ್ಕೆ ನುಗ್ಗಿ ಸಾಕುನಾಯಿಯನ್ನು ಕೊಂದಿದ್ದ ಚಿರತೆ, ಮತ್ತೆ ದಾಳಿ ಮಾಡಿ ಬೀದಿ ನಾಯಿಗಳನ್ನು ಹೊತ್ತೊಯ್ದಿತ್ತು. ರಾತ್ರಿ ಹೊತ್ತು ಮನೆಯ ಮಹಡಿ ಮೇಲೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.</p>.<p>ರಾಮದೇವರ ಬೆಟ್ಟದ ಬಳಿಯಿಂದ ಅರ್ಕಾವತಿ ನದಿ ಪ್ರದೇಶಕ್ಕೆ ಬಂದಿರುವ ಚಿರತೆಗಳು ಅಲ್ಲಿನ ಜೊಂಡು ಹುಲ್ಲಿನ ನಡುವೆ ಆಶ್ರಯ ಪಡೆದಿವೆ. ನಗರದ ಒಳಗೇ ನುಗ್ಗಿ ದಾಳಿ ನಡೆಸುತ್ತಿವೆ. ಹೀಗಾಗಿ ಅರ್ಕಾವತಿ ನದಿ ದಡವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಇಲ್ಲಿನ ಹಳೇ ಬಸ್ ನಿಲ್ದಾಣದ ಸಮೀಪ ಅರ್ಕಾವತಿ ನದಿ ದಂಡೆಯ ಮನೆಯೊಂದರ ಬಳಿ ಇಡಲಾಗಿದ್ದ ಬೋನಿನಲ್ಲಿ ಭಾನುವಾರ ತಡರಾತ್ರಿ ಚಿರತೆ ಸೆರೆಯಾಯಿತು.</p>.<p>ತಡರಾತ್ರಿ 2.30ರ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತು. ಅದರ ಕೂಗಾಟ ಕೇಳಿ ಸ್ಥಳೀಯರು ಎಚ್ಚೆತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸೋಮವಾರ ಮುಂಜಾನೆ 4ರ ಸುಮಾರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆ ಸಮೇತ ಬೋನನ್ನು ಕೊಂಡೊಯ್ದರು.<br />ಎರಡು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು. ಜನರ ಮನವಿ ಮೇರೆಗೆ ಸ್ಥಳದಲ್ಲಿ ಮತ್ತೆರಡು ಬೋನುಗಳನ್ನು ಇಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ದಾಳೇಶ್ ತಿಳಿಸಿದರು.</p>.<p>ನಿಟ್ಟುಸಿರು ಬಿಟ್ಟ ಜನತೆ: ಅರ್ಕಾವತಿ ನದಿ ದಡದಲ್ಲಿ ಕಳೆದ 15 ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು.</p>.<p>ಈಚೆಗೆ ರಾಘವೇಂದ್ರ ಕಾಲೊನಿಯಲ್ಲಿನ ಮನೆಯೊಂದಕ್ಕೆ ನುಗ್ಗಿ ಸಾಕುನಾಯಿಯನ್ನು ಕೊಂದಿದ್ದ ಚಿರತೆ, ಮತ್ತೆ ದಾಳಿ ಮಾಡಿ ಬೀದಿ ನಾಯಿಗಳನ್ನು ಹೊತ್ತೊಯ್ದಿತ್ತು. ರಾತ್ರಿ ಹೊತ್ತು ಮನೆಯ ಮಹಡಿ ಮೇಲೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.</p>.<p>ರಾಮದೇವರ ಬೆಟ್ಟದ ಬಳಿಯಿಂದ ಅರ್ಕಾವತಿ ನದಿ ಪ್ರದೇಶಕ್ಕೆ ಬಂದಿರುವ ಚಿರತೆಗಳು ಅಲ್ಲಿನ ಜೊಂಡು ಹುಲ್ಲಿನ ನಡುವೆ ಆಶ್ರಯ ಪಡೆದಿವೆ. ನಗರದ ಒಳಗೇ ನುಗ್ಗಿ ದಾಳಿ ನಡೆಸುತ್ತಿವೆ. ಹೀಗಾಗಿ ಅರ್ಕಾವತಿ ನದಿ ದಡವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>